"ಆಜಾ ನಚಲೇ"ಗಾಗಿ ಮಾಧುರಿ ಆಗಮನ
Publish Date: Thu, 15 Nov 2007 (17:03 IST)
Updated Date: Thu, 15 Nov 2007 (17:02 IST)
ವಿಶೇಷ ಪ್ರಯಾಣಿಕರೊಬ್ಬರು, ಬುಧವಾರ ಮುಂಜಾನೆ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆಬಂದಿಳಿದರು. ಯಶ್ರಾಜ್ ಫಿಲ್ಮ್ಸ್ ಅವರ ಆಜಾ ನಚಲೇ ಬಿಡುಗಡೆಗಾಗಿ, ಬಾಲಿವುಡ್ ಬೆಡಗಿ ಮಾಧುರಿ ದೀಕ್ಷಿತ್ ಲಾಸ್ ಎಂಜೇಲಿಸ್ನ ದೆನ್ವರ್ನಿಂದ ಮುಂಬಯಿಗೆ ಬುಧವಾರ ಆಗಮಿಸಿದರು.ಗುಲಾಬಿ ಬಣ್ಣದ ಸಲ್ವಾರ್ ಕಮೀಜ್ ಧರಿಸಿ ಮಿಲಿನ್ ಡಾಲರ್ ಮುಗುಳ್ನಗುವಿನೊಂದಿಗೆ ಆಗಮಿಸಿದ ಈ ಮಹಾರಾಷ್ಟ್ರ ಬೆಡಗಿಯು ನೆರೆದಿದ್ದ ಜನಸಮೂಹವನ್ನು ಉನ್ಮಾದಗೊಳಿಸಿದಳು.ತನ್ನ ಸಿನಿಮಾ ಪ್ರಚಾರಕ್ಕಾಗಿ ಒಂಟಿಯಾಗಿ ಆಗಮಿಸಿದ್ದು, ಕೆಲ ದಿನಗಳಲ್ಲಿ ಮಾಧುರಿಯ ಪತಿ ಡಾಕ್ಟರ್ ಶ್ರೀರಾಮ್ ನೆನೆ ಅವರು ಜತೆ ಸೇರಲಿದ್ದಾರೆ .