Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 23 ಜನವರಿ 2019 (08:48 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ವ್ಯವಹಾರಗಳಲ್ಲಿ ಕಾರ್ಯ ಸಿದ್ಧಿಯಾಗಲಿದೆ. ಆದರೆ ಮಾನಸಿಕವಾಗಿ ಯಾವುದೋ ಒಂದು ವಿಚಾರ ನಿಮ್ಮನ್ನು ಕೊರೆಯಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬಂದೀತು. ಹಣಕಾಸಿನ ಹರಿವಿಗೆ ತೊಂದರೆ ಇರದು.

ವೃಷಭ: ನಿಮ್ಮ ಏಳಿಗೆ ನೋಡಿ ಹೊಟ್ಟೆ ಕಿಚ್ಚು ಪಡುವವರಿಂದ ತೊಂದರೆಯಾಗಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲ ದೊರಕಲಿದೆ. ಆರೋಗ್ಯದಲ್ಲಿ ಹೆಚ್ಚಿನ ಕಾಳಜಿ ಅಗತ್ಯ.

ಮಿಥುನ: ಹಲವು ಮೂಲಗಳಿಂದ ಬರಬೇಕಿದ್ದ ಬಾಕಿ ಹಣಗಳು ಪಾವತಿಯಾಗಿ ಆರ್ಥಿಕವಾಗಿ ಸುಭದ್ರವಾಗಲಿದ್ದೀರಿ. ಆದರೆ ಹಿತಶತ್ರುಗಳು ವಂಚಿಸುವ ಸಾಧ್ಯತೆಯಿದೆ. ನಿಮ್ಮ ವ್ಯವಹಾರದ ಗುಟ್ಟು ಬೇರೆಯರ ಎದುರು ರಟ್ಟು ಮಾಡಬೇಡಿ. ಆರೋಗ್ಯದಲ್ಲಿ ಕೊಂಚ ವ್ಯತ್ಯಯವಾದೀತು.

ಕರ್ಕಟಕ: ಸರ್ಕಾರಿ ಕೆಲಸ, ವ್ಯವಹಾರಗಳಲ್ಲಿ ಜಯ ಸಿಗಲಿದೆ. ಕೋರ್ಟು ಕಲಾಪಗಳಲ್ಲಿ ಮೇಲುಗೈ ಸಾಧಿಸುವಿರಿ. ಆದರೆ ಆಸ್ತಿ ವಿಚಾರದಲ್ಲಿ ದಾಯಾದಿಗಳ ಕಿರಿ ಕಿರಿ ಇರುವುದು. ಆದರೆ ಹಣಕಾಸಿಗೆ ಯಾವುದೇ ತೊಂದರೆ ಇರದು.

ಸಿಂಹ: ವ್ಯವಹಾರಗಳಲ್ಲಿ ಜಯ, ಆದರೆ ಹಿತಶತ್ರುಗಳಿಂದ ವಂಚನೆ ಭೀತಿ ಎದುರಾಗಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿದ್ದು, ಅಂದುಕೊಂಡ ಕಾರ್ಯಗಳು ನೆರವೇರುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು.

ಕನ್ಯಾ: ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ ಎದುರಾಗುವುದು. ಕುಟುಂಬದಲ್ಲಿ ಯಾರಾದರೊಬ್ಬರು ಅನಾರೋಗ್ಯಕ್ಕೆ ತುತ್ತಾಗುವರು. ವ್ಯವಹಾರದಲ್ಲಿ ಜಯ ಗಳಿಸುವಿರಿ.

