Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶನಿವಾರ, 21 ನವೆಂಬರ್ 2020 (09:07 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


ಮೇಷ: ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ. ಮನೆಗೆ ಹೊಸ ಅತಿಥಿಗಳ ಆಗಮನವಾಗಲಿದೆ. ನೂತನ ದಂಪತಿಗೆ ಪ್ರವಾಸ ಭಾಗ್ಯ. ಹಣಕಾಸಿನ ಮುಗ್ಗಟ್ಟಿನಿಂದಾಗಿ ಅಂದುಕೊಂಡ ಕೆಲಸಗಳನ್ನು ಮುಂದೂಡಬೇಕಾಗಬಹುದು.

ವೃಷಭ: ನಿಮ್ಮ ಧಾರಾಳತನವೇ ನಿಮಗೆ ಮುಳುವಾಬಹುದು. ಅಪರಿಚಿತರನ್ನು ಕಣ್ಮುಚ್ಚಿ ನಂಬಬೇಡಿ. ಆರೋಗ್ಯ ಭಾಗ್ಯ ಸುಧಾರಿಸುವುದು. ಕಳೆದುಕೊಂಡ ಸಂಬಂಧಗಳು ಮರಳಿ ಕೂಡಿಕೊಳ್ಳಲಿದ್ದು, ಮನಸ್ಸಿಗೆ ಸಂತಸವಾಗಲಿದೆ.

ಮಿಥುನ: ಕೌಟುಂಬಿಕ ಜವಾಬ್ಧಾರಿಗಳು ಹೆಚ್ಚಲಿವೆ. ಹಾಗಿದ್ದರೂ ನಿಮ್ಮ ಕೆಲಸಕ್ಕೆ ತಕ್ಕ ಮನ್ನಣೆ ಸಿಗದೇ ಬೇಸರಗೊಳ್ಳುವಿರಿ. ಕಷ್ಟದ ಸಮಯದಲ್ಲಿ ಬಂಧು ಮಿತ್ರರ ನೆರವು ಸಿಗಲಿದೆ. ಆರ್ಥಿಕವಾಗಿ ಸಮಾಧಾನಕರ ದಿನ.

ಕರ್ಕಟಕ: ಕುಲದೇವರ ದರ್ಶನ ಪಡೆದು ಹರಕೆ ತೀರಸುವಿರಿ. ಸಂತಾನ ಹೀನ ದಂಪತಿಗಳಿಗೆ ಶುಭ ಸೂಚಕ ಫಲ ಸಿಗಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ. ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ.

ಸಿಂಹ: ಸಂಗಾತಿಯ ಅಗತ್ಯಗಳನ್ನು ಪೂರೈಸಲು ಹೆಚ್ಚಿನ ಧನವಿನಿಯೋಗ ಮಾಡಬೇಕಾಗುತ್ತದೆ. ಆದರೆ ಎಲ್ಲಕ್ಕಿಂತ ನೆಮ್ಮದಿಯೇ ಮುಖ್ಯ ಎನ್ನುವುದನ್ನು ಅರಿಯಿರಿ. ಇಷ್ಟು ದಿನ ಕಠಿಣವೆನಿಸಿದ್ದ ಕೆಲಸಗಳು ಇಂದು ಸುಲಭವಾಗಿ ನೆರವೇರಲಿದೆ.

 
ಕನ್ಯಾ: ಬಂಧುಮಿತ್ರರ ಅಸಮಾಧಾನಕ್ಕೆ ಕಾರಣವಾಗುವಿರಿ. ಮಾತಿನ ಮೇಲೆ ನಿಗಾ ಅಗತ್ಯ. ಬಂಡವಾಳ ಹೂಡಿಕೆ ಮಾಡಲು ಸಕಾಲ. ಆದರೆ ಎಚ್ಚರಿಕೆಯಿಂದಿರಿ. ಮನಸ್ಸಿಗೆ ಹಿಡಿಸಿದ ಸಂಗಾತಿ ಸಿಗಲಿದ್ದಾರೆ. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಪಡೆಯುವರು.

