ಪೂಜೆಗೆ ಮೊದಲು ಸಂಕಲ್ಪ ಮಾಡುವುದರ ಮಹತ್ವವೇನು ಗೊತ್ತಾ?

Webdunia
ಗುರುವಾರ, 14 ಫೆಬ್ರವರಿ 2019 (08:56 IST)
ಬೆಂಗಳೂರು: ದೇವಾಲಯವಿರಲಿ, ಮನೆಯಲ್ಲೇ ಏನಾದರೂ ಪೂಜೆ ಮಾಡಿಸುತ್ತಿರಲಿ, ಪೂಜೆಗೆ ಮೊದಲು ಸಂಕಲ್ಪ ಮಾಡುವ ಪದ್ಧತಿಯಿದೆ. ಇದರ ಮಹತ್ವವೇನು ಗೊತ್ತಾ?


ಸಂಕಲ್ಪ ಎಂದರೆ ನಮ್ಮ ಮನಸ್ಸಿನಲ್ಲಿ ಇರುವ ಆಸೆ, ಮುಖ್ಯವಾದ ಯೋಜನೆ, ಮತ್ತು ಮಾಡಬೇಕಾದ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವಂತೆ ದೇವರ ಮುಂದೆ ಬೇಡಿಕೊಳ್ಳುವುದು.

ಸಂಕಲ್ಪದ ಸಮಯದಲ್ಲಿ ಗುರು ಹಿರಿಯರನ್ನು, ತಂದೆ ತಾಯಿಯರನ್ನು ನೆನೆಸಿಕೊಂಡು ನಮ್ಮ ಮುಂದಿನ ಗುರಿ ಸಾಧಿಸುವುದಕ್ಕೆ ದೇವರ ಮುಂದೆ ಪ್ರಾರ್ಥಿಸಬೇಕು. ನಮ್ಮ ಮನೋಭಿಲಾಷೆಯನ್ನು ಭಗವಂತನಲ್ಲಿ ಅರ್ಪಿಸಬೇಕು.

ಸಂಕಲ್ಪವನ್ನು ಎಷ್ಟು ಶ್ರದ್ಧೆಯಿಂದ ಮಾಡುತ್ತೇವೋ, ಅಷ್ಟೇ ಯಶಸ್ಸು ಸಿಗುವುದು. ಇಲ್ಲದಿದ್ದರೆ ಯಾವುದೇ ಪೂಜೆ, ಜಪ ತಪಗಳು ಫಲ ಕೊಡುವುದಿಲ್ಲ. ಒಂದು ನಿರ್ದಿಷ್ಟವಾದ ಮನೋ ನಿಶ್ಚಯವಿದ್ದರಷ್ಟೇ ಪೂಜೆಯ ಫಲ ಸಿಗುವುದು. ಅದಕ್ಕಾಗಿ ಶ್ರದ್ಧೆಯಿಂದ ಸಂಕಲ್ಪ ಮಾಡಿಕೊಳ್ಳುವುದು ಮುಖ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಜ್ಯೋತಿಷ್ಯ ಪ್ರಕಾರ ತುಲಾ ರಾಶಿಯವರ ಆಹಾರ ಹೇಗಿರಬೇಕು

ದುರ್ಗಾ ಕವಚ ಸ್ತೋತ್ರ ಇಂದು ತಪ್ಪದೇ ಓದಿ

ಜ್ಯೋತಿಷ್ಯ ಪ್ರಕಾರ ಕನ್ಯಾ ರಾಶಿಯವರ ಆಹಾರ ಕ್ರಮ ಹೇಗಿರಬೇಕು

ಸೋಮವಾರ ಶಿವ ಪಂಚಾಕ್ಷರಿ ಸ್ತೋತ್ರ ಓದಿ

ಜ್ಯೋತಿಷ್ಯ ಪ್ರಕಾರ ಸಿಂಹ ರಾಶಿಯವರು ಯಾವ ಆಹಾರ ಸೇವಿಸಬೇಕು

ಮುಂದಿನ ಸುದ್ದಿ
Show comments