Select Your Language

Notifications

webdunia
webdunia
webdunia
webdunia

ಕನ್ನಡ ಸಿನಿಮಾಕ್ಕೆ ಹಾಡುತ್ತಾರಂತೆ 'ಕಬಾಲಿ' ಸಿಂಗರ್

ಕನ್ನಡ ಸಿನಿಮಾಕ್ಕೆ ಹಾಡುತ್ತಾರಂತೆ 'ಕಬಾಲಿ' ಸಿಂಗರ್
ಬೆಂಗಳೂರು , ಸೋಮವಾರ, 8 ಆಗಸ್ಟ್ 2016 (10:20 IST)
'ಕಬಾಲಿ' ಸಿನಿಮಾ ಎಲ್ಲೆಡೆ ಯಾವ ಮಟ್ಟಿಗೆ ಸದ್ದು ಮಾಡುತ್ತಿದೆ ಅನ್ನೋ ವಿಚಾರ ನಿಮಗೆಲ್ಲಾ ಗೊತ್ತೇ ಇದೆ. ಅದರಲ್ಲೂ ಕಬಾಲಿ ಸಿನಿಮಾದ ಆ ಹಾಡುಗಳು ಯುವಜನತೆಯ ಫೇವರೆಟ್ ಆಗಿ ಬಿಟ್ಟಿದೆ. ಅದರಲ್ಲೂ ನಿರುಪ್ಪಡಾ ಸಾಂಗ್ ಹಾಡಿರು  ಅರುಣ್ ರಾಜ್ ಕಾಮರಾಜ್ ಅವರು ಶೀಘ್ರದಲ್ಲೇ ಕನ್ನಡ ಹಾಡಿಗೆ ಧ್ವನಿಯಾಗಲಿದ್ದಾರೆ.


'ಕಬಾಲಿ' ಸಿನಿಮಾದ ನಿರುಪ್ಪುಡಾ ಸಾಂಗ್ ಹಾಡಿರುವ ಗಾಯಕ ಅರುಣ್ ರಾಜ್ ಕಾಮರಾಜ್ ಅವರು ಶೀಘ್ರದಲ್ಲೇ ಕನ್ನಡ ಹಾಡಿಗೆ ಧ್ವನಿಯಾಗಲಿದ್ದಾರೆ ಅರುಣ್ ಅರ್ಜುನ್ ಸರ್ಜಾ ಅವರು ಅಭಿನಯಿಸುತ್ತಿರುವ ವಿಸ್ಮಯ ಸಿನಿಮಾ ಟೈಟಲ್ ಸಾಂಗ್ ನ್ನು ಹಾಡಲಿದ್ದಾರಂತೆ.ಇನ್ನು ವಿಸ್ಮಯ ಸಿನಿಮಾಕ್ಕೆ ಸಂಗೀತ ಸಂಯೋಜಿಸುತ್ತಿರುವ ನವೀನ್ ಅವರು  ಅರುಣ್ ರಾಜ್ ಅವರಿಗೆ ತುಂಬಾನೇ ಪರಿಚಯವಂತೆ. 
 
ಹಾಗಾಗಿ ಅವರು ನನ್ನ ಸಿನಿಮಾದ ಹಾಡನ್ನು ಅರುಣ ಅವರಲ್ಲೇ ಹಾಡಿಸಿದ್ರೆ ಚೆನ್ನಾಗಿರುತ್ತೆ ಅಂತಾ ಹಾಡಿಸಲು ರೆಡಿಮಾಡಿಕೊಂಡಿದ್ದಾರಂತೆ.
 
ಇನ್ನು ವಿಸ್ಮಯ ಸಿನಿಮಾವನ್ನು ಅರುಣ್ ವೈದ್ಯನಾಥನ್ ಅವರು ನಿರ್ದೇಶನ ಮಾಡುತ್ತಿದ್ದಾರೆ.ಅಂದ್ಹಾಗೆ ವಿಸ್ಮಯ ಸಿನಿಮಾ ಕನ್ನಡ ಹಾಗೂ ತಮಿಳು ಎರಡು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಹಾಗಾಗಿ ಈ ಸಿನಿಮಾದ ಬಗ್ಗೆ ಸಿನಿಮಾ ತಂಡಕ್ಕೆ ಸಾಕಷ್ಟು ನಿರೀಕ್ಷೆಗಳಿವೆ. ಇನ್ನು ಅರುಣ್ ರಾಜ್ ಅವರ ಕನ್ನಡ ಹಾಡನ್ನು ಕೇಳಿಸಿಕೊಳ್ಳೋದಕ್ಕೆ ಅಭಿಮಾನಿಗಳು ಕೂಡ ಸಾಕಷ್ಟು ಕಾತುರರಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಆಲಿಯಾ ಭಟ್‌ಗೆ ಸೈನಿಕರ ಜತೆಗೆ ಕಾಲ ಕಳೆದಿದ್ದು ಮರೆಯಲಾಗದ ದಿನವಂತೆ