Select Your Language

Notifications

webdunia
webdunia
webdunia
webdunia

ಕಲ್ಲಿನ ಹರಳು ಸ್ಟೆತೋಸ್ಕೋಪ್ ಆಗಬಲ್ಲುದೇ ?

ಹರಳು. ತ್ರ್ಯಂಬಕೇಶ್ವರ

ಮನೀಷಾ ಕೌಶಿಕ್

WD
ಎಲ್ಲ ಶಿವ ಮಹಿಮೆ ! ಭಾರತದಲ್ಲಿ ಯಾವುದೋ ಏನೇನು ಆಗುತ್ತದೋ... ಎಲ್ಲವೂ ಆಧ್ಯಾತ್ಮದ ತಳಹದಿಯ ಮೇಲೆ ನಿಂತಿರುತ್ತದೆ. ವಿಜ್ಞಾನ ಕೂಡ ಭಾರತೀಯರಿಗೆ ಆಧ್ಯಾತ್ಮ. ಭಗವಂತನ ಲೀಲೆ.

ಕೇವಲ ಯೋಗದಿಂದ ರೋಗಗಳನ್ನು ಗುಣಪಡಿಸಬಲ್ಲೆ ಎಂದು ಹೇಳುವವರು ಇದ್ದಾರೆ. ಅಂತಹವರಲ್ಲಿ ಕೆಲವರು ರೋಗಿಗಳಿಗೆ ಮೋಸ ಮಾಡಿದ ಉದಾಹರಣೆಯೂ ಇದೆ. ಏಡ್ಸ್, ಕ್ಯಾನ್ಸರ್ ಕೂಡ ಗುಣಪಡಿಸಬಲ್ಲೆ ಎಂದು ಹೇಳುವ ವ್ಯಕ್ತಿಯೊಬ್ಬನನ್ನು ನಿಮಗೆ ನಮ್ಮ ತಂಡ ಪರಿಚಯಿಸುತ್ತಿದೆ. ನಂಬುವುದು ಬಿಡುವುದು ನಿಮಗೇ ಬಿಟ್ಟ ವಿಷಯ.

ಈ ಕುರಿತ ಮಾಹಿತಿ ಫೋಟೋ ಗ್ಯಾಲರಿ ಇಲ್ಲಿದೆ ಕ್ಲಿಕ್ಕಿಸಿ.

ತ್ರ್ಯಂಬಕೇಶ್ವರ ಪ್ರವಾಸದ ಸಮಯದಲ್ಲಿ ಈ ಬಗ್ಗೆ ವಿಷಯ ತಿಳಿಯಿತು - ಇಲ್ಲೊಬ್ಬ ಬಾಬಾ ಇದ್ದಾನೆ, ಅವನ ಕೈಯಲ್ಲಿ ಹರಳೊಂದು ಸ್ಟೆತೋಸ್ಕೋಪ್ ಅವತಾರ ತಾಳುತ್ತದೆ ಅಂತ...
webdunia
WD

ಸರಿ.. ಹರಳು ಬಾಬಾನನ್ನು ಹುಡುಕಿಕೊಂಡು ಯಥಾರೀತಿ ನಮ್ಮ ಪಯಣ ಸಾಗಿತು. ರಘುನಾಥ್ ಬಾಬಾ ಅಲಿಯಾಸ್, ಉರ್ಫ್ ಫಾರ್ಸಿವಾಲೇ ಬಾಬಾ ಇರುವುದು ನಾಸಿಕ್-ತ್ರ್ಯಂಬಕ ರಸ್ತೆಯಲ್ಲಿರುವ ಒಂದು ಹಳ್ಳಿಯಲ್ಲಿ.

