Select Your Language

Notifications

webdunia
webdunia
webdunia
webdunia

ಅಗತ್ಯಬಿದ್ದರೆ ವಿನೋದ್ ಖನ್ನಾಗೆ ಅಂಗಾಂಗ ದಾನಕ್ಕೆ ಸಿದ್ಧ: ಇರ್ಫಾನ್ ಖಾನ್

ಅಗತ್ಯಬಿದ್ದರೆ ವಿನೋದ್ ಖನ್ನಾಗೆ ಅಂಗಾಂಗ ದಾನಕ್ಕೆ ಸಿದ್ಧ: ಇರ್ಫಾನ್ ಖಾನ್
ಬೆಂಗಳೂರು , ಶುಕ್ರವಾರ, 7 ಏಪ್ರಿಲ್ 2017 (16:39 IST)
ಬಾಲಿವುಡ್`ನ ಹಿರಿಯ ನಟ ವಿನೋದ್ ಖನ್ನಾ ತೀವ್ರ ನಿರ್ಜಲೀಕರಣದಿಂದ ಬಳಲುತ್ತಿದ್ದು, ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಖನ್ನಾ ಅವರಿಗೆ ಕ್ಯಾನ್ಸರ್ ಕಾಡುತ್ತಿದೆ ಎಂದು ಹೇಳಲಾಗುತ್ತಿದ್ದು, ಸಂಪೂರ್ಣ ನಿಶಕ್ತರಾಗಿರುವ ಖನ್ನಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ನಟ ಇರ್ಫಾನ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ.

ವಿನೋದ್ ಖನ್ನಾ ಶೀಘ್ರ ಚೇತರಿಸಿಕೊಳ್ಳಬೇಕೆಂದು ಹಾರೈಸಿರುವ ಇರ್ಫಾನ್ ಖಾನ್, ಅಗತ್ಯ ಬಿದ್ದರೆ ಅವರಿಗಾಗಿ ನನ್ನ ದೇಹದ ಒಂದು ಅಂಗ ದಾನಕ್ಕೆ ಸಿದ್ಧ ಎಂದು ಘೋಷಿಸಿದ್ದಾರೆ. ಬಾಲಿವುಡ್ ಚಿತ್ರರಂಗದ ಮೋಸ್ಟ್ ಬ್ಯೂಟಿಫುಲ್ ನಟ ವಿನೋದ್ ಖನ್ನಾ ಎಂದು ಇರ್ಫಾನ್ ಹೇಳಿದ್ದಾರೆ.

ವಿನೋದ್ ಖನ್ನಾ ಮಗ ಮತ್ತು ಪತ್ನಿ ಸಹಾಯ ಪಡೆದು ಎದ್ದು ನಿಂತಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದ್ದು, ಮೂತ್ರಪಿಂಡ ಕ್ಯಾನ್ಸರ್`ಗೆ ತುತ್ತಾಗಿದ್ದಾರೆ ಎಂದು ಹೇಳಲಾಗಿದೆ. ಇದೇವೇಲೆ, ಖನ್ನಾ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆದಷ್ಟು ಬೇಗ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಖನ್ನಾ ಪುತ್ರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

64 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