Publish Date: Tue, 02 May 2017 (10:02 IST)
Updated Date: Tue, 02 May 2017 (10:09 IST)
ಬೆಂಗಳೂರು: ತುಳಸಿ ನಮ್ಮ ಹಿಂದೂ ಧರ್ಮದ ಪೂಜೆ ಪುನಸ್ಕಾರಗಳಲ್ಲಿ ಬಹುವಾಗಿ ಬಳಕೆಯಾಗುವ ಹೂವು. ಮಹಾ ವಿಷ್ಣುವಿಗೆ ಪ್ರಿಯವಾದ ತುಳಸಿಯನ್ನು ಮಧ್ಯಾಹ್ನದ ನಂತರ ಕೊಯ್ಯಬಾರದು ಎಂಬ ನಂಬಿಕೆಯಿದೆ.
ಯಾಕೆ ಗೊತ್ತಾ? ಅನ್ನ ಎಂಬುದು ನಮ್ಮ ಉದರಕ್ಕೆ ನೀಡುವ ಯಜ್ಞ. ಊಟವಾದ ಮೇಲೆ ದೇಹದ ಪರಿಶುದ್ಧತೆ ಕಡಿಮೆ ಎನ್ನಲಾಗುತ್ತದೆ. ಹಾಗಾಗಿ ತುಳಸಿಯನ್ನಾಗಲೀ, ದೇವರ ವಿಗ್ರಹವಾಗನ್ನಾಗಲೀ ಊಟವಾದ ಮೇಲೆ ಸ್ಪರ್ಶಿಸಬಾರದು ಎನ್ನಲಾಗುತ್ತದೆ.
ಮುಟ್ಟಿದರೆ ಅವುಗಳ ಪಾವಿತ್ರ್ಯತೆ ಮತ್ತು ಸಾನಿಧ್ಯತೆ ಕಡಿಮೆಯಾಗುತ್ತದೆ ಎನ್ನುವ ನಂಬಿಕೆ. ಅದೂ ಅಲ್ಲದೆ, ಸಂಜೆಯಾದಂತೆ ಸಸ್ಯಗಳ ಉಸಿರಾಟದ ಪ್ರಕ್ರಿಯೆ ಕಡಿಮೆಯಾಗುತ್ತದೆ. ಹಾಗಾಗಿ ಅಪರಾಹ್ನ ತುಳಸಿ ಗಿಡಕ್ಕೆ ಸುತ್ತು ಹಾಕುವುದು, ಕೊಯ್ಯುವುದು ಒಳ್ಳೆಯದಲ್ಲ ಎನ್ನುವುದು ನಂಬಿಕೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