ತುಲಾ: ನಿಮ್ಮ ನಿರ್ಧಾರ ಸಂಗಾತಿಯ ಅಸಮಾಧಾನಕ್ಕೆ ಕಾರಣವಾದೀತು. ಹಾಗಿದ್ದರೂ ಕುಟುಂಬದ ಕ್ಷೇಮದ ದೃಷ್ಟಿಯಿಂದ ಕಠಿಣವಾಗಿ ನಡೆದುಕೊಳ್ಳಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗುವುದು.

ವೃಶ್ಚಿಕ: ಮಕ್ಕಳ ಭವಿಷ್ಯಕ್ಕೆ ತಕ್ಕುದಾದ ಯೋಜನೆ ರೂಪಿಸುವಿರಿ. ಆದಾಯಕ್ಕೆ ನಾನಾ ಮಾರ್ಗಗಳು ಸಿಗಲಿದೆ. ಬಳಸುವುದರಲ್ಲಿ ಜಾಣತನ ಪ್ರದರ್ಶಿಸಬೇಕಷ್ಟೇ. ಸಂಗಾತಿಗೆ ಮನನೋಯಿಸುವ ಹಾಗೆ ನಡೆದುಕೊಳ್ಳಬೇಡಿ.

ಧನು: ಕೆಲಸ ಕಾರ್ಯಗಳ ಹೊಣೆಗಾರಿಕೆಯಿಂದ ಮನೆಯವರ ಮೇಲೆ ಕೂಗಾಡಿ ಅಸಮಾಧಾನಕ್ಕೊಳಗಾಗುವಿರಿ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ನಡೆಸಬೇಕು. ಉದ್ಯೋಗದಲ್ಲಿ ಸಹೋದ್ಯೋಗಿಗಳು ಕಿರಿ ಕಿರಿ ಮಾಡಬಹುದು. ತಾಳ್ಮೆ ಅಗತ್ಯ.

ಮಕರ: ಕೈಗೊಂಡ ಕಾರ್ಯದಲ್ಲಿ ವಿಘ್ನಗಳು ತೋರಿಬಂದು ಮನಸ್ಸಿಗೆ ಬೇಸರ ಮಾಡಿಕೊಳ್ಳುವಿರಿ. ಅನಿರೀಕ್ಷಿತವಾಗಿ ಸಿಗುವ ಹಳೆಯ ಮಿತ್ರನಿಂದ ಕಷ್ಟಗಳಿಗೆ ಪರಿಹಾರ ಸಿಗುವುದು. ಕುಲದೇವರ ಪ್ರಾರ್ಥನೆ ಮಾಡಿದರೆ ಶುಭಫಲ ಸಾಧ್ಯತೆ.

ಕುಂಭ: ಉದ್ಯೋಗ ನಿಮಿತ್ತ ವಿದೇಶ ಯಾನ ಸಾಧ್ಯತೆ. ಕೈಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳದಿದ್ದರೆ ಪಶ್ಚಾತ್ತಾಪ ಪಡಬೇಕಾದೀತು. ಆರ್ಥಿಕವಾಗಿ ಸುಧಾರಣೆ ಕಂಡುಬರುವುದು. ಹಿರಿಯರ ಆರೋಗ್ಯದ ಬಗ್ಗೆ ನಿಗಾ ವಹಿಸಿ.

ಮೀನ: ಇಷ್ಟಮಿತ್ರರೊಂದಿಗೆ ಪ್ರವಾಸ, ಭೋಜನ ಮಾಡುವಿರಿ. ಇದರಿಂದ ಮನಸ್ಸಿಗೂ ಸಂತೋಷವಾಗಲಿದೆ. ಎಷ್ಟೋ ದಿನದಿಂದ ಕಷ್ಟ ಅಂದುಕೊಂಡು ಬಾಕಿಯಾಗಿದ್ದ ಕೆಲಸಗಳಿಗೆ ಇಂದು ದೈವಾನುಗ್ರಹದಿಂದ ಚಾಲನೆ ದೊರೆಯಲಿದೆ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರು ದೆಶೆ ತಿರುಗಿಬಿದ್ದರೆ ಎಂಥಾ ಕೆಟ್ಟ ಪರಿಣಾಮವಾಗುತ್ತದೆ ನೋಡಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments