Publish Date: Tue, 07 Mar 2017 (14:39 IST)
Updated Date: Tue, 07 Mar 2017 (14:42 IST)
ನೀವು ರೆಫ್ರಿಜಿರೇಟರ್ನಲ್ಲಿ ಹಿಟ್ಟನ್ನು ಇಡುತ್ತೀರಾ? ಹಾಗಾದರೆ ನೀವು ಈ ಸುದ್ದಿಯನ್ನು ಖಂಡಿತ ಓದಬೇಕು. ನಿಮಗೆ ಗೊತ್ತೇ? ರೆಫ್ರಿಜರೇಟರ್ನಲ್ಲಿ ಹಿಟ್ಟನ್ನು ಇಡುವುದರ ಮೂಲಕ ನೀವು ಭೂತಪ್ರೇತದಂತಹ ನಕಾರಾತ್ಮಕ ಶಕ್ತಿಗಳಿಗೆ ಆಮಂತ್ರಣ ನೀಡುತ್ತಿದ್ದೀರ.
ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ತಂಗಳು ಆಹಾರ ಭೂತಪ್ರೇತಗಳ ಆಹಾರವೆನಿಸುತ್ತದೆ. ಇದನ್ನು ಸೇವಿಸುವವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಮತ್ತು ಸಮಸ್ಯೆಗಳಿಂದ ಜರ್ಜರಿತರಾಗಿರುತ್ತಾರೆ. ಇಂತಹ ಆಹಾರವನ್ನು ಸೇವಿಸುವವ ಕುಟುಂಬದವರು ಕಾಯಿಲೆ, ಕ್ರೋಧ ಸ್ವಭಾವ ಮತ್ತು ಆಲಸ್ಯದ ವಶವಾಗಿರುತ್ತಾರೆ.
ರೆಫ್ರಿಜಿರೇಟರ್ನಲ್ಲಿಟ್ಟ ಹಿಟ್ಟು ನಿಮ್ಮ ಸಮಯವನ್ನು ಉಳಿಸುತ್ತದೆ, ಹೀಗಾಗಿ ಇತ್ತೀಚಿಗಂತೂ ಜನರು ಮಿಕ್ಕ ಆಹಾರ, ನಾದಿಟ್ಟ ಹಿಟ್ಟನ್ನೆಲ್ಲ ಕೆಡದಿರಲೆಂದು ರೆಫ್ರಿಜಿರೇಟರ್ನಲ್ಲಿಡುತ್ತಾರೆ.
ಆದರೆ ಇದು ನಕಾರಾತ್ಮಕ ಶಕ್ತಿಗಳನ್ನು ಆಹ್ವಾನಿಸುತ್ತದೆ. ನಾದಿಟ್ಟಿರುವ ಹಿಟ್ಟು ವ್ಯಕ್ತಿಯ ಸಾವಿನ ನಂತರ ಆತ್ಮಕ್ಕೆ ಇಡಲಾಗುವ ಪಿಂಡಕ್ಕೆ ಸಮ ಎಂದು ಹೇಳಲಾಗುತ್ತದೆ. ಈ ಕಾರಣಕ್ಕೆ ಅದನ್ನು ತಿನ್ನಲು ಭೂತ-ಪ್ರೇತಗಳು ನಿಮ್ಮ ಅಡುಗೆಮನೆಗೆ ಧಾವಿಸಿ ಬರುತ್ತವೆ. ಸಾವಿನ ನಂತರ ಪಿಂಡ ಸಿಗದಿದ್ದ ಆತ್ಮಗಳಂತೂ ಈ ಹಿಟ್ಟನ್ನು ತಿಂದು ತೃಪ್ತಿ ಪಡೆಯಲು ಬರುತ್ತವೆ ಎನ್ನಲಾಗುತ್ತದೆ.