Publish Date: Tue, 07 Aug 2007 (11:46 IST)
Updated Date: Tue, 07 Aug 2007 (11:45 IST)
ಬಾಲಿವುಡ್ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಚಿತ್ರ 'ಬುದ್ಧ ಮರ್ ಗಯ'ದಲ್ಲಿ ಸತ್ಯಕಥೆಯಿಲ್ಲ,ಯಾರೊಬ್ಬರ ಜೀವನವನ್ನಾಧರಿಸಿದ್ದಲ್ಲ ಇದು ನಿರ್ಮಾಪಕ ರಾಹುಲ್ ರಾವೇಲ್ ಅವರ ಹೇಳಿಕೆ.
ಬುದ್ಧ ಮರ್ ಗಯ ಚಿತ್ರದ ಕಥೆ ನಿಜ ಜೀವನದಲ್ಲಿ ಸಂಭವಿಸಿದ ಘಟನೆ. ನಿರ್ದಿಷ್ಟ ವ್ಯಕ್ತಿಯ ಬದುಕನ್ನಾಧರಿಸಿ ಕಥಾನಕ ಹೆಣೆಯಲಾಗಿದೆ ಎಂಬಿತ್ಯಾದಿ ವದಂತಿಗಳಿಗೆ ಚಿತ್ರತಂಡ ತೆರೆ ಎಳೆದಿದೆ.
ಚಿತ್ರದ ಕಥೆ ತೀರಾ ಕಾಲ್ಪನಿಕ. ಯಾರ ಬದುಕಿಗೂ ಸಂಬಂಧಿಸಿದ್ದಲ್ಲ. ಆದರೆ ನಮ್ಮ ವಿಶೇಷತೆ ಎಂದರೆ ಇದು ಎಲ್ಲರ ಬದುಕಿನ ಭಾಗದಂತೆ ತೋರುತ್ತದೆ. ಏಕೆಂದರೆ ಕಥಾನಕವನ್ನು ಜನರ ಮಧ್ಯದಿಂದ ಆರಿಸಲಾಗಿದೆ ಎನ್ನುತ್ತಾರೆ. ರಾಹುಲ್.
ರಾಹುಲ್ ಅವರ ಪ್ರತಿಕ್ರಿಯೆ ಗಾಳಿಸುದ್ದಿ ಹಾರಿ ಬಿಡುವವರ ಬಾಯ್ಮುಚ್ಚಿಸಲು ಯಶಸ್ವಿಯಾಗಬಹುದೇ ಎಂಬುದನ್ನು ಕಾದುನೋಡಬೇಕಿದೆ.