Publish Date: Sun, 17 Jun 2007 (12:25 IST)
Updated Date: Sun, 17 Jun 2007 (12:25 IST)
ನಿಜ ಜೀವನ ಕಥೆಯನ್ನಾಧರಿಸಿದ ಮೆರಾ ಪೆಹಲಾ ಪೆಹಲಾ ಪ್ಯಾರ್ ಚಿತ್ರದ ನಂತರ ರಾಬಿ ಗ್ರೆವಾಲ್ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದು ಈ ಚಿತ್ರದಲ್ಲಿ ಬಾಲಿವುಡ್ ಬಾದ ಷಾ ಅಮಿತಾಬ್ ಬಚ್ಚನ್, ರಾಬಿ ಗ್ರೆವಾಲ್ ನಿರ್ದೇಶನದ ಚಿತ್ರವೋಂದರಲ್ಲಿ ಶ್ರೀ ಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾದ್ಯತೆ ಇದೆ.
ರಾಬಿ ಗ್ರೆವಾಲ್ ಹೇಳುವಂತೆ ಅಮಿತಾಬ್ ಅಭಿನಯಿಸಲಿರುವ ಕೃಷ್ಣನ ಪಾತ್ರ ಪೌರಾಣಿಕ ಹಿನ್ನಲೆ ಹೊಂದಿಲ್ಲ. ಬಾಸ್ಕೆಟ್ ಬಾಲ್ ತಂಡದ ಕೋಚ್ ಓರ್ವ ಯುವಕರೊಂದಿಗೆ ಚೆಸ್ ತರಹದ ಆಟವನ್ನು ಆಡುತ್ತ ಯುವಕರ ಜೀವನವನ್ನು ಸರಿಯಾದ ದಾರಿಗೆ ತರುತ್ತಾನೆ ಎಂದು ಕಥಾಸಾರಾಂಶವನ್ನು ರಾಬಿ ಗ್ರೆವಾಲ್ ವರದಿಗಾರರಿಗೆ ಹೇಳಿದರು.
ಅಮಿತಾಬ್ ಬಚ್ಚನ್ ಒಬ್ಬರೇ ಈ ಪಾತ್ರ ಮಾಡಲು ಸೂಕ್ತ ಅಭ್ಯರ್ಥಿ ಈಗಾಗಲೆ ಅಮಿತಾಬ್ ಜೊತೆಗೆ ಪಾತ್ರ ಮತ್ತು ಕಥೆಯನ್ನು ಚರ್ಚಿಸಲಾಗಿದೆ.ಎಲ್ಲ ಸರಿಯಾದ ರೀತಿಯಲ್ಲಿ ಸಾಗಿದರೆ ಶಿಘ್ರದಲ್ಲಿ ಚಿತ್ರದ ಚಿತ್ರಿಕರಣ ನಡೆಯಲಿದೆ