ತನ್ನ ಪೂರ್ವ ಜನ್ಮದ ಕಥೆ ಹೇಳುವ ಮಾಯಾ, ದ್ವಾಪರ ಯುಗದಲ್ಲಿ ತಾನೊಂದು ಪ್ರಪಾತಕ್ಕೆ ಬಿದ್ದೆ. ಪೀರ್ ಬಾಬಾ ಅವರು ತನ್ನ ರಕ್ಷಣೆಗಾಗಿ ಗೋಪಾಲ ಹೆಸರಿನ ಸರ್ಪವೊಂದನ್ನು ಕಳುಹಿಸಿದರು. ಆ ಸಂದರ್ಭ ಅವರಿಬ್ಬರ ನಡುವೆ ಪ್ರೇಮಾಂಕುರವಾಯಿತು. ಆದರೆ, ಅದ್ಯಾವುದೋ ಸಮಸ್ಯೆಯಿಂದಾಗಿ ಅವರಿಬ್ಬರಿಗೂ ವಿವಾಹವಾಗುವುದು ಸಾಧ್ಯವಿರಲಿಲ್ಲ, ಹೀಗಾಗಿ ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅಂದಿನಿಂದ ಈ ನಾಗಿಣಿಯು ತನ್ನ ಪ್ರಿಯಕರನಿಗಾಗಿ ಅಲೆದಾಡುತ್ತಿದೆ ಎನ್ನುತ್ತಾಳೆ ಆಕೆ.
ನಾಗಲೋಕ ಮತ್ತು ಮರ್ತ್ಯ ಲೋಕವನ್ನೊಳಗೊಂಡ ವಿಚಿತ್ರವಾದ, ರೂಪ ಬದಲಾಯಿಸುವ ಹಾವಿನ ಕಥೆ ಕೇಳಿಬರುತ್ತಿರುವುದು ಮಧ್ಯಪ್ರದೇಶದ ಬಾಢ್ನಗರ ಎಂಬಲ್ಲಿ. ಈ ಕಥೆಗಳಿಂದ ಪ್ರೇರಣೆ ಪಡೆದಿರುವ ಸ್ಥಳೀಯ ಜನರು ಮಾಯಾಳನ್ನು ತಾಯಿ ಭಗವತಿ ಎಂದು ಪೂಜಿಸಲಾರಂಭಿಸಿದ್ದಾರೆ. ಆಕೆಯನ್ನು ಪೂಜಿಸುವುದು ಜನರ ಭಕ್ತಿಯ ಸಂಕೇತವೇ ಅಥವಾ ರೂಪ ಬದಲಾಯಿಸುವ ಕಥೆಯೇ ಒಂದು ಮೂಢ ನಂಬಿಕೆಯೇ? ವಿಜ್ಞಾನ ಯುಗದಲ್ಲೂ ಇಂಥ ಪ್ರಕರಣಗಳನ್ನು ನಂಬಬಹುದೇ? ನಿಮ್ಮ ಅಭಿಪ್ರಾಯ ತಿಳಿಸಿ.