Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಭಾನುವಾರ, 24 ಮಾರ್ಚ್ 2019 (08:39 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಗೃಹೋಪಯೋಗಿ ವಸ್ತುಗಳ ಖರೀದಿ ವಿಚಾರದಲ್ಲಿ ಮನೆಯವರೊಡನೆ ಭಿನ್ನಾಭಿಪ್ರಾಯಗಳು ಮೂಡುವುದು. ಸಾಂಸಾರಿಕವಾಗಿ ಕೆಲವೊಂದು ಸಮಸ್ಯೆಗಳಿದ್ದರೂ, ಕಚೇರಿ ಕೆಲಸದ ಒತ್ತಡಗಳಿಂದ ಬಿಡುವು ಸಿಗಲಿದ್ದು, ಆರಾಮವೆನಿಸಲಿದೆ.

ವೃಷಭ: ಅವಿವಾಹಿತರಿಗೆ ಕಂಕಣ ಭಾಗ್ಯ ಒದಗಿಬರುವುದು. ನಿರುದ್ಯೋಗಿಗಳು ಉದ್ಯೋಗ ಲಾಭ ಪಡೆಯುವರು. ವಿದ್ಯಾರ್ಥಿಗಳು ಪ್ರಯತ್ನ ಹೆಚ್ಚಿಸಬೇಕು. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸುವುದಕ್ಕೆ ಚಿಂತನೆ ಮಾಡುವಿರಿ.

ಮಿಥುನ: ನಿಮ್ಮ ಅತಿಯಾದ ಆತ್ಮವಿಶ್ವಾಸವೇ ನಿಮಗೆ ಮುಳುವಾಗಲಿದೆ. ಅಪರಿಚಿತರನ್ನು ನಂಬಿ ಹಣ ಹೂಡಿಕೆ ಮಾಡಲು ಹೋಗಬೇಡಿ. ವಂಚನೆ ಭೀತಿಯಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರಾಗಬಹುದು. ಎಚ್ಚರ ಅಗತ್ಯ.

ಕರ್ಕಟಕ: ಬಹುದಿನಗಳ ನಂತರ ಆಪ್ತ ಮಿತ್ರನ ಭೇಟಿ ಮನಸ್ಸಿಗೆ ಮುದವುಂಟುಮಾಡಲಿದೆ. ಕೌಟುಂಬಿಕವಾಗಿ ನೆಮ್ಮದಿಯ ದಿನಗಳಿವು. ಆದರೆ ಹಿರಿಯರ ಆರೋಗ್ಯ ಹದಗೆಡುವುದು. ಎಚ್ಚರಿಕೆ ಅಗತ್ಯ.

ಸಿಂಹ: ವ್ಯಾಪಾರಿಗಳು ಉತ್ತಮ ಲಾಭ ಕಾಣುವರು. ಆರ್ಥಿಕವಾಗಿ ಆದಾಯಕ್ಕೇನೂ ಕೊರತೆಯಾಗದು. ಆದರೆ ದೂರ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಅಪಘಾತದ ಭೀತಿಯಿದೆ. ಕಷ್ಟ ನಷ್ಟಗಳನ್ನು ಎದುರಿಸಲು ಸಿದ್ಧರಾಗಿ.

ಕನ್ಯಾ: ಸಾಕಷ್ಟು ಖರ್ಚು ವೆಚ್ಚಗಳಗಾಗುವುದು. ಮನಸ್ಸಿಗೆ ಯಾವುದೋ ಚಿಂತೆ ಆವರಿಸಿ, ದೈನಂದಿನ ಕೆಲಸಗಳಲ್ಲಿ ಉದಾಸೀನ ಪ್ರವೃತ್ತಿ ತೋರುವಿರಿ. ಅಂದುಕೊಂಡ ಕಾರ್ಯಗಳು ನಿಧಾನಗತಿಯಲ್ಲಿ ನಡೆಯಲಿದೆ. ನೆಮ್ಮದಿಗಾಗಿ ದೇವತಾ ಪ್ರಾರ್ಥನೆ ಮಾಡಿ.

