Publish Date: Fri, 19 Apr 2019 (05:55 IST)
Updated Date: Fri, 19 Apr 2019 (05:57 IST)
ಬೆಂಗಳೂರು: ದಾನ ಮಾಡುವುದು ಶ್ರೇಷ್ಠ ವಿಚಾರ ಎಂದು ನಮಗೆಲ್ಲಾ ಗೊತ್ತಿದೆ. ಆದರೆ ಯಾವ ದಾನ ಮಾಡಿದರೆ ಏನು ಫಲ ಎಂದು ಗೊತ್ತೇ? ಇಂದು ಹೆಸರು ಬೇಳೆ ದಾನ ಮಾಡುವುದರ ಫಲವೇನೆಂದು ತಿಳಿದುಕೊಳ್ಳೋಣ.
ಹೆಸರು ಬೇಳೆ: ವಿದ್ಯಾಲಕ್ಷ್ಮೀ ಹೆಸರು ಕೇಳುತ್ತಿದ್ದಂತೆ ಎಲ್ಲರಿಗೂ ಸಂತೋಷವಾಗುತ್ತದೆ. ವಿದ್ಯೆ ಎಂದರೆ ಸರಸ್ವತಿ, ಲಕ್ಷ್ಮೀ ಎಂದರೆ ಶ್ರೀ ಮಹಾಲಕ್ಷ್ಮಿ ಎಂದು ಅರ್ಥ.
ಹೆಸರು ಬೇಳೆಯನ್ನು ದಾನ ಮಾಡಿದವರಿಗೂ, ತೆಗೆದುಕೊಂಡವರಿಗೂ ಸರಸ್ವತೀ ದೇವಿಯ
ಶಾಶ್ವತ ಅನುಗ್ರಹ ಸಿಗುತ್ತದೆ. ಹೆಸರು ಬೇಳೆ ದಾನದಿಂದ ಸುಖ, ಶಾಂತಿ, ನೆಮ್ಮದಿಯ ವಾತಾವರಣ ಇರುತ್ತದೆ. ಮನೆಯಲ್ಲಿ ಒಳಜಗಳಗಳು ನಿವಾರಣೆಯಾಗುತ್ತದೆ. ದೇವಿಗೆ ಹೆಸರು ಬೇಳೆ ತುಂಬಾ ಇಷ್ಟ. ಇದರಿಂದ ದೇವಿ ಪ್ರಸನ್ನಳಾಗುತ್ತಾಳೆ. ಮನೆಯಲ್ಲಿ ಎಲ್ಲರೂ ವಿದ್ಯಾವಂತರಾಗುತ್ತಾರೆ. ಗ್ಯಾಸ್ಟ್ರಿಕ್, ಗರ್ಭಕೋಶದ ಸಮಸ್ಯೆಗಳು ಕಡಿಮೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