Select Your Language

Notifications

webdunia
webdunia
webdunia
webdunia

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ
ಬೆಂಗಳೂರು , ಗುರುವಾರ, 19 ಸೆಪ್ಟಂಬರ್ 2019 (09:02 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


ಮೇಷ: ಕೃಷಿಕರಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಕಾಲ. ಸಾಕಷ್ಟು ಧನಲಾಭವಾಗಲಿದೆ. ನೌಕರರಿಗೆ ಬಿಡುವಿಲ್ಲದ ಕೆಲಸ. ಮಹಿಳಾ ಉದ್ಯೋಗಿಗಳಿಗೆ ಕಾರ್ಯಲಾಭ. ಮನೆಯಲ್ಲಿ ಮಂಗಲ ಕಾರ್ಯ ನಡೆಸಲು ಚಿಂತನೆ ನಡೆಸುವಿರಿ.

ವೃಷಭ: ಎಂತಹದ್ದೇ ಸವಾಲುಗಳು ಎದುರಾದರೂ ನಿಮ್ಮ ಕರಾರುವಾಕ್ ಯೋಜನೆಯಿಂದ ಅದನ್ನು ದಾಟಿ ಸಫಲತೆ ಸಾಧಿಸುವಿರಿ. ಆರ್ಥಿಕವಾಗಿ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸುವಿರಿ. ಉನ್ನತ ಸ್ಥಾನ ಮಾನ ಯೋಗವಿದೆ. ದೈವಾನುಕೂಲ ಇಂದು ನಿಮ್ಮ ಮೇಲಿದೆ.

ಮಿಥುನ: ವ್ಯಾಪಾರಿಗಳಿಗೆ ಸಾಕಷ್ಟು ಆದಾಯವಿದ್ದರೂ ಅದನ್ನು ಗಳಿಸಲು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಆರೋಗ್ಯದಲ್ಲಿ ಏರುಪೇರಾಗುವ ಸಾಧ‍್ಯತೆಯಿದೆ. ಎಚ್ಚರಿಕೆ ಅಗತ್ಯ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಸಂಗಾತಿಯ ಸಹಕಾರ ಸಿಗುವುದು.

ಕರ್ಕಟಕ: ಕೂಡಿಟ್ಟ ಹಣ ತುಂಬಾ ಸಮಯ ಬಾರದು ಎಂಬುದನ್ನು ಮರೆಯದಿರಿ. ಆಲಸ್ಯತನ ಬಿಟ್ಟು ಕೆಲಸ ಮಾಡಬೇಕಾದ ದಿನವಿದು. ಕಲಾ ಕ್ಷೇತ್ರದಲ್ಲಿರುವವರು ಕೀರ್ತಿ ಸಂಪಾದಿಸಲಿದ್ದಾರೆ. ಮಕ್ಕಳಿಂದ ಶುಭ ಫಲ ಸಿಗುವುದು. ತಾತ್ಕಾಲಿಕ ವೃತ್ತಿಯವರಿಗೆ ಖಾಯಂ ಉದ್ಯೋಗ ಸಿಗಲಿದೆ.

ಸಿಂಹ: ಆಲಸ್ಯತನ ಮೈಮರೆವು ತೋರಿದರೆ ಹಿತಶತ್ರುಗಳಿಂದ ವಂಚನೆಗೊಳಗಾಗುವ ಭೀತಿಯಿದೆ. ನಿಮ್ಮ ಎಚ್ಚರಿಕೆಯಲ್ಲಿ ನೀವಿರಬೇಕಾದ ದಿನವಿದು. ವಿದ್ಯಾರ್ಥಿಗಳಿಗೆ, ಶೈಕ್ಷಣಿಕ ಕ್ಷೇತ್ರದಲ್ಲಿರುವವರಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಗೆ ಅವಕಾಶ ಕೊಡದಿರಿ.

ಕನ್ಯಾ: ನಿಮ್ಮ ಕೆಲವೊಂದು ನಿರ್ಧಾರಗಳು ಸಹೋದರರ ಅಸಮಾಧಾನಕ್ಕೆ ಕಾರಣವಾಗಬಹುದು. ಆಸ್ತಿ ವಿವಾದಗಳಲ್ಲಿ ಹಿರಿಯರ ಮಧ್ಯಸ್ಥಿಕೆಗೆ ಬೆಲೆಕೊಡಿ. ನಿಮ್ಮ ಮೋಜಿಗಾಗಿ ನೀರಿನಂತೆ ಹಣ ಖರ್ಚು ಮಾಡಲಿದ್ದೀರಿ. ದಿನದಂತ್ಯಕ್ಕೆ ಶುಭ ಸುದ್ದಿಯಿದೆ.

