Webdunia - Bharat's app for daily news and videos

Install App

ನಿಮ್ಮ ರಾಶಿಗನುಗುಣವಾಗಿ ಯಾವ ಬಣ್ಣ ತೊಡಬೇಕು?

Webdunia
ಬುಧವಾರ, 9 ಜನವರಿ 2019 (09:02 IST)
ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಬಣ್ಣ ಹೊಂದುತ್ತದೆ. ಹಾಗೆಯೇ ಕೆಲವೊಂದು ಬಣ್ಣ ತೊಡುವುದರಿಂದ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ ಯಾವ ರಾಶಿಯವರು ಯಾವ ಬ‍ಣ್ಣಕ್ಕೆ  ಪ್ರಾಶಸ್ತ್ಯ ನೀಡಬೇಕು? ಇಲ್ಲಿದೆ ನೋಡಿ.


ಮೇಷ: ಹಳದಿ, ಹಸಿರು ಬಣ್ಣದ ಉಡುಗೆಗಳು ಶುಭಪ್ರದ. ಶುಭ ಸಂದರ್ಭಗಳಲ್ಲಿ ಕೆಂಪು ಬಣ್ಣದ ಉಡುಗೆ ಬೇಡ.

ವೃಷಭ: ಆಪಲ್ ಗ್ರೀನ್, ಕಡು ಕೆಂಪು ಬಣ್ಣದ ಉಡುಗೆ ನಿಮಗೆ ಅದೃಷ್ಟ ತರುತ್ತದೆ.

ಮಿಥುನ: ಬಿಳಿ, ನಸು ಬೂದು ಬಣ್ಣದ ಉಡುಗೆ ಉತ್ತಮ. ಬುಧವಾರಗಳಂದು ಹಸಿರು ಬಣ್ಣದ ಉಡುಗೆ ತೊಟ್ಟರೆ ಅದೃಷ್ಟ ಖುಲಾಯಿಸುತ್ತದೆ.

ಕರ್ಕಟಕ: ನೀಲಿ ಮತ್ತು ಕೆಂಪು ಬಣ್ಣದ ಉಡುಗೆ ಶುಭದಾಯಕ. ಸೋಮವಾರಗಳಂದು ಸಮುದ್ರ ನೀಲ, ಅಥವಾ ಹಸಿರು ಬಣ್ಣದ ಉಡುಗೆ ತೊಟ್ಟರೆ ಒಳ್ಳೆಯದಾಗುತ್ತದೆ.

ಸಿಂಹ: ಬಿಳಿ ಮತ್ತು ಚಿನ್ನದ ಬಣ್ಣದ ವಸ್ತ್ರಗಳು ನಿಮಗೆ ಅದೃಷ್ಟ ತರುತ್ತವೆ. ಹಾಗೆಯೇ ಕಂದು ಬಣ್ಣ, ತಿಳಿ ಹಸಿರು ಬಣ್ಣಗಳೂ ಉತ್ತಮ.

ಕನ್ಯಾ: ಹಸಿರು, ನೀಲ, ಬಣ್ಣ ಅದೃಷ್ಟಶಾಲಿ. ಅದರಲ್ಲೂ ಬುಧವಾರಗಳಂದು ಹಸಿರು ಬಣ್ಣದ ತೊಡುಗೆ ಮತ್ತಷ್ಟು ಶುಭಪ್ರದ.

ತುಲಾ:ಬಿಳಿ, ಹಸಿರು, ಮತ್ತು ನೀಲ ಬಣ್ಣದ ಉಡುಗೆ ನಿಮಗೆ ಶುಭ ಫಲ ಕೊಡಲಿದೆ. ಅದರಲ್ಲೂ ಶುಕ್ರವಾರಗಳಂದು ಕ್ರೀಮ್ ಕಲರ್ ಮತ್ತು ಬಿಳಿ ಬಣ್ಣದ ಉಡುಪು ಧರಿಸಿ.

ವೃಶ್ಚಿಕಾ: ಬೂದು, ನೀಲ ಮತ್ತು ಬಿಳಿ ಬಣ್ಣದ ವಸ್ತ್ರಗಳು ಅದೃಷ್ಟ ತರುತ್ತವೆ.

ಧನು: ಹಸಿರು, ಕೇಸರಿ, ಮತ್ತು ಮಂಗಳವಾರಗಳಂದು ಹಳದಿ ಉಡುಪು ಧರಿಸುವುದರಿಂದ ಅದೃಷ್ಟ.

ಮಕರ: ನೀಲ ಮತ್ತು ಹಸಿರುವ ಬಣ್ಣ ನಿಮಗೆ ಶುಭ ಪ್ರದವಾಗಲಿದೆ.

ಕುಂಭ: ಕೆಂಪು, ಆಕಾಶ ನೀಲ ಮತ್ತು ಹಸಿರು ಬಣ್ಣದ ಉಡುಗೆ ತೊಟ್ಟರೆ ಅದೃಷ್ಟ ಬರುತ್ತದೆ.

ಮೀನ: ಆದಷ್ಟು ಹಸಿರು ಬಣ್ಣದ ಉಡುಗೆ ತೊಡಿ. ಮಂಗಳವಾರಗಳಂದು ತಿಳಿ ಹಳದಿ ಉಡುಗೆ ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷವಿರುವವರು ಇಂದು ಆಂಜನೇಯನ ಈ ಸ್ತೋತ್ರವನ್ನು ಓದಿ

ಮಂಗಳವಾರ ಅಪ್ಪಿ ತಪ್ಪಿಯೂ ಈ ತಪ್ಪು ಮಾಡ್ಬೇಡಿ

ವಿಷ್ಣು ಶತನಾಮ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

Ganesha Festival: ಈ ಒಂದು ನೈವೇದ್ಯ ಗಣೇಶನಿಗೆ 21 ಭಕ್ಷ್ಯ ಅರ್ಪಿಸಿದ ಹಾಗೇ

Ganesha Festival 2025: ಮನೆಗೆ ಗಣೇಶ ಮೂರ್ತಿ ತರುವಾಗ ಈ ತಪ್ಪನ್ನು ಮಾಡಬೇಡಿ, ಮನೆಗೆ ಶ್ರೇಯಸ್ಸಲ್ಲ

ಮುಂದಿನ ಸುದ್ದಿ
Show comments