ಖ್ಯಾತ ಚಿತ್ರನಿರ್ದೇಶಕ ಬಾಲು ಮಹೇಂದ್ರ ಇನ್ನಿಲ್ಲ
ಚೆನ್ನೈ , ಗುರುವಾರ, 13 ಫೆಬ್ರವರಿ 2014 (17:34 IST)
ಹೆಸರಾಂತ ನಿರ್ದೇಶಕ ಬಾಲು ಮಹೇಂದ್ರ ಅವರು ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಅಸ್ವಸ್ಥತೆಯಿಂದ ಚೆನ್ನೈನ ವಿಜಯಾ ಆಸ್ಪತ್ರೆಗೆ ಸೇರಿಸಲಾಗಿದ್ದು, ಇಂದು ಬೆಳಿಗ್ಗೆ ಕೊನೆಯುಸಿರೆಳೆದರು. 74 ವರ್ಷ ವಯಸ್ಸಿನ ಹಿರಿಯ ನಿರ್ದೇಶಕ ಭಾರತದ ಸಿನೆಮಾದ ಪ್ರವರ್ತಕರಲ್ಲಿ ಒಬ್ಬರಾಗಿದ್ದು, ಚಿತ್ರಕಥೆಗಾರ, ಸಂಕಲನಕಾರ ಮತ್ತು ಛಾಯಾಚಿತ್ರಗ್ರಾಹಕರಾಗಿದ್ದರು. .ಬಾಲು ಮಹೇಂದ್ರ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 1974ರಲ್ಲಿ ನೆಲ್ಲು ಚಿತ್ರದ ಸಿನೇಮಾಟೋಗ್ರಾಫರ್ ವೃತ್ತಿಜೀವನ ಆರಂಭಿಸಿದ ಅವರು ಕನ್ನಡದ ಕೋಕಿಲ ಚಿತ್ರದ ಮೂಲಕ ಚೊಚ್ಚಲ ನಿರ್ದೇಶಕರಾದರು. ಹಲವಾರು ರಾಷ್ಟ್ರಪ್ರಶಸ್ತಿಗಳನ್ನು ಅವರು ಗಳಿಸಿದ್ದರು. ಚಿತ್ರಕಥೆ, ನಿರ್ದೇಶನ, ಛಾಯಾಗ್ರಹಣಕ್ಕೆ ಅವರು ಖ್ಯಾತರಾಗಿದ್ದರು. 74
ವರ್ಷ ವಯಸ್ಸಾಗಿದ್ದ ಬಾಲು ಮಹೇಂದ್ರ ಲವಲವಿಕೆಯಿಂದ ಸಕ್ರಿಯರಾಗಿ ಎಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತಮಿಳಿನಲ್ಲಿ ಅವರ ಹೆಸರಾಂತ ಚಿತ್ರಗಳು ಮುಲ್ಲುಂ ಮುಲಾರಂ,ಅಜಿಯಾದ ಕೊಳಂಗಳ್, ಮೂಡು ಪಾನಿ ಮತ್ತು ಮೂಂದ್ರಂ ಪಿರೈ.