Select Your Language

Notifications

webdunia
webdunia
webdunia
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶನಿವಾರ, 29 ಡಿಸೆಂಬರ್ 2018 (09:03 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಕೆಲಸ ಕಾರ್ಯಗಳಿಗಾಗಿ ಓಡಾಟ ಹೆಚ್ಚಿ  ದೇಹಾಯಾಸವಾಗುವುದು. ಕೈಗೊಳ್ಳಲು ಮುಂದಾಗುವ ಕಾರ್ಯಗಳಲ್ಲಿ ವಿಘ್ನಗಳು ಎದುರಾದೀತು. ವಿಘ್ನೇಶ್ವರನ ಪ್ರಾರ್ಥನೆ ಮಾಡಿ ಕೆಲಸಗಳಿಗೆ ಕೈ ಹಾಕಿ.

ವೃಷಭ: ಮಹಿಳೆಯರಿಗೆ ಉದ್ಯೋಗದಲ್ಲಿ ಕಿರಿ ಕಿರಿ ಎದುರಾದೀತು. ಹೊಸ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳನ್ನು ಮಾಡುವಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದ ಯಶಸ್ಸು.

ಮಿಥುನ: ಆರೋಗ್ಯದಲ್ಲಿ ವ್ಯತ್ಯಯವಾಗಿಲದೆ. ಆರ್ಥಿಕ ಆದಾಯವಿದ್ದಷ್ಟೇ ಖರ್ಚುವೆಚ್ಚಗಳೂ ಅಧಿಕವಾಗುವುದು. ಹೊಸ ವಸ್ತುಗಳನ್ನು ಖರೀದಿಸುವಿರಿ. ದಿನದಂತ್ಯಕ್ಕೆ ಶುಭ ಸುದ್ದಿ.

ಕರ್ಕಟಕ: ಕುಟುಂಬದಲ್ಲೇ ಯಾವುದೋ ವಿಚಾರಕ್ಕೆ ವಾಗ್ವಾದಗಳಾಗಿ ಮನಸ್ತಾಪಗಳು ಎದುರಾದಾವು. ಎಚ್ಚರಿಕೆಯಿಂದ ವರ್ತಿಸಿ. ಸಂಗಾತಿ ಜತೆ ಕಲಹ ಮಾಡುವಿರಿ. ಹಿತ ಶತ್ರುಗಳ ಬಗ್ಗೆ ಎಚ್ಚರವಾಗಿರಿ.

ಸಿಂಹ: ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಖರ್ಚು ವೆಚ್ಚಗಳು ಅಧಿಕವಾಗುವುದು. ಬರಬೇಕಾದ ಬಾಕಿ ನಿಧಾನವಾಗಿಯಾದರೂ ಸಂದಾಯವಾಗಲಿದೆ. ದಂಪತಿಗಳ ನಡುವೆ ಸಾಮರಸ್ಯವಿರಲಿದೆ.

ಕನ್ಯಾ: ಬೇರೆಯವರಿಗೆ ಧನ ಸಹಾಯ ಮಾಡಲು ಹೋಗಬೇಡಿ. ಇಂದು ವಂಚನೆಗೊಳಗಾಗುವ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ದೂರ ಸಂಚಾರ ಯೋಗವಿದ್ದು, ಪ್ರಯಾಣದಲ್ಲಿ ಎಚ್ಚರ.

ತುಲಾ: ದುಡುಕಿನ ವರ್ತನೆ ತೋರದಿರಿ. ಬಾಯ್ತಪ್ಪಿ ಆಡುವ ಮಾತುಗಳು ಸಂಬಂಧ ಹಾಳು ಮಾಡೀತು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು. ಖರ್ಚು ವೆಚ್ಚಗಳು ಅಧಿಕವಾಗುವುದು.

ವೃಶ್ಚಿಕ: ಆರೋಗ್ಯ ಸಮಸ್ಯೆ ಎದುರಾದೀತು. ವ್ಯಾಪಾರಿಗಳಿಗೆ ಧನ ಲಾಭ ಯೋಗವಿದೆ. ಹೊಸ ವಸ್ತು ಖರೀದಿಯಿಂದ ನಷ್ಟ ಅನುಭವಿಸುವಿರಿ. ಮನೆ ಖರ್ಚುಗಳು ಹೆಚ್ಚಾಗುವುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ.

ಧನು: ಇದುವರೆಗೆ ಕೈಗೊಳ್ಳುತ್ತಿದ್ದ ಕಾರ್ಯಗಳಿಗೆ ವಿಘ್ನಗಳು ಎದುರಾಗಿ ಅರ್ಧಕ್ಕೆ ನಿಂತುಬಿಡುತ್ತವೆ. ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಬರುವಂತಹ ವಿಘ್ನ ನಿವಾರಣೆಗೆ ಪ್ರಾರ್ಥಿಸಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ.

ಮಕರ:ಹಣ ಕಾಸಿನ ಮುಗ್ಗಟ್ಟಿನಿಂದ ಅಗತ್ಯ ಕಾರ್ಯ ಕೈಗೊಳ್ಳಲು ಅಡ್ಡಿಯಾದೀತು. ಸಾಲ ಮಾಡಲು ಹೋಗಬೇಡಿ. ಹಾಸಿಗೆ ಇದ್ದಷ್ಟೇ ಕಾಲು ಚಾಚುವುದು ಉತ್ತಮ. ಸಹನೆಯಿಂದ ಬರುವಂತಹ ಕಷ್ಟಗಳನ್ನು ಎದುರಿಸಿದರೆ ಮುಂದೆ ಶುಭ ಫಲವಿದೆ.

ಕುಂಭ: ಯಾರನ್ನೂ ಅತಿಯಾಗಿ ನಂಬಲು ಹೋಗಬೇಡಿ. ಅತಿಯಾದ ವಿಶ್ವಾಸ ನಿಮಗೇ ತಿರುಗುಬಾಣವಾದೀತು. ಹೊಸ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವಿರಿ. ವಿವಿಧ ಮೂಲಗಳಿಂದ ಧನಾಗಮನವಾಗಲಿದೆ.

ಮೀನ: ವಿವಿಧ ವಿಚಾರಗಳನ್ನು ಮನಸ್ಸನ್ನು ಕೊರೆಯುತ್ತಿಲಿದ್ದು, ಅದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ತೊಂದರೆಯಾಗಬಹುದು. ಹಣಕಾಸಿನ ಅಡಚಣೆ ಎದುರಾಗಲಿದೆ. ನೂತನ ದಂಪತಿಗಳು ಸಂತಸದ ಕ್ಷಣ ಕಳೆಯುವರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

Share this Story:

Follow Webdunia kannada

ಮುಂದಿನ ಸುದ್ದಿ

ದುಷ್ಟಶಕ್ತಿಗಳು ಮನೆಯ ಒಳಗೆ ಪ್ರವೇಶ ಮಾಡದಿರಲು ಹೀಗೆ ಪೂಜೆ ಮಾಡಿ