Webdunia - Bharat's app for daily news and videos

Install App

ಬಾಳೆಗಿಡಗಳಿಗೆ ಮದುವೆ ಮಾಡಿಸುವುದು ಯಾಕೆ?

Krishnaveni K
ಶುಕ್ರವಾರ, 2 ಫೆಬ್ರವರಿ 2024 (12:36 IST)
WD
ಬೆಂಗಳೂರು: ಜಾತಕದಲ್ಲಿರುವ ಎರಡು ಮದುವೆ ಯೋಗ ದೋಷ ನಿವಾರಣೆಗೆ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಪರಿಹಾರ ಕಾರ್ಯಗಳಿಗೆ. ಅದರಲ್ಲಿ ಬಾಳೆ ಗಿಡಗಳಿಗೆ ಮದುವೆ ಮಾಡುವ ಕದಳೀ ವಿವಾಹ ಪರಿಹಾರ ಒಂದು.

ಮಹಿಳೆಯರಿಗೆ ಜಾತಕದಲ್ಲಿ ಕುಜ ದೋಷ ಅಥವಾ ಎರಡು ಮದುವೆ ಯೋಗವಿದ್ದಾಗ ಕುಂಭ ವಿವಾಹ ಮಾಡಲಾಗುತ್ತದೆ. ಮಡಕೆಯನ್ನು ಮಹಾವಿಷ್ಣುವಿನ ಪ್ರತಿರೂಪವಾಗಿ ಕಲ್ಪಿಸಿಕೊಂಡು ಯುವತಿಗೆ ಮದುವೆ ಶಾಸ್ತ್ರಗಳನ್ನು ಮಾಡಿ ದೋಷ ಕಳೆಯಲಾಗುತ್ತದೆ. ಕೊನೆಯಲ್ಲಿ ಕುಂಭವನ್ನು ನೀರಿನಲ್ಲಿ ಬಿಟ್ಟು ಮದುವೆ ಶಾಸ್ತ್ರ ಸಂಪನ್ನಗೊಳಿಸಲಾಗುತ್ತದೆ. ಅದೇ ರೀತಿ ಪುರುಷರಿಗೆ ಕದಳೀ ವಿವಾಹ ಕಾರ್ಯ ಮಾಡಲಾಗುತ್ತದೆ.

ಕದಳೀ ವಿವಾಹವೆಂದರೇನು?
ಪುರುಷರಲ್ಲಿ ಎರಡು ಮದುವೆ ಯೋಗ ಅಥವಾ ಕುಜದೋಷವಿದ್ದಾಗ ಕದಳೀ ವಿವಾಹ ಮಾಡಲಾಗುತ್ತದೆ. ಬಾಳೆ ಗಿಡವನ್ನು ವಧುವಿನಂತೆ ಸಿಂಗರಿಸಿ ವಿವಾಹ ಯೋಗ್ಯ ಪುರುಷನ ಜೊತೆ ವಿವಾಹದ ವಿಧಿ  ವಿಧಾನಗಳನ್ನು ಮಾಡಲಾಗುತ್ತದೆ. ತಾಳಿ ಶಾಸ್ತ್ರ, ಹೂ ಮಾಲೆ ಶಾಸ್ತ್ರ ಇತ್ಯಾದಿ ಮಾಡಿ ಬಳಿಕ ಆ ಬಾಳೆಗಿಡವನ್ನು ಕಡಿದು ಹಾಕುವ ಮೂಲಕ ಮದುವೆ ಮುರಿದು ಬಿದ್ದಂತೆ ಶಾಸ್ತ್ರ ಮಾಡಲಾಗುತ್ತದೆ. ಆ ಮೂಲಕ ಆ ವರನ ಜಾತಕದಲ್ಲಿದ್ದ ದೋಷ ನಿವಾರಣೆ ಮಾಡಲಾಗುತ್ತದೆ.

ಜಾತಕದಲ್ಲಿ ರಾಹು-ಶುಕ್ರ, ರಾಹು-ಬುಧ, ರಾಹು-ಶನಿ-ಶುಕ್ರ ಯೋಗವಿದ್ದಾಗ ದೋಷ ಪರಿಹಾರ ಮಾಡಬೇಕಾಗುತ್ತದೆ. ಇಂತಹ ವರನಿಗೆ ಎರಡು ಮದುವೆ, ಮದುವೆಯಾದ ನಂತರ ಪತ್ನಿ ವಿಯೋಗ, ವಿಚ್ಛೇದನ ಅಥವಾ ಮದುವೆಗೆ ವಿಳಂಬಗಳು ಇದ್ದಾಗ ಕದಳೀ ವಿವಾಹ ಶಾಸ್ತ್ರ ಮಾಡಬೇಕಾಗುತ್ತದೆ. ನಿಮ್ಮ ಕುಲಪುರೋಹಿತರು ಅಥವಾ ಜ್ಯೋತಿಷಿಗಳ ಸಲಹೆ ಪಡೆದು ಈ ಶಾಸ್ತ್ರವನ್ನು ಮಾಡಬೇಕಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

Shiva Mantra: ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿದರೆ ಶುಭ

Hanuman Chalisa: ಹನುಮಾನ್ ಚಾಲೀಸಾ ಕನ್ನಡದಲ್ಲಿ: ಇಂದು ತಪ್ಪದೇ ಓದಿ

Lakshmi Mantra: ಶುಕ್ರವಾರದಂದು ತಪ್ಪದೇ ಲಕ್ಷ್ಮೀ ದೇವಿಯ ಈ ಮಂತ್ರವನ್ನು ಜಪಿಸಿ

Mahavishnu Mantra: ಗುರುವಾರ ಮಹಾವಿಷ್ಣುವಿನ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments