Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 13 ಡಿಸೆಂಬರ್ 2019 (08:25 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವ್ಯಾಪಾರ ವ್ಯವಹಾರಗಳು ಕೈಗೂಡಲಿವೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗುವುದು. ಆದರೆ ಕೌಟುಂಬಿಕವಾಗಿ ಒಂದಾದ ಮೇಲೊಂದರಂತೆ ಸಮಸ್ಯೆಗಳು ಚಿಂತೆಗೆ ಕಾರಣವಾಗುವುದು. ಖರ್ಚು ವೆಚ್ಚಗಳು ಅಧಿಕವಾಗಲಿವೆ. ತಾಳ್ಮೆ ಅಗತ್ಯ.

ವೃಷಭ: ಉದ್ಯೋಗವಿರಲಿ, ವ್ಯವಹಾರವಿರಲಿ ಪ್ರತಿಕೂಲ ಫಲಿತಾಂಶಗಳೇ ಹೆಚ್ಚು ಕಂಡುಬರಲಿವೆ. ಇದರಿಂದಾಗಿ ಮಾನಸಿಕವಾಗಿ ಕುಗ್ಗುವಿರಿ. ಆದರೆ ಹಿರಿಯರ ಸಮಯೋಚಿತ ಸಲಹೆಗಳಿಗೆ ಕಿವಿಗೊಡಿ. ಮಕ್ಕಳ ವಿಚಾರದಲ್ಲಿ ಸಂತಸದ ವಾರ್ತೆ ಕೇಳಲಿದ್ದೀರಿ.

ಮಿಥುನ: ದೂರ ಪ್ರಯಾಣದಲ್ಲಿ ಅನಾರೋಗ್ಯ ಸಮಸ್ಯೆಗಳು ಕಂಡುಬಂದೀತು. ಸಾಂಸಾರಿಕವಾಗಿ ಹೊಸ ಕೆಲಸಗಳಿಗೆ ಕೈ ಹಾಕುವಿರಿ. ಗೃಹ ನಿರ್ಮಾಣ ಕಾರ್ಯಗಳನ್ನು ಆರಂಭಿಸಿದರೂ ಅಡೆತಡೆಗಳು ಎದುರಾದೀತು. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರ.

ಕರ್ಕಟಕ: ವ್ಯವಹಾರ ಕ್ಷೇತ್ರದಲ್ಲಿ ಕಾರ್ಯ ಸಾಧನೆಗೆ ಸಣ್ಣ ಪುಟ್ಟ ವಿಘ್ನಗಳು ಎದುರಾದೀತು. ಅದನ್ನೆಲ್ಲಾ ಎದುರಿಸಿ ಮುಂದುವರಿಯಲು ಕಲಿಯಬೇಕು. ಪತಿ-ಪತ್ನಿಯರೊಳಿಗೆ ಸಾಮರಸ್ಯದ ಕೊರತೆಯುಂಟಾದೀತು. ಕಿರು ಸಂಚಾರ ಯೋಗವಿದೆ.

ಸಿಂಹ: ಅವಿವಾಹಿತರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಗೃಹ ನಿರ್ಮಾಣ ವ್ಯವಹಾರಗಳಿಗೆ ಚಾಲನೆ ನೀಡುವಿರಿ. ಕೋರ್ಟು ಕಚೇರಿ ವ್ಯವಹಾರಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಸದ್ವಿನಿಯೋಗ ಮಾಡಿಕೊಳ್ಳಿ.

 
ಕನ್ಯಾ: ಅಧೀನ ನೌಕರರಿಂದ ಕಿರಿ ಕಿರಿಯಾಗಬಹುದು. ಸರಕಾರಿ ಕೆಲಸಗಳಲ್ಲಿ ಸತತ ಓಡಾಟ ನಡೆಸಬೇಕಾಗುತ್ತದೆ. ಶತ್ರುಬಾಧೆ ಅಧಿಕವಾಗಲಿದೆ. ಮಾನಸಿಕವಾಗಿ ನೆಮ್ಮದಿಗೆ ಭಂಗವಾದೀತು. ಕುಲದೇವರ ನಂಬಿ ನಡೆಯಿರಿ. ಸಮಯವೇ ಎಲ್ಲದಕ್ಕೂ ಪರಿಹಾರ ನೀಡಲಿದೆ.

