Select Your Language

Notifications

webdunia
webdunia
webdunia
webdunia

ವಿನೋದ್ ಖನ್ನಾ ಸಾವಿಗೆ ಅಮಿತಾಭ್ ಬಚ್ಚನ್ ಗೌರವ ಸಲ್ಲಿಸಿದ ಪರಿಯಿದು

ವಿನೋದ್ ಖನ್ನಾ ಸಾವಿಗೆ ಅಮಿತಾಭ್ ಬಚ್ಚನ್ ಗೌರವ ಸಲ್ಲಿಸಿದ ಪರಿಯಿದು
Mumbai , ಶುಕ್ರವಾರ, 28 ಏಪ್ರಿಲ್ 2017 (07:24 IST)
ಮುಂಬೈ: ವಿನೋದ್ ಖನ್ನಾ ಮತ್ತು ಅಮಿತಾಭ್ ಬಚ್ಚನ್ ಒಂದೇ ಜಮಾನದಲ್ಲಿ ತೆರೆಗೆ ಬಂದವರು. ಇಬ್ಬರೂ ಜತೆಯಾಗಿ ಯಶಸ್ಸಿನ ರುಚಿ ಕಂಡವರು. ಇಂತಿಪ್ಪ ಸಮಕಾಲೀನ ನಟನ ಅಗಲುವಿಕೆಗೆ ಬಿಗ್ ಬಿ ಕಂಬನಿ ಮಿಡಿದಿದ್ದಾರೆ.

 
ವಿನೋದ್ ಖನ್ನಾ ನಿನ್ನೆ ಮಧ್ಯಾಹ್ನದ ವೇಳೆಗೆ ಇಹಲೋಕ ತ್ಯಜಿಸಿದರು. ಕ್ಯಾನ್ಸರ್ ಗೆ ತುತ್ತಾಗಿದ್ದ ಖನ್ನಾ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಅಂತಹ ಮೇರು ನಟನ ಅಗಲುವಿಕೆಗೆ ಬಾಲಿವುಡ್ ಮಂದಿ ಶೋಕ ವ್ಯಕ್ತಪಡಿಸಿದ್ದಾರೆ.

ಈ ಬೇಸರದ ಸುದ್ದಿ ಬರುವಾಗ ಬಿಗ್ ಬಿ ಅಮಿತಾಭ್ ಬಚ್ಚನ್ ಒಂದು ಸಂದರ್ಶನ ನೀಡುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ವಿನೋದ್ ಖನ್ನಾ ಸಾವಿನ ಸುದ್ದಿ ಅವರ ಕಿವಿಗೆ ಬಿದ್ದಿದೆ. ತಕ್ಷಣ ಸಂದರ್ಶನ ಮೊಟಕುಗೊಳಿಸಿ ಬಚ್ಚನ್ ಸ್ಥಳದಿಂದ ನಿರ್ಗಮಿಸಿದರು ಎನ್ನಲಾಗಿದೆ.

ತಕ್ಷಣ ಎಲ್ಲಾ ಕೆಲಸ ಬಿಟ್ಟು ಅಮಿತಾಭ್ ಖನ್ನಾ ಕುಟುಂಬದ ಜತೆಗಿರಲು ಸ್ಥಳದಿಂದ ನಿರ್ಗಮಿಸಿದರು ಎಂದು ಮೂಲಗಳು ತಿಳಿಸಿವೆ. ಅದರಂತೆ ಬಚ್ಚನ್ ನಂತರ ವಿನೋದ್ ಖನ್ನಾ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಕುಟುಂಬದವರಿಗೆ ಸಾಂತ್ವನ ಹೇಳುತ್ತಿದ್ದುದು ಕಂಡುಬಂತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿ 2 ಸಿನಿಮಾ ನೋಡಿದ ಮೊದಲ ವ್ಯಕ್ತಿ ಹೇಳಿದ್ದೇನು ಗೊತ್ತಾ?