ಗಿಡಮೂಲಿಕೆಗಳಿಂದ ಏಡ್ಸ್, ಕ್ಯಾನ್ಸರ್ ಗುಣಪಡಿಸಬಹುದು ಎಂಬ ವಾದವನ್ನು ನೀವು ಒಪ್ಪುತ್ತೀರಾ? ಇಲ್ಲಿ ಚರ್ಚಿಸಿ.

webdunia
WD
ಬಾಬಾನ ದಾವಾ ಏನಂದರೆ... ಮೊದಲೇ ಹೇಳಿಬಿಡ್ತೇವೆ.. ತಲೆ ಮೇಲೆ ಕಲ್ಲನ್ನು ಇಟ್ಟು, ಏಡ್ಸ್ ಕ್ಯಾನ್ಸರ್ ರೋಗಗಳು ಇರುವುದನ್ನು ಖಾತ್ರಿ ಪಡಿಸುತ್ತೇನೆ ಮತ್ತು ಅವುಗಳನ್ನು ಗಿಡಮೂಲಿಕೆ ಔಷಧದಿಂದ ಗುಣಪಡಿಸುತ್ತೇನೆ ಎಂದು.

ಆಶ್ರಮದಂತಹ ದೊಡ್ಡ ಮನೆಯಲ್ಲಿ ಮಂಚದ ಮೇಲೆ ಒಬ್ಬ ವ್ಯಕ್ತಿ ಕುಳಿತಿದ್ದಾನೆ. ವ್ಯಕ್ತಿಯ ಅಂದಾಜು ವಯಸ್ಸು 40-45 ಇರಬಹುದು. ಕೈಯಲ್ಲಿ ಹರಳು, ಎದುರಿಗೆ ಕುಳಿತವರ ತಲೆಯ ಮೇಲೆ ಅದನ್ನು ಇಡುತ್ತಿದ್ದ. ಮತ್ತು ಮಂತ್ರಗಳನ್ನು ಗುಣುಗುತ್ತಿದ್ದ. ಪಕ್ಕದಲ್ಲಿದ್ದ ಸಹಾಯಕರು ಎಲ್ಲ ರೋಗಗಳಿಗೂ ಒಂದೇ ತೆರನಾದ ಔಷಧ ನೀಡುತ್ತಿದ್ದರು. ಕೆಲವೊಮ್ಮೆ ನಿಮ್ಮ ರಕ್ತದೊತ್ತಡ ಕಡಿಮೆಯಾಗಿದೆ. ಒತ್ತಡ ಈ ಪ್ರಮಾಣದಲ್ಲಿ ಇದೆ ಎಂದು ಹೇಳುತ್ತಿದ್ದ. ಅಲ್ಲದೇ ಕೆಲ ರೋಗಿಗಳ ಕ್ಯಾನ್ಸರ್ ಟ್ಯೂಮರ್, ಏಡ್ಸ್ ರೋಗವನ್ನೂ ಪತ್ತೆ ಮಾಡಿದ.

ಹರಳು ಬಾಬಾ ಚಿಕಿತ್ಸೆ ಕುರಿತ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

ಈಗ ಶುರುವಾಯಿತು ನೋಡಿ....ರೋಗಿಗಳ ಸಾಲಿನಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ ಮೊದಲ ತನ್ನ ಕೈಯಲ್ಲಿದ್ದ ಬಟ್ಟೆಗಳನ್ನು ಬಾಬಾನ ಮುಂದೆ ಬಿಸಾಕಿದ. ಬಾಬಾ ಹರಳನ್ನೆತ್ತಿ.. ಆ ಬಟ್ಟೆಗಳ ಮೇಲಿಟ್ಟು ರೋಗ ಏನು ? ಅದಕ್ಕೆ ಯಾವ ಚಿಕಿತ್ಸೆ ನೀಡಬೇಕು ? ಎಂದು ಹೇಳಿದ!

ರೋಗಿಯೂ ಚಾಲಾಕಿ ಆಸಾಮಿ.. ತನ್ನ ಹೆಂಡತಿಯ ಫೋಟೋ ತೆಗೆದು ಬಾಬಾನ ಮುಂದಿಟ್ಟು ಸುಮ್ಮನೆ ಕುಳಿತ. ಅದೇ ಯಥಾವತ್ ಕ್ರಿಯೆ. ಹರಳು ಪೋಟೋದ ಮೇಲೆ, ಬಾಬಾನ ಬಾಯಲ್ಲಿ ಗುಣು ಗುಣು ಮಂತ್ರ, ಆ ಮೇಲೆ ರೋಗದ ವಿವರಣೆ, ಕೊನೆಗೆ ಚಿಕಿತ್ಸೆಗೆ ಪರಿಹಾರೋಪಾಯ.