 

ತುಲಾ: ಸಂಕಷ್ಟದಲ್ಲಿದ್ದಾಗ ಯಾರಾದರೂ ಸಹಾಯಕ್ಕೆ ಬಂದು ನಿಮ್ಮ ಕಾರ್ಯ ಸಾಧನೆಯಾಗಲಿದೆ. ಸಮಾಜದಲ್ಲಿ ನಿಮ್ಮ ಸ್ಥಾನ ಮಾನ ಹೆಚ್ಚುವುದು. ಸಾಕಷ್ಟು ಆರ್ಥಿಕ ಲಾಭ ಗಳಿಸುವುದರಿಂದ ಮನೆಗಾಗಿ ಹೊಸ ವಸ್ತುಗಳ ಖರೀದಿಗೆ ಚಿಂತನೆ ಮಾಡುವಿರಿ.

ವೃಶ್ಚಿಕ: ಉದ್ಯೋಗದಲ್ಲಿ ಅಂದುಕೊಂಡ ಕಾರ್ಯಗಳು ನೆರವೇರದು. ಸಹೋದ್ಯೋಗಿಗಳಿಂದಲೇ ಅಡೆತಡೆ ಉಂಟಾಗುವುದು. ಅವಿವಾಹಿತರಿಗೆ ವಿವಾಹ ಭಾಗ್ಯ ಇರುವುದು. ಆರ್ಥಿಕವಾಗಿ ಕೊಂಚ ಹಣಕಾಸಿನ ಮುಗ್ಗಟ್ಟು ಎದುರಿಸುವಿರಿ.

ಧನು: ನಿರ್ಧಾರ ಕೈಗೊಳ್ಳುವ ಬಗ್ಗೆ ಸಂದಿಗ್ಧತೆ ಎದುರಿಸುವಿರಿ. ದೇವರ ದರ್ಶನ ಪಡೆಯುವಿರಿ. ಹೊಸ ವಸ್ತು, ಆಸ್ತಿ ಖರೀದಿಯಿಂದ ನಷ್ಟ ಅನುಭವಿಸಬೇಕಾದೀತು. ಸಂಗಾತಿಯೊಂದಿಗೆ ಮನಸ್ತಾಪ ತಲೆದೋರೀತು. ಎಚ್ಚರಿಕೆ ಅಗತ್ಯ.

ಮಕರ: ಉದ್ಯೋಗ ನಿಮಿತ್ತ ದೂರದೂರಿಗೆ ಪ್ರಯಾಣ ಮಾಡುವಿರಿ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಅವಕಾಶಗಳು ಸಿಗುವುದು. ಪ್ರೇಮಿಗಳಿಗೆ ಶುಭ ದಿನ. ಸಮಸ್ಯೆಗಳ ನಿವಾರಣೆಗೆ ಮುಂದಾಗುವಿರಿ.

ಕುಂಭ: ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಶತ್ರು ಬಾಧೆ. ಕಣ್ಣು ಮುಚ್ಚಿ ಯಾರನ್ನೂ ನಂಬಿ ಕೆಲಸ ಕಾರ್ಯಗಳಿಗೆ ತೊಡಗಬೇಡಿ. ಆರ್ಥಿಕವಾಗಿ ಕೊಂಚ ಹಣ ಖರ್ಚು ಮಾಡಬೇಕಾದೀತು. ಆದರೆ ದಿನದಂತ್ಯಕ್ಕೆ ಜಯ ನಿಮ್ಮದೇ ಆಗಿರುತ್ತದೆ.

ಮೀನ: ಬೇಡದ ವಿಚಾರಗಳಲ್ಲಿ ಮೂಗು ತೂರಿಸಲು ಹೋಗಬೇಡಿ. ವಾದ ವಿವಾದಗಳಿಂದ ಅಪವಾದಕ್ಕೆ ಗುರಿಯಾಗುವಿರಿ. ಹಿರಿಯರ ಸೂಕ್ತ ಸಲಹೆಗಳು ನಿಮ್ಮ ಪ್ರಯೋಜನಕ್ಕೆ ಬರಲಿವೆ. ಎಚ್ಚರಿಕೆ ಮತ್ತು ತಾಳ್ಮೆಯಿಂದ ಹೆಜ್ಜೆಯಿಡುವುದು ಅಗತ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments