Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಸೋಮವಾರ, 25 ಫೆಬ್ರವರಿ 2019 (08:44 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕಾರ್ಯದೊತ್ತಡ ಹೈರಾಣಾಗಿಸಲಿದೆ. ಆರೋಗ್ಯವೂ ಹದಗೆಡುವುದು. ಉಸಿರಾಟ ಸಂಬಂಧೀ ಖಾಯಿಲೆಗಳು ಆತಂಕಕ್ಕೆ ಕಾರಣವಾಗುತ್ತದೆ. ಆದರೆ ಆರ್ಥಿಕವಾಗಿ ಬಾಕಿ ಬರಬೇಕಿದ್ದ ಹಣ ಪಾವತಿಯಾಗಿ ಅಭಿವೃದ್ಧಿ ಕಾಣುವಿರಿ.

ವೃಷಭ: ಸಹೋದರರೊಂದಿಗೆ ವಾಗ್ವಾದಕ್ಕಿಳಿಯಬೇಡಿ. ಸಮಾಧಾನವೇ ಇಂದು ನಿಮ್ಮನ್ನು ಕಾಪಾಡುವ ಅಸ್ತ್ರವಾಗಲಿದೆ. ನೆರೆಹೊರೆಯವರ ಸಹಕಾರ ಸಿಕ್ಕಿ ಸಂಭಾವ್ಯ ತೊಂದರೆ ನಿವಾರಣೆಯಾಗಲಿದೆ.

ಮಿಥುನ: ಕಾರ್ಯಕ್ಷೇತ್ರದಲ್ಲಿ ಒತ್ತಡವಿದ್ದರೂ ಸಹೋದ್ಯೋಗಿಗಳ ಸಹಕಾರದಿಂದ ಜಯ ಸಿಗುವುದು. ಆದರೆ ಮಾನಸಿಕವಾಗಿ ಯಾವುದೋ ಚಿಂತೆ ಆವರಿಸಲಿದೆ. ವ್ಯಾಪಾರಿಗಳಿಗೆ ಲಾಭಕರ ದಿನ. ಆದರೆ ಹಿತಶತ್ರುಗಳಿಂದ ವಂಚನೆ ಭೀತಿಯಿದೆ.

ಕರ್ಕಟಕ: ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ದಾಯಾದಿಗಳಿಂದ ಕೆಟ್ಟ ಮಾತು ಕೇಳಿಬಂದೀತು. ಕೃಷಿ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಓಡಾಟ ನಡೆಸಬೇಕಾಗುತ್ತದೆ. ಆರ್ಥಿಕವಾಗಿ ಸಾಕಷ್ಟು ಹಣಕಾಸಿನ ಹರಿವಿಲ್ಲದೇ ಒದ್ದಾಡಬೇಕಾಗುತ್ತದೆ.

ಸಿಂಹ: ಕಷ್ಟ ಬಂದಾಗ ನಿಮ್ಮ ಸ್ವ ಧೈರ್ಯದಿಂದ ಎದುರಿಸಿ ಗೆಲ್ಲುವಿರಿ. ನೆರೆಹೊರೆಯವರೊಂದಿಗೆ ಸಣ್ಣ ಪುಟ್ಟ ಘರ್ಷಣೆಯಾಗುವುದು. ಆಸ್ತಿ ಮಾರಾಟ, ಖರೀದಿ ವ್ಯವಹಾರ ಮಾಡುವಿರಿ. ಹಾಗಿದ್ದರೂ ಸಾಕಷ್ಟು ಲಾಭವಿರದು.

ಕನ್ಯಾ: ಕೌಟುಂಬಿಕವಾಗಿ ನೆಮ್ಮದಿ ಕಾಣಲಿದ್ದೀರಿ. ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯುವಿರಿ. ಆದರೆ ವೃತ್ತಿ ರಂಗದಲ್ಲಿ ಕಾರ್ಯದೊತ್ತಡವಿರುತ್ತದೆ. ಮನೆಯಲ್ಲಿ ಅವಿವಾಹಿತರಿದ್ದರೆ ಅವರ ಮದುವೆ ಕಾರ್ಯಗಳಿಗೆ ಓಡಾಟ ನಡೆಸಲಿದ್ದೀರಿ.