ಇದೆಲ್ಲ ನೋಡುತ್ತಿದ್ದ ನಮಗೆ ದಿಗಿಲು ಆಗಿತ್ತು. ಸರಿ ಬಾಬಾನನ್ನು ಭೇಟಿಯಾಗಿ ಮಾತನಾಡಿದರೆ ಮಾತ್ರ ಸಂಶಯದ ಹುಳ ತಲೆಯಿಂದ ಹೋಗಲು ಸಾಧ್ಯ, ಇಲ್ಲದಿದ್ದರೆ ಸಂಶಯದ ಗುಂಗಿನಲ್ಲಿ ಸಾವು ಖಚಿತ ಎಂದು. ಸಹಾಯಕರಿಗೆ ನಮ್ಮ ಮನದಾಸೆಯನ್ನು ಹೇಳಿಕೊಂಡೆವು.

ಪಕ್ಕದ ಕೈತೋಟದಲ್ಲಿ ತಿರುಗಾಡ್ತಿರಿ, ಅಲ್ಲಿ ಬಾಬಾ ಬರ್ತಾರೆ, ಮಾತಾಡಬಹುದು ಎಂದು ಹೇಳಿ ನಮಗೆ ತೋಟದ ದಾರಿ ತೋರಿಸಲಾಯಿತು. ತೋಟದಲ್ಲಿ ಕೆಲ ಔಷಧೀಯ ಸಸ್ಯಗಳು ಮತ್ತು ಕಳ್ಳಿಗಿಡಗಳನ್ನು ಬಿಟ್ಟರೆ ಬೇರೆ ಏನೂ ಇರಲಿಲ್ಲ. ಅಲ್ಲೇ ಸುತ್ತು ಹಾಕುತ್ತಿದ್ದ ನಮ್ಮೊಂದಿಗೆ ಸುಮಾರು ಒಂದರ್ಧ ಘಂಟೆ ಕಳೆದ ನಂತರ ಬಾಬಾ ಸೇರಿಕೊಂಡ. ಇಲ್ಲಿರುವ ಗಿಡಗಳಿಂದ ರೋಗಿಗಳಿಗೆ ಔಷಧ ಸಿದ್ಧಪಡಿಸುತ್ತಿರುವುದಾಗಿ ಮತ್ತು ಈ ಹರಳನ್ನು ನನ್ನ ಗುರು ಕೊಡುಗೆಯಾಗಿ ನೀಡಿದ್ದಾಗಿ ಹೇಳಿದ. ನಾನು ನನ್ನ ಜೀವನದ ಬಹಳಷ್ಟು ದಿನಗಳನ್ನು ಬುಡಕಟ್ಟು ಜನರೊಂದಿಗೆ ಕಳೆದಿದ್ದು, ಅವರೇ ನನಗೆ ಈ ವಿದ್ಯೆಯನ್ನು ಕಲಿಸಿದ್ದಾರೆ ಎಂದು ಹೇಳಿದ.

webdunia
WD
ಸರಿ... ನಿನ್ನ ಔಷಧಗಳು ಪರಿಣಾಮಕಾರಿಯಾಗಿದ್ದರೆ ಅದ್ಯಾಕೆ ಸರಕಾರದ ನೆರವು ಪಡೆದು ಪೇಟೆಂಟ್ ಮಾಡಿಸುತ್ತಿಲ್ಲ ಎಂದರೆ ಮಾತು ತೇಲಿಸಿ. ಕಳ್ಳಿಯ ತಾಯಿತದತ್ತ ತಿರುಗಿಸಿದ. ಕಳ್ಳಿಗಿಡದ ತಾಯಿತ ರೋಗಿಗಳಲ್ಲಿ ಪ್ರತಿರೋಧದ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಾನು ನೀಡುವ ಔಷಧ ರೋಗವನ್ನು ತೊಡೆದು ಹಾಕುತ್ತದೆ ಎಂದು ಹೇಳಿದ.

