Select Your Language

Notifications

webdunia
webdunia
webdunia
webdunia

ಸಾಕಿ ಬೆಳೆಸಿದವನೇ ಕೊಂದ.. ಕುತೂಹಲ ಹುಟ್ಟಿಸುತ್ತಿದೆ ಬಾಹುಬಲಿ-2 ಪೋಸ್ಟರ್

ಸಾಕಿ ಬೆಳೆಸಿದವನೇ ಕೊಂದ.. ಕುತೂಹಲ ಹುಟ್ಟಿಸುತ್ತಿದೆ ಬಾಹುಬಲಿ-2 ಪೋಸ್ಟರ್
Chennai , ಭಾನುವಾರ, 12 ಮಾರ್ಚ್ 2017 (16:32 IST)
ದೇಶಾದ್ಯಂತ ಭಾರೀ ಕುತೂಹಲ ಕೆರಳಿಸಿರುವ ಬಾಹುಬಲಿ-2 ಚಿತ್ರ ಏಪ್ರಿಲ್`ನಲ್ಲಿ ತೆರೆಗೆ ಬರುತ್ತಿದ್ದು, ಚಿತ್ರದ ಪೋಸ್ಟರ್`ಗಳು ಮತ್ತಷ್ಟು ಕುತೂಹಲ ಹೆಚ್ಚಿಸುತ್ತಿವೆ. ಬಾಹುಬಲಿ ಆನೆ ಮೇಲೆ ನಿಂತಿರುವ ಪೋಸ್ಟರ್ ಬಳಿಕ ಕಟ್ಟಪ್ಪ ಮಗುವೊಂದನ್ನ ಎತ್ತಿಕೊಂಡಿರುವ ಪೋಸ್ಟರನ್ನ ನಿರ್ದೇಶಕ ರಾಜಮೌಳಿ ಟ್ವಿಟ್ ಮಾಡಿದ್ದು, ಸಾಕಿ ಬೆಳೆಸಿದವನೇ ಪ್ರಾಣ ತೆಗೆದ ಎಂದು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.

ಫೋಟೋದ ಶೀರ್ಷಿಕೆ ಗಮನಿಸದರೆ ಕಟ್ಟಪ್ಪ ಬಾಹುಬಲಿಯನ್ನ ಕೊಂದ ಪ್ರಶ್ನೆಗೆ ಚಿತ್ರದಲ್ಲಿ ಉತ್ತರ ಸಿಗಲಿದೆ ಎಂಬುದು ಸ್ಪಷ್ಟವಾಗುತ್ತದೆ. ಜೊತೆಗೆ ಚಿತ್ರದ ಮೊದಲ ಟ್ರೇಲರ್ ಮಾರ್ಚ್ 16ಕ್ಕೆ ರಿಲೀಸ್ ಆಗಲಿದೆ ಎಂದು ಸಹ ರಾಜಮೌಳಿ ಹೇಳಿದ್ದಾರೆ. ಈ ಟ್ವಿಟ್ ಅನ್ನ ಕರಣ್ ಜೋಹರ್ ಸಹ ಶೇರ್ ಮಾಡಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರಮ್ಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್