ತುಲಾ: ಮನಸ್ಸಿನಲ್ಲಿ ಅಂದುಕೊಂಡ ಕೆಲಸಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವಿರಿ. ಸಂಗಾತಿಯ ಸಹಕಾರ ಸಿಗಲಿದೆ. ದೇಹಾರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ದೇವತಾ ಕೆಲಸಗಳಿಗೆ ಧನವನಿಯೋಗ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಮುನ್ನಡೆ.

ವೃಶ್ಚಿಕ: ಪ್ರತಿಕೂಲ ಸಂದರ್ಭಗಳನ್ನು ಎದುರಿಸಲು ಸಿದ್ಧರಾಗಿ. ಉದ್ಯೋಗ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಸಂಯಮ ಕಳೆದುಕೊಳ್ಳಬೇಡಿ. ಸಣ್ಣ ಪುಟ್ಟ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳು ಮೂಡಿಬರಲಿವೆ. ಸಾಂಸಾರಿಕವಾಗಿ ಅಭಿವೃದ್ಧಿ ಕಂಡುಬರಲಿದೆ.

ಧನು: ಕಾರ್ಯನಿಮಿತ್ತ ಅಧಿಕ ಓಡಾಟ ನಡೆಸಬೇಕಾಗುತ್ತದೆ. ಶತ್ರುಬಾಧೆ ಕಂಡುಬರಲಿದೆ. ಅಂದುಕೊಂಡ ಕೆಲಸಗಳಿಗೆ ತೊಂದರೆಯಾಗಬಹುದು. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ಆದರೆ ನೆಮ್ಮದಿಗಾಗಿ ಹುಡುಕಾಡಬೇಕಾದೀತು.

ಮಕರ: ನೀವು ಎಷ್ಟೇ ಪ್ರಯತ್ನಪಟ್ಟರೂ ಎಲ್ಲವೂ ದೈವೇಚ್ಛೆಯಂತೇ ನಡೆಯುವುದು ಎಂಬುದನ್ನು ಅರ್ಥ ಮಾಡಿಕೊ‍ಳ್ಳಿ. ಯಾವುದೇ ಕೆಲಸ ಮಾಡುವ ಮೊದಲು ಮನೆಯವರ ಅಭಿಪ್ರಾಯಕ್ಕೆ ಬೆಲೆಕೊಡಿ. ಮನಸ್ಸಿನಲ್ಲಿ ಎಷ್ಟೇ ಬೇಸರವಿದ್ದರೂ ನಗು ನಗುತ್ತಾ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ.

ಕುಂಭ: ಮಕ್ಕಳ ವಿಚಾರದಲ್ಲಿ ಬೇಸರ, ಚಿಂತೆ ಕಾಡಲಿದೆ. ಸರಕಾರಿ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಹಿತಶತ್ರುಗಳಿಂದಾಗಿ ತೊಂದರೆಗೆ ಸಿಲುಕಿಕೊಳ್ಳುವಿರಿ. ನೂತನ ದಂಪತಿಗಳಿಗೆ ಸಂತಾನ ಫಲವಿದೆ. ಅಧಿಕ ಓಡಾಟದಿಂದ ದೇಹಾಯಾಸವಾಗಬಹುದು.

ಮೀನ: ಗೃಹ ಸಂಬಂಧೀ ಕೆಲಸಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚಗಳು ಕಂಡುಬರಲಿವೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ನಿರುತ್ಸಾಹ ಕಂಡುಬರಬಹುದು. ಮಹಿಳಾ ಉದ್ಯೋಗಿಗಳಿಗೆ ಶುಭ ಫಲವಿದೆ. ಚಿಂತಿತ ಕೆಲಸಗಳು ಪೂರ್ತಿಯಾಗಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ತ್ರೀಯರ ಕೈಗಳು ಒರಟಾಗಿದ್ದರೆ ಏನು ದೋಷ ಗೊತ್ತಾ?