ಒಂದು ಪಕ್ಷದ ವಾದ ಕೇಳಿದ ಮೇಲೆ ಇನ್ನೊಂದು ಪಕ್ಷದ ನ್ಯಾಯವಾದ ನಂಬಿಕೆ ಕೇಳದೆ ಇದ್ದರೆ ಹೇಗೆ? ಇಲ್ಲಿ ಬಂದಿರುವ ರೋಗಿಗಳಲ್ಲಿ ಬಹುತೇಕರು ಹೊಸಬರು, ಉಳಿದವರಲ್ಲಿ ಕೆಲವರು ಒಂದು ಇಲ್ಲವೇ ಎರಡು ಸಲ ಬಂದವರಾಗಿರಬಹುದು. ಹಾಗೇ ಹುಡುಕುತ್ತಿದ್ದಾಗ ಒಂದು ದೊಡ್ಡ ತಿಮಿಂಗಲವನ್ನೇ ಬಲಿಹಾಕಿದೆವು. ಹೆಸರು ವಿವರ ಬಹಿರಂಗ ಪಡಿಸದಿದ್ದರೆ ಮಾತ್ರ ಮುಂದಿನ ವಿಚಾರ ಎಂದು ಹೇಳಿದ. ಸರಿಯಪ್ಪಾ... ನಿನ್ನಿಷ್ಟವೇ ನಮ್ಮಿಷ್ಟ ಎಂದುಕೊಂಡು ಹೂಂಗುಟ್ಟಿದೆವು. "ನನಗೆ ಏಡ್ಸೂ, ಗುಣವಾಗುವುದಿಲ್ಲ ಗೊತ್ತು. ನನ್ನ ಸ್ನೇಹಿತ ಹೇಳಿದ ನಂತರ ಬಂದಿದ್ದೇನೆ. ಏನಾಗುತ್ತದೋ ಗೊತ್ತಿಲ್ಲ".

ಇನ್ನೊಬ್ಬ ಸಿಕ್ಕಾತ ಬಾಲಾಜಿ ಶೇಖಾವತ್. ತನ್ನ ಮಗಳಿಗೆ ಬ್ರೈನ್ ಟ್ಯೂಮರ್ ಆಗಿದೆ. ನನ್ನ ಸಹೋದ್ಯೋಗಿಯೊಬ್ಬನಿಗೆ ಇದೇ ರೀತಿ ಆಗಿತ್ತು. ಅವನು ಇದೇ ಬಾಬಾನ ಹತ್ತಿರ ಚಿಕಿತ್ಸೆ ಪಡೆದು ಈಗ ಸುಖವಾಗಿದ್ದಾನೆ. ಆದ್ದರಿಂದ ನನ್ನ ಮಗಳಿಗೂ ಗುಣವಾಗುವ ವಿಶ್ವಾಸ ಇದೆ ಎಂದು ಹೇಳಿದ.

ಹರಳು ಇರಿಸಿ ರೋಗ ಪತ್ತೆ ಸಾಧ್ಯವೇ? ಮೂಲಿಕೆಗಳಿಂದ ಏಡ್ಸ್, ಕ್ಯಾನ್ಸರ್ ಗುಣಪಡಿಸಬಹುದೇ? ನೀವೇನನ್ನುತ್ತೀರಿ?? ಇಲ್ಲಿ ಚರ್ಚಿಸಿ.

webdunia
WD
ಆದರೆ ನಮಗೆ ಮಾತ್ರ ಸಂಶಯದ ಹುಳ ತಲೆಯಲ್ಲಿ ಸುತ್ತುತ್ತಲೇ ಇತ್ತು. ಬಾಬಾ, ನನಗೆ ಈಗ ಎಪ್ಪತ್ತರ ಹತ್ತಿರ ವಯಸ್ಸು ಎಂದು ಹೇಳುತ್ತಾನೆ. ನೋಡಲಿಕ್ಕೆ ಮಾತ್ರ 40-45ರ ಆಸುಪಾಸಿನವನಂತೆ ಕಾಣುತ್ತಾನೆ.