ತುಲಾ: ಸನ್ಮಿತ್ರರೊಂದಿಗೆ ಭೋಜನ ಯೋಗವಿದೆ. ಅನಿರೀಕ್ಷಿತವಾಗಿ ಬಂಧು ಮಿತ್ರರ ಜತೆಗೆ ಪ್ರವಾಸ ತೆರಳುವಿರಿ. ವಿದ್ಯಾರ್ಥಿಗಳಿಗೆ ಅಭ‍್ಯಾಸದಲ್ಲಿ ಕೊಂಚ ಉದಾಸೀನ ಪ್ರವೃತ್ತಿ ಕಂಡುಬರುವುದು. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು.

ವೃಶ್ಚಿಕ: ದೈಹಿಕ ಮಾನಸಿಕ ಆರೋಗ್ಯ ಹದಗೆಟ್ಟೀತು. ತಾಳ್ಮೆಯಿಂದಿರುವುದು ಮುಖ್ಯ. ದಾಂಪತ್ಯದಲ್ಲಿ ಸಂಗಾತಿಯ ಸಹಕಾರವಿರುವುದು. ಆದರೆ ಮನೆ, ಆಸ್ತಿ ವಿವಾದಗಳು ನಿಮ್ಮನ್ನು ಹೈರಾಣಾಗಿಸಲಿದೆ. ಹಿರಿಯರ ಸಲಹೆ ಪಡೆಯಿರಿ.

ಧನು: ವಿದ್ಯಾರ್ಥಿಗಳು ಪ್ರಯತ್ನಬಲ ಮುಂದುವರಿಸಬೇಕಾಗುತ್ತದೆ. ಉದ್ಯೋಗ ಬದಲಾವಣೆ ಯೋಗವಿದೆ. ಮನೆ, ಆಸ್ತಿ ಖರೀದಿ ಬಗ್ಗೆ ಚಿಂತನೆ ನಡೆಸುವಿರಿ. ಸಾಮಾಜಿಕವಾಗಿ ನಿಮ್ಮ ಗೌರವ, ಸ್ಥಾನ ಮಾನ ಹೆಚ್ಚುವುದು.

ಮಕರ: ಸಾಮಾಜಿಕವಾಗಿ ಶತ್ರುನಾಶವಾಗಿ ನೆಮ್ಮದಿ ಕಾಣುವಿರಿ. ಹಿತಚಿಂತಕರ ಮಾತಿಗೆ ಬೆಲೆಕೊಡಿ. ನೂತನ ದಂಪತಿಗಳಿಗೆ ಶುಭ ಸುದ್ದಿಯೊಂದು ಕಾದಿದೆ. ಸ್ತ್ರೀಯರಿಗೆ ಆರ್ಥಿಕ ಸ್ಥಿತಿ ಗತಿ ಹೆಚ್ಚಿ ಸಂತಸವಾಗುವುದು. ದಿನದಂತ್ಯಕ್ಕೆ ಮತ್ತಷ್ಟು ಶುಭ ಸುದ್ದಿ ಕಾದಿದೆ.

ಕುಂಭ: ಸ್ವ ಉದ್ಯೋಗ ಮಾಡುವವರು ಕೊಂಚ ನಷ್ಟ ಅನುಭವಿಸಬೇಕಾಗುತ್ತದೆ. ಆರ್ಥಿಕ ಮುಗ್ಗಟ್ಟು ಎದುರಾಗುವದು. ಆದರೆ ಕಷ್ಟ ಕಾಲದಲ್ಲಿ ಮಿತ್ರರ ಸಹಾಯ ದೊರಕುವುದು. ವ್ಯಾಜ್ಯಗಳಿದ್ದರೆ ಮಾತುಕತೆಯಲ್ಲೇ ಪರಿಹಾರ ಕಂಡುಕೊಳ್ಳಿ.

ಮೀನ: ಆರ್ಥಿಕ ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ ಕೊಂಚ ಕಷ್ಟ ನಷ್ಟಗಳನ್ನು ಎದುರಿಸಬೇಕಾಗಬಹುದು. ಆದರೆ ಧೃತಿಗೆಡಬೇಕಿಲ್ಲ. ಸಂಗಾತಿಯ ಮೂಲಕ ನಿಮ್ಮ ಕಷ್ಟಕ್ಕೆ ಪರಿಹಾರವೊಂದು ಸಿಗಲಿದೆ. ಕುಲದೇವರ ಪ್ರಾರ್ಥಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments