Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶನಿವಾರ, 8 ಫೆಬ್ರವರಿ 2020 (08:51 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 


ಮೇಷ: ಸಾಂಸಾರಿಕವಾಗಿ ಬರುವ ಸಮಸ್ಯೆಗಳು, ಭಿನ್ನಾಭಿಪ್ರಾಯಗಳ ಪರಿಹಾರಕ್ಕೆ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿದರೆ ಒಳಿತು. ಉದ್ಯೋಗ ಕ್ಷೇತ್ರದಲ್ಲಿ ಸೂಕ್ತ ಸ್ಥಾನ ಮಾನ ಪಡೆಯಲು ಪರದಾಡಬೇಕಾದೀತು. ತಾಳ್ಮೆಯಿಂದಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.

ವೃಷಭ: ವಿದ್ಯಾರ್ಥಿಗಳಿಗೆ ಒಡನಾಡಿಗಳೊಂದಿಗೆ ಪ್ರವಾಸ ಮಾಡುವ ಯೋಗವಿದೆ. ಸಂತಸದ ಕ್ಷಣ ಕಳೆಯಲಿದ್ದೀರಿ. ಮನೆಗೆ ಬರುವ ಅನಿರೀಕ್ಷಿತ ನೆಂಟರಿಂದ ಸಂಭ್ರಮದ ವಾತಾವರಣವಿರಲಿದೆ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಲಾಭವಾಗಲಿದೆ.

ಮಿಥುನ: ಸನ್ಮಿತ್ರರ ಸಂಗದಿಂದ ಎಲ್ಲವೂ ಒಳಿತಾಗುವುದು. ಬಯಸದೇ ಬರುವ ಭಾಗ್ಯವನ್ನು ಎರಡೂ ಕೈಗಳಿಂದ ಸ್ವೀಕರಿಸಿ. ಅವಿವಾಹಿತರಿಗೆ ಕಂಕಣ ಭಾಗ್ಯ ಒದಗಿಬರಲಿದೆ. ಉದ್ಯೋಗಾರ್ಥಿಗಳಿಗೆ ಅಡ್ಡಿ ಆತಂಕಗಳಿದ್ದೇ ಇರುತ್ತದೆ. ಕುಲದೇವರ ಪ್ರಾರ್ಥನೆಯಿಂದ ಒಳಿತಾಗುವುದು.

ಕರ್ಕಟಕ: ಮನೆಯಲ್ಲಿ ಶುಭ ಮಂಗಲ ಕಾರ್ಯ ನಡೆಸಲು ಚಿಂತನೆ ನಡೆಸುವಿರಿ. ಮಹಿಳಾ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಬಡ್ತಿ ಯೋಗವಿದೆ. ಪ್ರೇಮಿಗಳ ನಡುವೆ ಸಣ್ಣ ಪುಟ್ಟ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಮೂಡಬಹುದು. ಆರ್ಥಿಕ ವಿಚಾರದಲ್ಲಿ ಹೆಚ್ಚಿನ ಜಾಗ್ರತೆಯಿರಲಿ.

ಸಿಂಹ: ಅಧಿಕಾರಿ ವರ್ಗದವರಿಗೆ ತಮ್ಮ ಖುರ್ಚಿ ಉಳಿಸಿಕೊಳ್ಳುವ ಚಿಂತೆ ಕಾಡಲಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಆದರೆ ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳಿತು. ಸಾರ್ವಜನಿಕವಾಗಿ ನಿಮ್ಮ ಕೆಲಸಗಳಿಗೆ ಮನ್ನಣೆ ಸಿಗಲಿದೆ.

ಕನ್ಯಾ: ಆರ್ಥಿಕವಾಗಿ ಹಣಕಾಸಿನ ಅಡಚಣೆ ಮಾನಸಿಕ ಚಿಂತೆಗೆ ಕಾರಣವಾಗಬಹುದು. ಮಕ್ಕಳ ಆಸೆ ಪೂರೈಸಲಾಗದೇ ಬೇಸರವಾಗಲಿದೆ. ನಿರುದ್ಯೋಗಿಗಳಿಗೆ ಸ್ವಲ್ಪದರಲ್ಲೇ ಉತ್ತಮ ಅವಕಾಶಗಳು ತಪ್ಪಿ ಹೋಗಿ ಬೇಸರವಾಗಬಹುದು. ಎಲ್ಲದಕ್ಕೂ ಪ್ರಯತ್ನಬಲ ಮುಖ್ಯ.

