Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಗುರುವಾರ, 16 ಜುಲೈ 2020 (08:57 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ನೂತನ ದಂಪತಿಗಳಿಗೆ ಸಂತಾನಫಲ ಸೂಚನೆ ಸಿಗಲಿದೆ. ತಂದೆ-ಮಕ್ಕಳೊಡನೆ ಭಿನ್ನಾಭಿಪ್ರಾಯ ಮೂಡಬಹುದು. ತಾಳ್ಮೆ, ಸಂಯಮದಿಂದ ವರ್ತಿಸಿ. ಗೃಹಿಣಿಯರಿಗೆ ಕಾರ್ಯದೊತ್ತಡದಿಂದ ದೇಹ ಹೈರಾಣಾಗಬಹುದು. ವಿದ್ಯಾರ್ಥಿಗಳಿಗೆ ಮುನ್ನಡೆ.

ವೃಷಭ: ವೃತ್ತಿರಂಗದಲ್ಲಿ ಎಂದೋ ಬಯಸಿದ್ದ ಉನ್ನತ ಸ್ಥಾನ ಮಾನ ಕೊನೆಗೂ ಕೈಗುಟುಕುವ ಕಾಲ ಬರಲಿದೆ. ಯಂತ್ರೋಪಕರಣ ಕೆಲಸ ಮಾಡುವವರಿಗೆ ಹಿನ್ನಡೆಯಾದೀತು. ಅವಿವಾಹಿತರಿಗೆ ವಿವಾಹ ಭಾಗ್ಯವಿದೆ. ದೇವತಾ ಪ್ರಾರ್ಥನೆ ಮಾಡಿ.

ಮಿಥುನ: ತಾತ್ಕಾಲಿಕ ವೃತ್ತಿಯವರಿಗೆ ಮುನ್ನಡೆಯ ಯೋಗವಿದೆ. ಸರಕಾರಿ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ರೈತಾಪಿ ವರ್ಗದವರ ಮೊಗದಲ್ಲಿ ಸಂತಸ ಮೂಡಲಿದೆ. ವ್ಯಾಪಾರ ವ್ಯವಹಾರಗಳು ಸುಗಮವಾಗಿ ನೆರವೇರಲಿದೆ. ಇಷ್ಟ ದೇವರ ಪ್ರಾರ್ಥನೆ ಮಾಡಿ.

ಕರ್ಕಟಕ: ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಹಣಕಾಸಿನ ಮುಗ್ಗಟ್ಟು ತಲೆದೋರಲಿವೆ. ಮಕ್ಕಳಿಗೆ ಸಂತೋಷದಾಯಕ ದಿನವಾಗಿರಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರದ ಕೊರತೆ ಕಂಡುಬರಲಿದೆ. ತಾಳ್ಮೆಯಿರಲಿ.

ಸಿಂಹ: ಇತರರ ಮಾತಿಗೆ ಕಿವಿಗೊಟ್ಟು ಸಂಗಾತಿಯೊಂದಿಗೆ ಮನಸ್ತಾಪ ತಂದುಕೊಳ್ಳಬೇಡಿ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸಲಿದ್ದೀರಿ. ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ಅನ್ಯ ಸ್ಥಳಗಳಿಗೆ ಪ್ರಯಾಣ ಮಾಡಬೇಕಾದೀತು. ಸಂಚಾರದಲ್ಲಿ ಎಚ್ಚರಿಕೆಯಿರಲಿ.

ಕನ್ಯಾ: ಕಟ್ಟಡ ಇತ್ಯಾದಿ ನಿರ್ಮಾಣ ಕಾರ್ಯಗಳಿಗೆ ಚಾಲನೆ ನೀಡಿದ್ದರೆ ಅರ್ಧಕ್ಕೇ ಸ್ಥಗಿತಗೊಳಿಸಬೇಕಾಗುತ್ತದೆ. ವಿಘ್ನಗಳ ನಿವಾರಣೆಗೆ ಕುಲದೇವರ ಪ್ರಾರ್ಥನೆ ಮಾಡಿ. ಹಿರಿಯರಿಗೆ ವಾತ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬಂದೀತು. ತಾಳ್ಮೆಯಿರಲಿ.

