Select Your Language

Notifications

webdunia
webdunia
webdunia
webdunia

ಕುರುಕ್ಷೇತ್ರದ ಭೀಮನಾಗಿ ಆಯ್ಕೆಯಾಗಿದ್ದಾರೆ ಡ್ಯಾನಿಶ್ ಅಖ್ತರ್

ಕುರುಕ್ಷೇತ್ರದ ಭೀಮನಾಗಿ ಆಯ್ಕೆಯಾಗಿದ್ದಾರೆ ಡ್ಯಾನಿಶ್ ಅಖ್ತರ್
ಬೆಂಗಳೂರು , ಮಂಗಳವಾರ, 25 ಜುಲೈ 2017 (12:27 IST)
ಬೆಂಗಳೂರು: ಮುನಿರತ್ನ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರದ ಭೀಮನ ಪಾತ್ರಕ್ಕೆ ಕೊನೆಗೂ ನಟ ಸಿಕ್ಕಿದ್ದು, ಡ್ಯಾನಿಶ್ ಅಖ್ತರ್ ಸೈಫಿ ಎಂಬ ಕುಸ್ತಿಪಟು ಈ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ.
 
ಸಿಯಾ ಕೆ ರಾಮ್ ಧಾರಾವಾಹಿಯಲ್ಲಿ  ಡ್ಯಾನಿಶ್ ಹನುಮಂತನ ಪಾತ್ರದಲ್ಲಿ ನಟಿಸುತ್ತಿದ್ದು,  ಕನ್ನಡದಲ್ಲಿ ಮೊದಲ ಬಾರಿಗೆ ಅಭಿನಯಿಸುತ್ತಿರುವುದಕ್ಕೆ ಡ್ಯಾನಿಶ್ ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ. ಕುರುಕ್ಷೇತ್ರದ ಭೀಮನ ಪಾತ್ರಕ್ಕೆ ಡ್ಯಾನಿಶ್ ಗೆ ಅವಕಾಶ ನೀದಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಬುದು ವಿಶೇಷ. ಇಷ್ಟು ದೊಡ್ಡ ಪ್ರಾಜೆಕ್ಟ್ ನಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ದರ್ಶನ್ ಅವರಿಗೆಧನ್ಯವಾದ ಅರ್ಪಿಸುತ್ತೇನೆ ಎಂದು ಡ್ಯಾನಿಶ್ ಹೇಳಿದ್ದಾರೆ.
 
ಹೈದರಾಬಾದ್ ನ ಜಿಮ್ ವೊಂದರಲ್ಲಿ ದರ್ಶನ್ ನನ್ನನ್ನು ನೋಡಿದರು. ನಾನು ಹನುಮಾನ್ ಪಾತ್ರದಲ್ಲಿ ನಟಿಸುತ್ತಿರುವುದು ಅವಿರಿಗೆ ಗೊತ್ತಿತ್ತು. ನಾವು ಅದೇ ಸ್ಥಳದಲ್ಲಿ ಶೂಟಿಂಗ್ ಗಾಗಿ ಲೊಕೇಶನ್ ಪರೀಕ್ಷಿಸುತ್ತಿದ್ದೆವು, ಅವರು ಕೂಡ ಸಿನಿಮಾವೊಂದರ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು, ಪ್ರೊಡಕ್ಷನ್ ತಂಡಕ್ಕೆ ನನ್ನ ಬಗ್ಗೆ ಅವರು ಹೇಳಿದರು. ಸಿನಿಮಾ ತಂಡ ನನಗೆ ಕರೆ ಮಾಡಿತ್ತು, ಎರಡನೇ ಮಾತಿಲ್ಲದೇ ನಾನು ಒಪ್ಪಿಕೊಂಡೆ ಎಂದು ಡ್ಯಾನಿಶ್ ಅಖ್ತರ್ ವಿವರಿಸಿದ್ದಾರೆ. ಇನ್ನು ಆಗಸ್ಟ್ ಮೊದಲ ವಾರದಲ್ಲಿ ಡ್ಯಾನಿಶ್ ಕುರುಕ್ಷೇತ್ರದಲ್ಲಿ ಪಾಲ್ಗೊಳ್ಳಲಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್ ಹಗರಣ: ಕಾಜಲ್ ಅಗರ್ವಾಲ್ ಮ್ಯಾನೇಜರ್ ಬಂಧನ