ತುಲಾ: ಆರ್ಥಿಕವಾಗಿ ಹಂತ ಹಂತವಾಗಿ ಚೇತರಿಕೆ ಕಾಣುವಿರಿ. ಹಿರಿಯರ ಉಪೇಕ್ಷೆ ನಿಮ್ಮ ಮನಸ್ಸಿಗೆ ಬೇಸರವುಂಟುಮಾಡುವುದು. ಅವಿವಾಹಿತರು ಸ್ವಲ್ಪ ದಿನ ಕಾಯಬೇಕಾಗುತ್ತದೆ. ಮನಸ್ಸಿಗೆ ನೆಮ್ಮದಿಗೆ ದೇವರ ಮೊರೆ ಹೋಗಿ.

ವೃಶ್ಚಿಕ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗದು. ಮನೆಕೆಲಸದವರ ಮೈಗಳ್ಳತನದಿಂದ ನಷ್ಟ ಅನುಭವಿಸುವಿರಿ. ವಾಹನ ಚಾಲನೆ ಮಾಡುವಾಗ ಎಚ್ಚರವಿರಲಿ. ಆರೋಗ್ಯ ಭಾಗ್ಯ ಕೈಕೊಡುವುದು. ಸಂಗಾತಿಯಿಂದ ಸಹಕಾರವಿರುವುದು.

ಧನು: ಮಕ್ಕಳಿಂದ ಶುಭ ಸುದ್ದಿ. ಆದರೆ ಹಿರಿಯರ ಆರೋಗ್ಯ ಚಿಂತೆಗೆ ಕಾರಣವಾಗಲಿದೆ. ಸಾಮಾಜಿಕವಾಗಿ ಉನ್ನತ ಸ್ಥಾನಮಾನ ಪಡೆಯುವಿರಿ. ಸಹೋದರರಿಂದ ಉಪೇಕ್ಷೆಗೊಳಗಾಬೇಕಾಗುತ್ತದೆ.

ಮಕರ: ಮಹಿಳೆಯರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ಆದರೆ ಖರ್ಚು ಹೆಚ್ಚಾಗುವುದು. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಕಾಣುವರು. ಮಿತ್ರರಿಂದ ಸಹಕಾರ ದೊರೆಯುವುದು. ದಿನದಂತ್ಯಕ್ಕೆ ಶುಭ ಸುದ್ದಿ.

ಕುಂಭ: ಹಠಾತ್ ಉಸಿರಾಟ ಸಂಬಂಧೀ ಕಾಯಿಲೆ ಬಂದು ತೊಂದರೆಗೆ ಸಿಲುಕಿಕೊಳ್ಳಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ, ವರ್ಗಾವಣೆ ಯೋಗವಿದೆ. ಕೃಷಿಕರು ಲಾಭ ಪಡೆಯುವರು. ಆರ್ಥಿಕವಾಗಿ ಚೇತರಿಕೆ ಕಾಣುವುದು.

ಮೀನ: ಮಾತಿನ ಮೇಲೆ ನಿಗಾ ಇರಲಿ. ದಾಯಾದಿಗಳೊಂದಿಗೆ ವಾಗ್ವಾದಕ್ಕಿಳಿಯಬೇಕಾಗುತ್ತದೆ. ಆಸ್ತಿ ವ್ಯವಹಾರಗಳು ಕಗ್ಗಂಟಾಗಲಿವೆ. ಖರ್ಚು ವೆಚ್ಚಗಳೂ ಅಧಿಕವಾಗಲಿದೆ. ಮನಸ್ಸಿನ ನೆಮ್ಮದಿಗೆ ಮೌನವೇ ಮದ್ದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                  

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments