Article Blind Faith Articles %e0%b2%ad%e0%b2%97%e0%b2%b5%e0%b2%be%e0%b2%a8%e0%b3%8d %e0%b2%88%e0%b2%b6%e0%b3%8d%e0%b2%b5%e0%b2%b0%e0%b2%a8 %e0%b2%9c%e0%b3%88%e0%b2%b2%e0%b3%81 108011400041_1.htm

Select Your Language

Notifications

webdunia
webdunia
webdunia
webdunia

ಭಗವಾನ್ ಈಶ್ವರನ ಜೈಲು

ಭಗವಾನ್
WD
ನಂಬಿದರೆ ನಂಬಿ ಬಿಟ್ಟರೆ ಬಿಡಿ ಸರಣಿಯಲ್ಲಿ ಈ ಬಾರಿ ನಾವು ನಿಮಗೆ ವಿಚಿತ್ರ ಜೈಲು ಮತ್ತು ಆ ಜೈಲಿನಲ್ಲಿರುವ ಕೈದಿಗಳನ್ನು ಪರಿಚಯಿಸುತ್ತಿದ್ದೇವೆ. ಈ ಜೈಲನ್ನು ಮಹದೇವನ ಜೈಲೆಂದು ಕರೆಯುವುದರಿಂದ ವಿಚಿತ್ರ ಜೈಲೆನಿಸಿದೆ. ನೂರಕ್ಕೂ ಹೆಚ್ಚು ಕೈದಿಗಳಿಗೆ ಈ ಜೈಲು ವಾಸಸ್ಥಳವಾಗಿದೆ.

ಆದರೆ ದುಷ್ಕರ್ಮಗಳಿಗೆ ಶಿಕ್ಷೆ ಪಡೆದು ಬಂಧಿತರಾಗಿರುವ ಕೈದಿಗಳು ಇವರಲ್ಲ. ಅವರು ಮಾಡಿದ ಪಾಪಗಳು ಕಾಯಿಲೆಗಳ ಸ್ವರೂಪದಲ್ಲಿ ಕಾಣಿಸಿಕೊಂಡು ಆ ಪಾಪಗಳಿಂದ ಪ್ರಾಯಶ್ಚಿತ ಹೊಂದಲು ಕೈದಿಗಳಾಗಿದ್ದಾರೆ ಎಂಬ ನಂಬಿಕೆ ಇಲ್ಲಿ ಬೇರೂರಿದೆ.

ಮಧ್ಯಪ್ರದೇಶದ ನೀಮಚ್ ನಗರದ ಬಳಿಯಿರುವ ಈ ಜೈಲಿನ ಖ್ಯಾತಿ ನಮಗೂ ತಲುಪಿ, ಅಲ್ಲಿಗೆ ತೆರಳಲು ತಕ್ಷಣವೇ ಯೋಜಿಸಿದೆವು. ನಾವು ಅಲ್ಲಿಗೆ ತೆರಳಿದಾಗ ಕಂಬಿಗಳ ಒಳಗೆ ಒಳಗೆ ಅನೇಕ ಮಂದಿ ಕೈದಿಗಳಿರುವುದನ್ನು ಕಂಡು ನಾವು ಆಶ್ಚರ್ಯಚಕಿತರಾದೆವು. ಕೈದಿಗಳಲ್ಲೊಬ್ಬನನ್ನು ಪ್ರಶ್ನಿಸಿದಾಗ ತಾನು ಕಾಯಿಲೆಯಿಂದ ನರಳುತ್ತಿದ್ದು, ಅದರಿಂದ ಚೇತರಿಸಿಕೊಂಡ ಬಳಿಕ ಭಗವಾನ್ ಈಶ್ವರನ ಪೂರ್ವಾನುಮತಿಯೊಂದಿಗೆ ತನ್ನ ಊರಿಗೆ ಹಿಂತಿರುಗುವುದಾಗಿ ಹೇಳಿದ. ಅವನಂತೆ ಇನ್ನೂ ಅನೇಕ ಮಂದಿ ಕೈದಿಗಳು ಜೈಲಿನ ಒಳಗೆ ಬಂದಿಯಾಗಿದ್ದರು. ಅವರೆಲ್ಲರೂ ಭಗವಾನ್ ಶಿವನ ಭಕ್ತಿಯಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿದ್ದರು. ತಮ್ಮ ದೇಹಗಳಿಗೆ ಮಣ್ಣನ್ನು ಮೆತ್ತಿಕೊಂಡಿದ್ದ ಅವರು ದೇವಸ್ಥಾನದ ಆವರಣದಲ್ಲಿ, ಶಿವನ ಹೆಸರನ್ನು ಗಟ್ಟಿಧ್ವನಿಯಲ್ಲಿ ಪಠಿಸುವ “ಶಿವನಾದ”ದಲ್ಲಿ ಭಾಗವಹಿಸಿದ್ದರು.

webdunia
WD
ಸ್ವಯಂ ಉದ್ಭವವಾಗಿದೆಯೆಂದು ನಂಬಲಾಗಿರುವ ತಿಲಿಸಾವ ಮಹದೇವ್ ಎಂಬ ಶಿವಲಿಂಗ ಅಲ್ಲಿ ನೆಲೆಯಾಗಿದೆ. ಸ್ಥಳೀಯ ನಿವಾಸಿಯೊಬ್ಬರು ಹೇಳುವ ಪ್ರಕಾರ ಈ ದೇವಸ್ಥಾನವು 2000 ವರ್ಷಗಳಷ್ಟು ಪ್ರಾಚೀನ ಕಾಲದ್ದು. ಗಂಗಾ ನದಿಯ ಮೂಲವೆಂದು ಸ್ಥಳೀಯವಾಗಿ ನಂಬಿರುವ ಕೊಳವೊಂದು ದೇವಸ್ಥಾನದ ಆವರಣದಲ್ಲಿದೆ.

webdunia
WD
ಈ ಕೊಳದಲ್ಲಿರುವ ಮಣ್ಣು ಯಾವುದೇ ಕಾಯಿಲೆಯನ್ನಾದರೂ ಗುಣಪಡಿಸುತ್ತದೆಂದು ಜನರು ನಂಬಿದ್ದಾರೆ ಮತ್ತು ಚಿಕಿತ್ಸೆಗೆ ಕೆಲವು ನಿಯಮಗಳು ಮತ್ತು ನಿಬಂಧನೆಗಳನ್ನು ಅವರು ಅನುಸರಿಸಬೇಕಾಗುತ್ತದೆ. ಕಾಯಿಲೆಗಳ ರೂಪದಲ್ಲಿ ಕಾಣಿಸಿಕೊಂಡಿರುವ ತಮ್ಮ ಪಾಪಗಳನ್ನು ತೊಳೆಯಲು ಜನರು ಇಲ್ಲಿ ಕೈದಿಗಳಂತೆ ವಾಸ್ತವ್ಯ ಮಾಡಬೇಕಾಗಿದೆ.

webdunia
WD
ಅವರ ಕಾರಾಗೃಹವಾಸ ಮುಗಿದ ಬಳಿಕ ಭಗವಾನ್ ಶಿವನು ಅವರನ್ನು ಆರೋಗ್ಯವಂತರನ್ನಾಗಿ ಮಾಡುತ್ತಾನೆಂದು ಜನರ ನಂಬಿಕೆಯಾಗಿದೆ.ಕಾಯಿಲೆಯಿಂದ ಮುಕ್ತಿ ಹೊಂದಲು ಮೊದಲಿಗೆ ರೋಗಿ(ಮಾನಸಿಕ ಸಮಸ್ಯೆಗಳಿಂದ ನರಳುವ ರೋಗಿಗಳೇ ಹೆಚ್ಚು) ದೇವಸ್ಥಾನದ ಆಡಳಿತ ವರ್ಗಕ್ಕೆ ಮನವಿ ಪತ್ರ ಕಳಿಸುತ್ತಾನೆ. ಅವನ ಮನವಿಗೆ ಒಪ್ಪಿಗೆ ಸೂಚಿಸಿದ ಬಳಿಕ ಆಡಳಿತಮಂಡಳಿಯು ಅವನಿಗೆ ಬ್ಯಾಡ್ಜ್ ಸಂಖ್ಯೆ ನೀಡುತ್ತದೆ. ಅವನ ಊಟ, ತಿಂಡಿಗಳ ಖರ್ಚನ್ನು ಆಡಳಿತವರ್ಗನಿಭಾಯಿಸುತ್ತದೆ.. ಕೈದಿ ಕೊಳದಲ್ಲಿ ಪ್ರತಿನಿತ್ಯ ಸ್ನಾನಮಾಡಬೇಕೆಂಬ ನಿಯಮವಿದೆ. ಸ್ನಾನವಾದ ಬಳಿಕ ಭಾರವಾದ ಕಲ್ಲನ್ನು ತಲೆಯ ಮೇಲೆ ಹೇರಿಕೊಂಡು ದೇವಸ್ಥಾನದ ಸುತ್ತ ಐದು ಸುತ್ತುಬರಬೇಕು. ದೇವಸ್ಥಾನದ ಆವರಣವನ್ನು ಚೊಕ್ಕಟವಾಗಿಡುವುದು ಕೂಡ ಕೈದಿಗಳ ಜವಾಬ್ದಾರಿಯಾಗಿದೆ.

webdunia
WD
ಈ ರೀತಿಯಾಗಿ ಕೈದಿಗಳು ತಿಂಗಳುಗಟ್ಟಲೆ, ವರ್ಷಗಟ್ಟಲೆ ಬಂದೀಖಾನೆಯಲ್ಲಿ ಕಳೆಯುತ್ತಾರೆ. ಭಗವಾನ್ ಶಿವ ಕೈದಿಯ ಕನಸಿನಲ್ಲಿ ಕಾಣಿಸಿಕೊಂಡು ಅವನು ರೋಗಮುಕ್ತನಾಗಿದ್ದಾನೆಂದು ಆದೇಶಿಸಿದ ಕೂಡಲೇ ಕೈದಿಯನ್ನು ಬಿಡುಗಡೆ ಮಾಡಲಾಗುತ್ತದೆ. ಆಡಳಿತವರ್ಗದ ಅಧಿಕಾರಿಗೆ ಕೂಡ ಇದೇ ರೀತಿಯ ಕನಸು ಕಾಣಿಸಿಕೊಂಡಾಗ ಮಾತ್ರ ರೋಗಿಯ ಬಿಡುಗಡೆಗೆ ಕಾಗದಪತ್ರಗಳನ್ನು ಸಿದ್ಧಪಡಿಸುತ್ತಾರೆ. ಆಗ ಮಾತ್ರ ರೋಗಿ ನಿರೋಗಿಯೆನಿಸಿಕೊಂಡು ಜೈಲಿನಿಂದ ಬಂಧಮುಕ್ತನಾಗುತ್ತಾನೆ.

ಇಡೀ ಪ್ರಕ್ರಿಯೆ ಅಸ್ವಾಭಾವಿಕ ಎಂಬಂತೆ ನಮಗೆ ಕಂಡುಬಂತು. ಅದನ್ನು ನಂಬುವುದೇ ಕಷ್ಟವೆನಿಸಿತು. ಆದರೆ ತಮ್ಮ ಸ್ವಂತ ಬಂಧುಗಳು ಈ ಜೈಲಿಗೆ ಸೇರಿದ ಬಳಿಕ ಗುಣಮುಖರಾಗಿದ್ದಾರೆಂದು ಕೆಲವು ಜನರು ಹೇಳಿದಾಗ ನಂಬುವುದೋ, ಬಿಡುವುದೋ ಎಂಬ ಸಂದಿಗ್ಧಕ್ಕೆ ನಾವು ಸಿಲುಕಿದೆವು. ನೀವು ಈ ಬಗ್ಗೆ ಏನು ಅಭಿಪ್ರಾಯ ತಳೆದಿದ್ದೀರಿ, ಇದನ್ನು ನಿಜವಾಗಲೂ ನಂಬುವಿರಾ... ನಮಗೆ ಬರೆದುಕಳಿಸಿ.

Share this Story:

Follow Webdunia kannada