ಈ ಎಂಟು ಜಾಗಗಳಿಗೆ ಹೋಗುವಾಗ ಬರಿಗೈಯಲ್ಲಿ ಹೋಗಬಾರದು!

Webdunia
ಮಂಗಳವಾರ, 23 ಆಗಸ್ಟ್ 2022 (08:20 IST)
ಬೆಂಗಳೂರು: ಸಾಮಾನ್ಯವಾಗಿ ದೇವಾಲಯಕ್ಕೆ ಅಥವಾ ನೆಂಟರ ಮನೆಗೆ ಹೋಗುವಾಗ ಬರಿಗೈಯಲ್ಲಿ ಹೋಗಬಾರದು ಎನ್ನುತ್ತಾರೆ. ಹೀಗೇ ನಮ್ಮ ಧಾರ್ಮಿಕ ಶ್ರದ್ಧೆಯ ಪ್ರಕಾರ ಎಂಟು ಸ್ಥಳಗಳಿಗೆ ನಾವು ಬರಿಗೈಯಲ್ಲಿ ಹೋಗಬಾರದು. ಅವುಗಳು ಯಾವುವು ನೋಡೋಣ.

ವೇದಸಂಪನ್ನರ ಮನೆಗೆ: ವೇದಾಧ‍್ಯಯನ ಸಂಪನ್ನರ ಮನೆಗೆ ಹೋಗುವಾಗ ಹೂವು, ಹಣ್ಣುಗಳನ್ನು ತೆಗೆದುಕೊಂಡು ಹೋಗಬೇಕು.
ಗರ್ಭಿಣಿ ಸ್ತ್ರೀಯರನ್ನು ನೋಡಲು ಹೋಗುವಾಗ: ಹೊಟ್ಟೆಯೊಳಗೆ ಇನ್ನೊಂದು ಜೀವವಿಟ್ಟುಕೊಂಡಿರುವ ಗರ್ಭಿಣಿಯರು ಮಹಾತಾಯಿ ಎಂದೇ ಪರಿಗಣಿತರಾಗಿರುತ್ತಾರೆ. ಅವರನ್ನು ನೋಡಲು ಹೋಗುವಾಗ ಅವರ ಇಷ್ಟವಸ್ತುಗಳನ್ನು ಕೇಳಿ ತಿಳಿದು ತೆಗೆದುಕೊಂಡು ಹೋಗಬೇಕು.
ತೀರ್ಥಕ್ಷೇತ್ರಗಳಿಗೆ: ದೇವಾಲಯಗಳಿಗೆ ಮಾತ್ರವಲ್ಲ, ತೀರ್ಥ ಯಾತ್ರೆಗಳಿಗೆ ತೆರಳುವಾಗ ಪುಣ್ಯ ಕ್ಷೇತ್ರಗಳಿಗೂ ಬರಿಗೈಯಲ್ಲಿ ಹೋಗುವಂತಿಲ್ಲ.
ವೃದ್ಧರನ್ನು ನೋಡಲು ಹೋಗುವಾಗ: ವೃದ್ಧರು ಮಕ್ಕಳ ಸಮಾನ. ಅವರನ್ನು ನೋಡಲು ಹೋಗುವಾಗಲೂ ಬರಿಗೈಯಲ್ಲಿ ಹೋಗಬಾರದು.
ಮಕ್ಕಳನ್ನು ನೋಡಲು ಹೋಗುವಾಗ: ಚಿಕ್ಕಮಕ್ಕಳು ಮನೆಗೆ ಯಾರೇ ಬಂದರೂ ನಮ್ಮ ಕೈಯಲ್ಲಿ ಏನಿದೆ ಎಂದೇ ನೋಡುತ್ತಾರೆ. ಹೀಗಾಗಿ ಅವರನ್ನೂ ನಿರಾಶೆಗೊಳಿಸಬಾರದು.
ರಾಜರನ್ನು ನೋಡುವಾಗ: ನಮ್ಮ ಪ್ರಭುವಿನ ಸಮಾನರನ್ನು ನೋಡಲು ಹೋಗುವಾಗ ಏನಾದರೂ ಕಾಣಿಕೆ ನೀಡಬೇಕು.
ದೇವರ ದರ್ಶನ: ದೇವಾಲಯಕ್ಕೆ ದೇವರ ದರ್ಶನಕ್ಕೆ ಹೋಗುವಾಗ ಹೂವು, ಹಣ್ಣು, ದೀಪದ ಎಣ್ಣೆ ಅಥವಾ ಇನ್ಯಾವುದೇ ವಸ್ತುವನ್ನು ಕೊಂಡೊಯ್ಯುವುದು ಶ್ರೇಷ್ಠ.
ಗುರು ದರ್ಶನ: ಗುರುಗಳೂ ದೇವರ ಸಮಾನ. ಅವರಿಗೂ ಫಲ ವಸ್ತುಗಳನ್ನು ನೀಡುವುದು ಉತ್ತಮ ಸಂಸ್ಕಾರ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸರಸ್ವತಿ ಕವಚ ಸ್ತೋತ್ರ ಕನ್ನಡದಲ್ಲಿ ಮತ್ತು ಓದುವುದರ ಫಲವೇನು

ದೇವಿ ಮಹಾತ್ಮ್ಯಂ ಮಂಗಳಂ ನೀರಾಜಣಂ ಸ್ತೋತ್ರ

ತಪ್ಪುಗಳಿಗೆ ಕ್ಷಮಾಪಣೆ ಸಿಗಬೇಕೆಂದರೆ ಶಿವನ ಈ ಸ್ತೋತ್ರ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಪಠಣದ ಅದ್ಭುತ ಪ್ರಯೋಜನಗಳು

ಮಹಾಲಕ್ಷ್ಮಿ ಅಷ್ಟಕಂ ಮತ್ತು ಅದರ ಸರಳ ಅರ್ಥ ಇಲ್ಲಿದೆ

ಮುಂದಿನ ಸುದ್ದಿ
Show comments