Select Your Language

Notifications

webdunia
webdunia
webdunia
webdunia

ನಿಮ್ಮ ರಾಶಿಗನುಗುಣವಾಗಿ ರತ್ನವನ್ನು ಧರಿಸಿ ಸಂಕಷ್ಟವನ್ನು ದೂರ ಮಾಡಿ

ನಿಮ್ಮ ರಾಶಿಗನುಗುಣವಾಗಿ ರತ್ನವನ್ನು ಧರಿಸಿ ಸಂಕಷ್ಟವನ್ನು ದೂರ ಮಾಡಿ
, ಮಂಗಳವಾರ, 4 ಅಕ್ಟೋಬರ್ 2016 (14:21 IST)
ರತ್ನಗಳಲ್ಲಿ ಪ್ರಮುಖವಾಗಿ ಒಂಬತ್ತು ರತ್ನಗಳನ್ನು ಶುಭದಾಯಕ ಎಂಬ ಕಾರಣಕ್ಕೆ ನಾವು ಧರಿಸುತ್ತಿದ್ದೇವೆ. ಸೂರ್ಯನಿಗೆ ಮಾಣಿಕ್ಯ, ಚಂದ್ರನಿಗೆ ಮುತ್ತು, ಮಂಗಳನಿಗೆ ಕೆಂಪು ಹವಳ, ಬುಧನಿಗೆ ಮರಕತ (ಪಚ್ಚೆ), ಗುರುವಿಗೆ ಹಳದಿ ಪುಷ್ಯರಾಗ, ಶುಕ್ರನಿಗೆ ವಜ್ರ, ಶನಿಗೆ ನೀಲ, ರಾಹುವಿಗೆ ಗೋಮೇದಿಕ ಮತ್ತು ಕೇತುವಿಗೆ ವೈಢೂರ್ಯ.
ಪುಷ್ಯರಾಗ ಮಣಿಯನ್ನು (Yellow sapphire) ತರ್ಜನಿ (ತೋರು) ಬೆರಳಿಗೇ ಧರಿಸಬೇಕೆಂದು ಯಾಕೆ ಸೂಚಿಸುತ್ತಾರೆ? ಯಾಕೆಂದರೆ, ಯಾವುದೇ ವ್ಯಕ್ತಿ ಎಚ್ಚರಿಕೆ ಅಥವಾ ನಿರ್ದೇಶನ ನೀಡುವುದು ಇದೇ ಬೆರಳಿನ ಮೂಲಕ. ಇದೇ ಬೆರಳು ಜಗಳಕ್ಕೂ ಕಾರಣವಾಗುತ್ತದೆ, ಹೀಗಾಗಿ ಎಚ್ಚರದಿಂದಿರುವಂತೆ ಹೇಳಲೂ ಕೆಲಸಕ್ಕೆ ಬರುತ್ತದೆ. ಇದಕ್ಕಾಗಿ ಗುರುವಿನ ರತ್ನ ಪುಷ್ಯರಾಗವನ್ನು ಧರಿಸಬೇಕೆಂದು ಸಲಹೆ ನೀಡಲಾಗುತ್ತದೆ. ಈ ಮಣಿಯನ್ನು ಧರಿಸುವುದರಿಂದ ಆ ವ್ಯಕ್ತಿಗೆ ಗಂಭೀರತೆ ಬರುತ್ತದೆ ಮತ್ತು ಆತ ಅನ್ಯಾಯದ ವಿರುದ್ಧ ಜಾಗೃತನಾಗುತ್ತಾನೆ. ಇದು ಧರ್ಮ-ಕರ್ಮದಲ್ಲಿಯೂ ಶ್ರದ್ಧೆ ಹುಟ್ಟಿಸುತ್ತದೆ. ಗುರುವಿನ ಪ್ರಭಾವ ಹೆಚ್ಚಿಸಲು ಮತ್ತು ಅದರ ಅಶುಭ ಫಲಗಳನ್ನು ಕೊನೆಗಾಣಿಸಲು ಈ ರತ್ನವನ್ನು ಧರಿಸಲಾಗುತ್ತದೆ.
 