ತುಲಾ: ಕೆಲಸ ಮಾಡುವ ಸ್ಥಳದಲ್ಲಿ ನಿಮಗೆ ಹಲವು ಅಡೆತಡೆಗಳು ಎದುರಾಗಬಹುದು. ಇದು ನಿಮ್ಮ  ಅಭಿವೃದ್ಧಿಗೆ ತೊಂದರೆ ಉಂಟುಮಾಡಲಿದೆ. ಎಚ್ಚರಿಕೆಯಿಂದ ವ್ಯವಹಾರ ಮಾಡಿದಲ್ಲಿ ಲಾಭ ಗ್ಯಾರಂಟಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉತ್ಸಾಹ ಕಂಡುಬರುವುದು.

ವೃಶ್ಚಿಕ: ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡಬೇಕಾದೀತು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಹಾಗಿದ್ದರೂ ಕೆಲವು ವಿಘ‍್ನಗಳು ಎದುರಾದೀತು. ಹಿರಿಯರಿಗೆ ತೀರ್ಥ ಯಾತ್ರೆಯ ಭಾಗ್ಯವಿದೆ. ಕುಲದೇವರ ಪ್ರಾರ್ಥನೆ ಮಾಡಿ.

ಧನು: ನಿಮ್ಮ  ಅತಿಯಾದ ಮಾತು ನಿಮಗೇ ಮುಳುವಾಗಲಿದೆ. ಇಷ್ಟು ದಿನ ಕೂಡಿಟ್ಟಿದ್ದ ರಹಸ್ಯ ಬಹಿರಂಗವಾಗಲಿದೆ. ಸಂಸಾರದಲ್ಲಿ ಹೊಂದಾಣಿಕೆಯಿಂದ ನಡೆದುಕೊಳ್ಳುವುದು ಅಗತ್ಯ. ಸಂಚಾರದಲ್ಲಿ ವಿಘ‍್ನಗಳು ಎದುರಾದೀತು. ಖರ್ಚಿನಲ್ಲಿ ಮಿತಿಯಿರಲಿ.

ಮಕರ: ವ್ಯಾಪಾರಿ ವರ್ಗದವರಿಗೆ ಇಂದು ನಷ್ಟ  ಅನುಭವಿಸಬೇಕಾದ ಪರಿಸ್ಥಿತಿ ಎದುರಾದೀತು. ಅತೀ ವಿನಯ ನಟಿಸುವವರ ಜತೆ ವ್ಯವಹರಿಸುವಾಗ ಎಚ್ಚರವಿರಲಿ. ಗೃಹೋಪಯೋಗಿ ವಸ್ತುಗಳಿಗಾಗಿ ಧನವಿನಿಯೋಗ ಮಾಡಬೇಕಾಗುತ್ತದೆ. ಸಂಗಾತಿಯ ಮನೋಕಾಮನೆ ಪೂರೈಸುವಿರಿ.

ಕುಂಭ: ಹೊಸ ಕೆಲಸಗಳಿಗೆ ಕೈ ಹಾಕುವಾಗ ವಿಘ‍್ನಗಳು ಎದುರಾದೀತು, ಹಾಗಿದ್ದರೂ ಧೈರ್ಯದಿಂದ ಮುನ್ನಡೆಸದರೆ ಯಶಸ್ಸು ಸಾಧ‍್ಯ. ಕಾರ್ಯದೊತ್ತಡದಿಂದ ಮನಸ್ಸಿಗೆ ಬೇಸರವೆನಿಸಲಿದೆ. ಉದ್ಯೋಗ ಬದಲಾವಣೆಗೆ ಚಿಂತನೆ ನಡೆಸುವಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮೀನ: ಸಂಗಾತಿಯ ಸಲಹೆಗಳು ಪಥ್ಯವಾಗದೇ ಕುಟುಂಬದಲ್ಲಿ ಕಲಹಕ್ಕೆ ಕಾರಣವಾದೀತು. ತಾಳ್ಮೆಯಿಂದ ನಡೆದುಕೊಳ್ಳುವುದು ಮುಖ್ಯ. ನೂತನ ದಂಪತಿಗಳಿಗೆ ಸಂತಾನ ಭಾಗ್ಯವಿದೆ. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿತೃ ಕಾರ್ಯ ಯಾಕೆ ಮಾಡಬೇಕು?