Select Your Language

Notifications

webdunia
webdunia
webdunia
webdunia

ಮಳೆಗಾಲದಲ್ಲಿ ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳುವುದು ಹೇಗೆ..?

Monsoon
ಮಳೆಗಾಲ ಆರಂಭವಾಯಿತೆಂದರೆ ಶೀತ, ಉಸಿರಾಟದ  ತೊಂದರೆ, ಚರ್ಮದ ಸೋಂಕು ಹೆಚ್ಚಾಗುತ್ತದೆ. ಋತುವಿನ ಬದಲಾವಣೆಗೆ ತಕ್ಕಂತೆ ಆಹಾರ, ಉಡುಗೆ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯ. ಹಾಗಾಗಿ ಮಳೆಗಾಲದಲ್ಲಿ ಚರ್ಮದ ಸೌಂದರ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ.
 
* ಮಳೆಗಾಲದಲ್ಲಿ ಕೇವಲ ಶೀತವಲ್ಲದೆ ಚರ್ಮಕ್ಕೆ ಸೋಂಕು ತಗುಲುವುದು ಹೆಚ್ಚು. ಅದಕ್ಕಾಗಿ ಮುಖದ ಜತೆಗೆ ಕೈ, ಕಾಲು ಹಾಗೂ ಚರ್ಮದ ಆರೈಕೆಯೂ ಅತ್ಯಗತ್ಯ. ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ಸ್ವಲ್ಪ ಆಲೀವ್‌ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿ ಮಲಗಬೇಕು. ಇದು ದೇಹದಲ್ಲಿನ ಶಾಖವನ್ನು ಕಾಪಾಡುತ್ತದೆ.
 
* ಕಡಲೆಹಿಟ್ಟು ಸೋಪಿನಂತೆ ಕಾರ್ಯ ನಿರ್ವಹಿಸುತ್ತದೆ. ಇದನ್ನು ಬೆಚ್ಚಗಿನ ಅಥವಾ ತಣ್ಣನೆಯ ನೀರಿನಲ್ಲಿ ತೊಳೆಯಬಹುದು. ರೋಗ ನಿರೋಧಕ ಶಕ್ತಿಗಾಗಿ ಕಡಲೆ ಹಿಟ್ಟಿನೊಂದಿಗೆ ತುಳಸಿ ದಳದ ಪುಡಿಯನ್ನು ಬಳಸಬಹುದು.
 
* ಮಳೆಯಲ್ಲಿ ನೆನೆದಾಗ ಸ್ನಾನ ಮಾಡುವ ಮುನ್ನ ಒಂದು ಮಗ್‌ ನೀರಿಗೆ ಕೊಂಚ ಆಲಿವ್ ಆಯಿಲ್‌ ಬೆರೆಸಿ ಬಳಸಬೇಕು. ಇದರಿಂದ ಶೀತ ಮತ್ತು ಜ್ವರ ಕಡಿಮೆಯಾಗುತ್ತದೆ.
 
* ಹೆಬ್ಬೆರಳು ಮತ್ತು ಪಾದಕ್ಕೆ ಕೊಬ್ಬರಿ ಎಣ್ಣೆಯಲ್ಲಿ ಅರಿಶಿಣ ಬೆರೆಸಿ ಹಚ್ಚಿದರೆ ಶೀತ ಆಗುವುದಿಲ್ಲ. ಅಲ್ಲದೇ ಪಾದವು ಒಡೆಯುವುದಿಲ್ಲ. 
 
* ಜಾಜಿ ಮಲ್ಲಿಗೆ ಎಲೆ, ಚಿಟಿಕೆ ಅರಿಶಿಣ ಮತ್ತು ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಬೆರಳುಗಳ ಮಧ್ಯೆ ಆಗುವ ಕೆಸರು ಹುಣ್ಣು ಕಡಿಮೆಯಾಗುತ್ತದೆ. 
 
* ಪುದಿನ, ತುಳಸಿ ಎಳೆಯ ಪುಡಿಯನ್ನು ಕಡಲೆಹಿಟ್ಟಿನ ಜತೆ ಬೆರೆಸಿ ಬಳಸುವುದರಿಂದ ಸೊಳ್ಳೆ ಕಡಿತದಿಂದ ಆಗುವ ಗುಳ್ಳೆ ಮತ್ತು ಕಲೆ ಮಾಯವಾಗುತ್ತದೆ. 
 
* ಒಣ ಚರ್ಮವಿರುವವರು ಬಾದಾಮಿ ಪೇಸ್ಟ್ ಅಥವಾ ಜೇನುತುಪ್ಪವನ್ನು ಕ್ಲೇನ್ಸರ್ ಆಗಿ ಬಳಸಬಹುದು. ಇದರಿಂದ ಮುಖ ಒಣಗದಂತೆ ನೋಡಿಕೊಳ್ಳಬಹುದು.
 
* ಎಣ್ಣೆ ಚರ್ಮದವರಾಗಿದ್ದರೆ ಸೌತೆಕಾಯಿ ರಸಕ್ಕೆ ರೋಸ್ ವಾಟರ್ ನ್ನು ಮಿಶ್ರಣ ಮಾಡಿ ಟೋನರ್ ಆಗಿ ಬಳಸಿಕೊಳ್ಳಬಹುದು.
 

Share this Story:

Follow Webdunia kannada

ಮುಂದಿನ ಸುದ್ದಿ

ಹಾಲಿನ ಜತೆ ಇವೆರಡನ್ನು ಸೇರಿಸಿದರೆ ನಡೆಯುವ ಮ್ಯಾಜಿಕೇ ಬೇರೆ!