ತುಲಾ: ಹಿಂದೆ ಮಾಡಿದ್ದ ಹೂಡಿಕೆಗಳು ಇಂದು ಫಲ ನೀಡಲಿವೆ. ಗೃಹ ನಿರ್ಮಾಣ, ರಿಪೇರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಸ್ಥಿರ ಸೊತ್ತುಗಳ ಖರೀದಿ-ವಿಕ್ರಯ ವ್ಯವಹಾರ ನಡೆಸಲಿದ್ದೀರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಹೊಸ ಚಿಂತನೆಗಳು ಮೂಡಲಿವೆ.

ವೃಶ್ಚಿಕ: ನೆರೆಹೊರೆಯವರ ಮಾತಿಗೆ ಮರುಳಾಗಿ ವ್ಯವಹಾರದಲ್ಲಿ ಕೈ ಹಾಕಿದರೆ ನಷ್ಟ ಅನುಭವಿಸಬೇಕಾದೀತು. ಯಾವುದೇ ವ್ಯವಹಾರದಲ್ಲಿ ಕೈ ಹಾಕುವ ಮೊದಲು ಸಂಗಾತಿಯ ಜತೆ ಪರಾಮರ್ಶೆ ನಡೆಸಿ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಒದಗಿ ಬರಲಿವೆ.

ಧನು: ಪಾಲು ಬಂಡವಾಳ ಹೂಡಿಕೆ ವ್ಯವಹಾರಗಳಿಗೆ ಇದು ಸಕಲಾವಲ್ಲ. ಅಪರಿಚತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಬೇಕು. ವಿಲಾಸೀ ಜೀವನಕ್ಕೆ ಕಡಿವಾಣ ಹಾಕಬೇಕಿದೆ. ವೃತ್ತಿರಂಗದಲ್ಲಿ ಲೆಕ್ಕಾಚಾರದ ಹೆಜ್ಜೆಯಿಟ್ಟರೆ ಮುಂದೆ ಯಶಸ್ಸು.

ಮಕರ: ಕೆಲಸದಲ್ಲಿ ಮೇಲಧಿಕಾರಿಗಳ ಪ್ರಶಂಸೆಯಿಂದ ಸಂತಸವಾಗಲಿದೆ. ಆದರೆ ಮೈಮರೆತರೆ ದೊಡ್ಡ ಪ್ರಮಾದ ಎದುರಿಸಬೇಕಾದೀತು. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ತೆರೆದುಕೊಳ್ಳಲಿದೆ. ಪಾಲಿಗೆ ಬಂದ ಅವಕಾಶಗಳನ್ನು ಬಳಸಿಕೊಳ್ಳಬೇಕು.

ಕುಂಭ: ದುಡುಕು ಬುದ್ಧಿಯಿಂದ ಕೂಡಿಟ್ಟ ಹಣ ಕಳೆದುಕೊಳ್ಳಬೇಕಾದೀತು. ಹಿರಿಯರಿಗೆ ವಾತ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬಂದೀತು. ಆಸ್ಪತ್ರೆಗೆ ಅಲೆದಾಟ ತಪ್ಪದು. ನೀರಿಗಾಗಿ ನೆರೆಹೊರೆಯವರೊಂದಿಗೆ ವಾಗ್ವಾದಗಳಾದೀತು. ದೇವತಾ ಪ್ರಾರ್ಥನೆ ಮಾಡಿ.

ಮೀನ: ಸ್ವಾಭಿಮಾನಕ್ಕೆ ಧಕ್ಕೆ ತರುವ ಘಟನೆಗಳಾದೀತು. ವಾಹನ ಸವಾರರಿಗೆ ಸ್ವಲ್ಪದರಲ್ಲೇ ಅಪಘಾತ ಭಯವಿದೆ. ಉದ್ಯೋಗದಲ್ಲಿ ಬಡ್ತಿ ಸಂಭವವಿದೆ. ಆದರೆ ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ವ್ಯಾಪಾರಿಗಳಿಗೆ ಲಾಭಗಳಾಗಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾರದಲ್ಲಿ ಈ ದಿನ ಯಾವುದೇ ಕಾರಣಕ್ಕೂ ಬಟ್ಟೆ ತೊಳೆಯಬೇಡಿ