ರಾಜಕಾರಣಿಗಳು, ಅಧಿಕಾರಿಗಳು, ನ್ಯಾಯಾಧೀಶರು, ಮಂತ್ರಿಗಳು, ರಾಜನಾಯಕರು, ನಟರು ಮುಂತಾದವರ ಕೈಯಲ್ಲಿ ಈ ರತ್ನವನ್ನು ಕಾಣಬಹುದು. ಈ ರತ್ನದೊಂದಿಗೆ ಮಾಣಿಕ್ಯವನ್ನೂ ಧರಿಸಿದರೆ, ಅತಿ ಶುಭ ಫಲ ದೊರೆಯುತ್ತದೆ.
 
ಮಧ್ಯ ಬೆರಳಿನಲ್ಲಿ ನೀಲ ಮಣಿ ಧಾರಣೆ ಮಾಡಿದರೆ, ಅವರು ಆ ಬೆರಳಲ್ಲಿ ಅದರ ಹೊರತು ಬೇರಾವುದೇ ರತ್ನ ಧರಿಸಬಾರದು. ಇಲ್ಲವಾದರೆ ಶುಭ ಫಲ ದೊರೆಯುವುದಿಲ್ಲ. ಈ ಬೆರಳಲ್ಲಿ ಭಾಗ್ಯ ರೇಖೆಯು ಕೊನೆಗೊಳ್ಳುತ್ತದೆಯಾದುದರಿಂದ, ಯಾರಲ್ಲಿ ಭಾಗ್ಯ ರೇಖೆ ಇಲ್ಲವೋ ಅವರು ತಿಳಿದವರಲ್ಲಿ ಕೇಳಿ, ನೀಲ ಮಣಿ ಧರಿಸಿದರೆ, ಲಾಭ ಪಡೆಯಬಹುದಾಗಿದೆ.
 
ನೀಲಮಣಿಯು ಶನಿಯ ಶುಭ ಫಲ ದೊರಕಿಸಲು ಸಹಾಯ ಮಾಡುತ್ತದೆ. ಲೋಹದ ಉದ್ಯಮಿಗಳು, ರಾಜಕಾರಣಿಗಳು, ಆಡಳಿತಗಾರರು ಇದನ್ನು ಹೆಚ್ಚಾಗಿ ಧರಿಸುತ್ತಾರೆ. ಈ ರತ್ನವು ತ್ವರಿತ ಫಲದಾಯಕವಾಗಿದೆ ಮತ್ತು ಇದರ ಶುಭ ಅಥಲಾ ಅಶುಭ ಪರಿಣಾಮವು ಅತ್ಯಂತ ಶೀಘ್ರದಲ್ಲೇ ತಿಳಿದುಬಿಡುತ್ತದೆ ಎಂದು ಹೇಳಲಾಗುತ್ತದೆ. ಯಾವುದೇ ರತ್ನ ಶಾಸ್ತ್ರಜ್ಞರ ಸಲಹೆಯಿಲ್ಲದೆ ಇದನ್ನು ಧರಿಸಬಾರದು ಎಂದು ಹೇಳಲಾಗುತ್ತದೆ.
 
ಮಾಣಿಕ್ಯವನ್ನು ಅನಾಮಿಕ (ಉಂಗುರ) ಬೆರಳಿಗೆ ಧರಿಸಲಾಗುತ್ತದೆ. ಇದು ಸೂರ್ಯನ ರತ್ನ. ಬರ್ಮಾ ದೇಶದ ಮಾಣಿಕ್ಯಕ್ಕೆ ಬೆಲೆ ಹೆಚ್ಚು. ಇಂದು ಕೆಲವು ನಕಲಿ ಮಾಣಿಕ್ಯಗಳೂ ಬರ್ಮಾದವು ಎಂದು ಹೇಳಿ ಮಾರಾಟ ಮಾಡಲಾಗುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು. ಬರ್ಮಾದ ಮಾಣಿಕ್ಯವು ದಾಳಿಂಬೆ ಬೀಜದಂತಿರುತ್ತದೆ. ಇದನ್ನು ಧರಿಸುವುದರಿಂದ ಆಡಳಿತಾತ್ಮಕ ಪ್ರಭಾವ ವೃದ್ಧಿಸುತ್ತದೆ ಮತ್ತು ಶತ್ರುವಿನ ಎದುರು ಜಯ ಸಾಧಿಸಲು ಪೂರಕವಾಗುತ್ತದೆ. ಇದನ್ನು ಕೂಡ ರಾಜಕಾರಣ ಜೊತೆ ಸಂಬಂಧ ಇರುವವರು, ಉಚ್ಚ ಅಧಿಕಾರಿಗಳು, ನ್ಯಾಯಾಧೀಶರು, ಜಿಲ್ಲಾಧಿಕಾರಿಗಳು ಮುಂತಾದವರ ಬೆರಳುಗಳಲ್ಲಿ ಕಾಣಬಹುದು.
 
