Publish Date: Thu, 24 Aug 2017 (08:35 IST)
Updated Date: Thu, 24 Aug 2017 (08:37 IST)
ಬೆಂಗಳೂರು: ಪ್ರತೀ ಮನೆಯಲ್ಲಿ ಸಂಧ್ಯಾಕಾಲದಲ್ಲಿ ದೀಪ ಉರಿಸಿ ನಮಸ್ಕಾರ ಮಾಡುವ ಪದ್ಧತಿಯಿರುತ್ತದೆ. ಸಂಜೆ ವೇಳೆ ದೇವರ ಮುಂದೆ ದೀಪ ಹಚ್ಚಿ ನಮಸ್ಕರಿಸುವುದು ಏಕೆ ಗೊತ್ತಾ?
ದೀಪ ಎನ್ನುವುದು ನಮ್ಮ ಭಕ್ತಿ, ಪ್ರಾರ್ಥನೆಯ ಕೂಗು ದೇವರಿಗೆ ತಲುಪಿಸುವ ಮಾರ್ಗವಿದ್ದಂತೆ. ಹಾಗಗಿ ದೀಪ ಹಚ್ಚಿ ದೇವರ ಮುಂದೆ ನಿಂತು ನಾವು ಏನೇ ಬೇಡಿಕೊಂಡರೂ ಅದು ದೇವರಿಗೆ ತಲುಪುತ್ತದೆ ಎಂಬ ನಂಬಿಕೆ.
ಇನ್ನೊಂದು ಕಾರಣವೆಂದರೆ, ದೀಪ ನೋಡುತ್ತಾ ದೇವರಿಗೆ ಅನನ್ಯ ಭಕ್ತಿಯಿಂದ ಕೈ ಮುಗಿಯುತ್ತಿದ್ದರೆ, ನಮ್ಮ ಏಕಾಗ್ರತೆಯೆಲ್ಲಾ ದೀಪದಲ್ಲಿ ಇರುತ್ತದೆ. ಅಂದರೆ ಒಂದೇ ಕಡೆಗೆ ಇರುತ್ತದೆ. ಬೇಡದ ವಿಚಾರದತ್ತ ಹೊರಳುವುದಿಲ್ಲ ಎನ್ನುವ ಕಾರಣಕ್ಕೆ ದೀಪ ಹಚ್ಚಿ ನಮಸ್ಕರಿಸಲಾಗುತ್ತದೆ.