Publish Date: Thu, 18 May 2017 (07:05 IST)
Updated Date: Thu, 18 May 2017 (07:08 IST)
ಬೆಂಗಳೂರು: ದೇವರ ವಿಗ್ರಹ ಶೋಭೆಯಿಂದ ಕಂಗೊಳಿಸಲು ಗಂದ, ಕುಂಕುಮ, ಪುಷ್ಪಾಲಂಕಾರ ಮಾಡುವರು. ಇದೆಲ್ಲದಕ್ಕೂ ಯಾವ್ಯಾವ ಅರ್ಥವಿದೆ ನೋಡೋಣ.
ಭೂಮಿಯ ಸ್ವರೂಪವಾಗಿ ಗಂಧ, ನೀರಿನ ಸ್ವರೂಪವಾಗಿ ಅಭಿಷೇಕ, ಅಗ್ನಿಯ ಸ್ವರೂಪವಾಗಿ ಮಂಗಳಾರತಿ, ವಾಯುವಿನ ಸ್ವರೂಪವಾಗಿ ನೈವೇದ್ಯದ ಸಮರ್ಪಣೆ ಆಕಾಶದ ಸ್ವರೂಪವಾಗಿ ಕೈ ಮೇಲೆತ್ತಿ ಪ್ರಾರ್ಥನೆ ಮಾಡುವುದು.
ವಿಗ್ರಹಕ್ಕೆ ಗಂಧ, ಕುಂಕುಮ ಹಚ್ಚುವುದರಿಂದ ಅದರಲ್ಲಿರುವ ಶಾಖ ಕಡಿಮೆಯಾಗಿ ತಂಪಾಗುತ್ತದೆ. ವಿಗ್ರಹದ ಸುತ್ತಲಿನ ವಾತಾವರಣ ನಿರ್ಮಲವಾಗಿರುತ್ತದೆ ಎನ್ನುವುದು ವೈಜ್ಞಾನಿಕ ನಂಬಿಕೆ. ಈ ಕಾರಣಕ್ಕೆ ವಿಗ್ರಹಕ್ಕೆ ಗಂಧ, ಕುಂಕುಮ, ಪುಷ್ಪಗಳಿಂದ ಅಲಂಕಾರ ಮಾಡಲಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