ಅವನಿಗೆ 21 ವರ್ಷದ ಮಗ ಇದ್ದಾನೆ ಅಂದರೆ 20- 25ನೆ ವಯಸ್ಸಿನಲ್ಲಿ ಬಾಬಾನ ಮದುವೆಯಾಗಿದೆ ಅಂತಾಯ್ತಲ್ಲ. ಈಗ ಅವನಿಗೆ 70 ವಯಸ್ಸು ಎಂದಾದರೇ 50ನೆ ವಯಸ್ಸಿನಲ್ಲಿ ಮಕ್ಕಳನ್ನು ಹುಟ್ಟಿಸಲಿಕ್ಕೆ ಸಾಧ್ಯವಾ? ಇನ್ನೂ ಒಂದು ಸಂಶಯಕ್ಕೆ ಕಾರಣ ಎಂದರೆ ಅಸ್ತಮಾ ರೋಗದಿಂದ ಕ್ಯಾನ್ಸರ್ ರೋಗದವರೆಗೆ ಇರುವ ಎಲ್ಲ ರೋಗಗಳಿಗೂ ಒಂದೇ ಔಷಧ. ಇದ್ಯಾವ ನ್ಯಾಯ ? ಇದ್ಯಾವ ಪದ್ದತಿ ?

ಹರಳು ಬಾಬಾ ಚಿಕಿತ್ಸೆ ಕುರಿತ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

webdunia
WDWD
ಬಾಬಾನ ವಿರುದ್ದ ಇರುವ ಅಪಾದನೆಗಳು:

ಮೂಢನಂಬಿಕೆ ಉಚ್ಚಾಟನಾ ಸಮಿತಿ ಅಧ್ಯಕ್ಷ ಡಾ. ನರೇಂದ್ರ ದಾಬೋಲ್ಕರ್ ಅವರು ಹೇಳುವಂತೆ, ಇದು ಎಲ್ಲ ಸುಳ್ಳು. ಅವನು ಅನಕ್ಷರಸ್ಥ. ಅದ್ಯಾಗೆ ಡಾಕ್ಟರ್ ಆಗುವುದಕ್ಕೆ ಸಾಧ್ಯ? ಅದ್ಹೇಗೆ ರೋಗ ಗುಣಪಡಿಸುತ್ತಾನೆ? ಅವನ ವಿರುದ್ಧ ದೂರು ದಾಖಲಿಸಿದ್ದೇವೆ. ಆದರೆ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ. ಡಾ ರಾಜೇಂದ್ರ ಜೋಷಿ ಎಂಬ ಆರೋಗ್ಯಾಧಿಕಾರಿ ಒಬ್ಬರು ರಘುನಾಥ್ ಬಾಬಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಏನೂ ಆಗಿಲ್ಲ ಅದೊಂದು ಬಿಟ್ಟು, ಎಂದು ಸಿಟ್ಟಿನಿಂದ ಹೇಳಿ, ಬಾಬಾನ ವಿರುದ್ಧ ಚಳುವಳಿ ಮಾಡುವುದಾಗಿ ಘೋಷಿಸಿದ್ದಾರೆ.

ಹರಳು ತಲೆ ಮೇಲಿರಿಸಿ ರೋಗ ಪತ್ತೆ ಸಾಧ್ಯವೇ? ಮೂಲಿಕೆಗಳಿಂದ ಏಡ್ಸ್, ಕ್ಯಾನ್ಸರ್ ಗುಣಪಡಿಸಬಹುದೇ? ನೀವೇನನ್ನುತ್ತೀರಿ? ಇಲ್ಲಿ ಚರ್ಚಿಸಿ.

Share this Story:

Follow Webdunia kannada