ಕನಿಷ್ಠ ಬೆರಳಿನಲ್ಲಿ ಅಂದರೆ ಕಿರು ಬೆರಳಿನಲ್ಲಿ ಪಚ್ಚೆ ರತ್ನವನ್ನು ಧರಿಸಬೇಕು. ಇದು ಬೌದ್ಧಿಕ ಗುಣಗಳನ್ನು ಹೆಚ್ಚಿಸುತ್ತದೆಯಾದುದರಿಂದ ಉದ್ಯಮಿಗಳು ಹೆಚ್ಚಾಗಿ ಧರಿಸುತ್ತಾರೆ. ಇದನ್ನು ಧರಿಸುವುದರಿಂದ ಪತ್ರಕರ್ತರು, ಸೇಲ್ಸ್‌ಮ್ಯಾನ್‌ಗಳು, ಪ್ರಕಾಶನದ ಕೆಲಸಗಾರರು, ಕಲಾವಿದರು, ವಾಕ್ಪಟುಗಳು ಹಾಗೂ ಬೌದ್ಧಿಕ ಸಾಮರ್ಥ್ಯ ಹೆಚ್ಚು ಬೇಕಾಗಿರುವ ಕೆಲಸದಲ್ಲಿ ನಿರತರಾದವರಿಗೆ ಶುಭ ಫಲಗಳಾಗುತ್ತವೆ.
 
ವಜ್ರ, ಮುತ್ತು, ಹವಳ, ಗೋಮೇಧಿಕ ಮತ್ತು ವೈಢೂರ್ಯ: ಹವಳವು ಶಕ್ತಿ ಹೆಚ್ಚಿಸಬಲ್ಲ, ಸಾಹಸ, ಮಹತ್ವಾಕಾಂಕ್ಷೆ ವೃದ್ಧಿ ಮಾಡಲು ಮತ್ತು ಶತ್ರುವಿನ ಮೇಲೆ ಪ್ರಭಾವ ಮಾಡಲು ನೆರವಾಗುತ್ತದೆ. ಅದರ ಮಿತ್ರರು ಗುರು ಮತ್ತು ಸೂರ್ಯ. ಮಕರ ಉಚ್ಚವಾಗಿದ್ದರೆ ಅದನ್ನು ಮಧ್ಯಮ, ಉಂಗುರ ಬೆರಳು ಅಥವಾ ಕಿರು ಬೆರಳಲ್ಲಿ ಧರಿಸಬಹುದು. ಇದನ್ನು ಹೆಚ್ಚಾಗಿ ರಾಜಕಾರಣಿಗಳು, ಪೊಲೀಸರು, ಆಡಳಿತದೊಂದಿಗೆ ಸಂಬಂಧ ಹೊಂದಿರುವವರು ಮತ್ತು ಉನ್ನತ ಅಧಿಕಾರಿಗಳು, ಭೂಮಿ ಸಂಬಂಧಿತ ವ್ಯಕ್ತಿಗಳು, ಬಿಲ್ಡರ್ ಮುಂತಾದವರ ಕೈಗಳಲ್ಲಿ ಕಾಣಬಹುದು.
 
ಇದನ್ನು ಮಾಣಿಕ್ಯ ಮತ್ತು ಪುಷ್ಯರಾಗದ ಜೊತೆಗೂ ಧರಿಸಬಹುದಾಗಿದೆ. ಯಾರಿಗೆ ಹೆಚ್ಚು ಕೋಪ ಬರುವುದೋ, ಅಂಥವರು ಈ ರತ್ನವನ್ನು ಧರಿಸಬಾರದು. ಹವಳವನ್ನು ಮುತ್ತಿನ ಜತೆಗೆ ಅಥವಾ ಸಂಯುಕ್ತ ರತ್ನದ ಉಂಗುರವನ್ನೂ ಧರಿಸಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಗೊತ್ತಾ, ನಿಮ್ಮ ಬೆರಳಲ್ಲಿ ಶಂಖ, ಚಕ್ರ, ಕಳಶ! ಯಾವುದಿದೆ?