Publish Date: Wed, 17 Jan 2024 (08:30 IST)
Updated Date: Wed, 17 Jan 2024 (08:35 IST)
ಬೆಂಗಳೂರು: ಒಳ್ಳೆಯ ಉದ್ಯೋಗ, ಕೈತುಂಬಾ ಸಂಬಳ ಎಲ್ಲರ ಕನಸು. ಹಾಗಿದ್ದರೆ ಕೈತುಂಬಾ ವೇತನ ಸಿಗುವ ಒಳ್ಳೆಯ ಉದ್ಯೋಗ ಸಿಗಬೇಕೆಂದರೆ ಯಾವ ದೇವರನ್ನು ಪೂಜಿಸಬೇಕು?
ಮುಖ್ಯವಾಗಿ ನಮ್ಮ ಕರ್ಮಗಳಿಗೆ ತಕ್ಕ ಫಲ ಕೊಡುವ ಶನಿ ದೇವನನ್ನು ಒಲಿಸಿಕೊಳ್ಳಬೇಕು. ಶನಿಯ ಕೃಪಾಕಟಾಕ್ಷಕ್ಕೆ ಒಳಗಾದರೆ ಉತ್ತಮ ಉದ್ಯೋಗ ಸಿಗುವುದು. ಹೀಗಾಗಿ ಶನಿ ದೇವರ ಪ್ರಾರ್ಥನೆ ಮಾಡುವುದು ಮುಖ್ಯ.
ಸೂರ್ಯನು ಶಕ್ತಿ, ಯಶಸ್ಸಿನ ಪ್ರತೀಕ. ಸಕಲ ಜೀವರಾಶಿಗಳಿಗೆ ಚೈತನ್ಯ ತುಂಬುವ ಸೂರ್ಯದೇವರ ಪ್ರಾರ್ಥನೆ ಮಾಡಿ ದಿನದಾರಂಭ ಮಾಡಿ. ಅದೇ ರೀತಿ ಕಾರ್ಯಸಿದ್ಧಿಯಾಗಬೇಕಾದರೆ ಆಂಜನೇಯನ ಕೃಪೆ ಬೇಕು. ಹೀಗಾಗಿ ಆಂಜನೇಯ ಸ್ವಾಮಿಯ ಜಪ ಮಾಡುವುದು ಉತ್ತಮ.
ಗೋವುಗಳಲ್ಲಿ ಮುಕ್ಕೋಟಿ ದೇವರ ಸಾನಿಧ್ಯವಿದೆ ಎಂದು ನಾವು ನಂಬುತ್ತೇವೆ. ಹೀಗಾಗಿ ಗೋವುಗಳಿಗೆ ಮೇವು ಕೊಡುವುದು, ಧಾನ್ಯ ನೀಡಿ ಸಂತೃಪ್ತರಾಗಿಸುವುದರಿಂದ ನಮಗೆ ವೃತ್ತಿರಂಗದಲ್ಲಿ ಯಶಸ್ಸು ಸಿಗುತ್ತದೆ.