ತುಲಾ: ವೃತ್ತಿರಂಗದಲ್ಲಿ ಸಣ್ಣ ಪುಟ್ಟ ತೊಡಕುಗಳಿದ್ದರೂ ನಿಮ್ಮ ಮುನ್ನಡೆಯನ್ನು ಯಾರಿಗೂ ತಡೆಯಲಾಗದು. ಹೊಸ ವ್ಯವಹಾರಗಳಿಗೆ ಕೈ ಹಾಕುವಿರಿ. ಅನವಶ್ಯಕವಾಗಿ ಮಾನಸಿಕ ಉದ್ವೇಗಕ್ಕೊಳಗಾಗಬೇಡಿ. ವಾಹನ ಖರೀದಿಯಿಂದ ಲಾಭವಾಗಲಿದೆ.

ವೃಶ್ಚಿಕ: ಮನೆಯಲ್ಲಿ ಶುಭ ಮಂಗಲ ಕಾರ್ಯಗಳ ಸಿದ್ಧತೆ ಧನವ್ಯಯ ಮಾಡಬೇಕಾಗುತ್ತದೆ. ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ನಡೆದುಕೊಳ್ಳಿ. ಆರ್ಥಿಕವಾಗಿ ಹಣಕಾಸಿಗೆ ತೊಂದರೆಯಿರದು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಧನು: ಎಷ್ಟೇ ಕಷ್ಟಗಳು ಎದುರಾದರೂ ನಿಮ್ಮ ಪ್ರಯತ್ನಬಲದಿಂದಲೇ ಯಶಸ್ಸು ಸಾಧಿಸಬಹುದು. ಬೇರೆಯವರು ಹೇಳುವ ಚಾಡಿಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಅನಿರೀಕ್ಷಿತವಾಗಿ ಧನಾಗಮನವಾಗಲಿದೆ. ವಿದ್ಯಾರ್ಥಿಗಳು ಅಭ್ಯಾಸದ ಕಡೆಗೆ ಹೆಚ್ಚು ಗಮನಕೊಡಬೇಕು.

ಮಕರ: ಅನಿರೀಕ್ಷಿತವಾಗಿ ಕೇಳಿಬರುವ ಶುಭ ವಾರ್ತೆಯಿಂದ ಮನೆಯಲ್ಲಿ ಸಂತಸವಿರಲಿದೆ. ನೂತನ ದಂಪತಿಗಳಲ್ಲಿ ಸಂತಾನ ಫಲ ಸೂಚನೆ ಸಿಗಲಿದೆ. ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆ ಸುಗಮವಾಗಲಿದೆ. ಹಿರಿಯರ ಸಲಹೆಗಳು ಉಪಯೋಗಕ್ಕೆ ಬರಲಿವೆ.

ಕುಂಭ: ಅಧಿಕ ಕಾರ್ಯದೊತ್ತಡ, ಓಡಾಟದಿಂದಾಗಿ ದೇಹಾಯಾಸವಾಗಬಹುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ವೃತ್ತಿರಂಗದಲ್ಲಿ ಏಕಾಗ್ರತೆಯ ಕೊರತೆ ಕಂಡುಬರಬಹುದು. ಸ್ವಯಂ ವೃತ್ತಿಯವರಿಗೆ ಆರ್ಥಿಕ ಲಾಭವಾಗಲಿದೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ.

ಮೀನ: ನಿಮ್ಮ ಪ್ರೀತಿ ಪಾತ್ರರು ಅನವಶ್ಯಕವಾಗಿ ನಿಮ್ಮ ಮೇಲೆ ತಪ್ಪು ಕಲ್ಪನೆ ಮಾಡಿಕೊಳ್ಳುವಂತಾದೀತು. ದುಡುಕಿ ಮಾತನಾಡಲು ಹೋಗಬೇಡಿ. ಹಿರಿಯರಿಗೆ ತೀರ್ಥ ಯಾತ್ರೆ ಮಾಡುವ ಯೋಗವಿದೆ. ಆರ್ಥಿಕವಾಗಿ ಧನಾರ್ಜನೆಗೆ ನಾನಾ ಮೂಲ ಕಂಡುಕೊಳ್ಳುವಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