Webdunia - Bharat's app for daily news and videos

Install App

ಆಷಾಢದಲ್ಲಿ ನವದಂಪತಿಗಳು ಸಂಸಾರ ನಡೆಸಬಾರದು ಎಂದು ಹೇಳೋದ್ಯಾಕೆ..?

Webdunia
ಸೋಮವಾರ, 4 ಜೂನ್ 2018 (06:16 IST)
ಬೆಂಗಳೂರು : ಆಷಾಢ ಮಾಸದಲ್ಲಿ ಹೊಸ ಜೋಡಿ ಅಥವಾ ನವದಂಪತಿಗಳು ಸಂಸಾರ ನಡೆಸಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆ ಆಚಾರ ಈಗಲೂ ಕೂಡ ಕೆಲವುಕಡೆ ಆಚರಣೆಯಲ್ಲಿದೆ. ಇದರ ಹಿಂದೆ ಒಂದು ಮುಖ್ಯವಾದ ಕಾರಣವಿದೆ.


ಆಷಾಢ ಮಾಸದಲ್ಲಿ ವಾತಾವರಣದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ತಣ್ಣಗಿನ ವಾತಾವರಣದ ಕಾರಣ ಬ್ಯಾಕ್ಟೀರಿಯಾ, ವೈರಸ್‍ಗಳಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತವೆ. ಇದನ್ನು ಅನಾರೋಗ್ಯ ಮಾಸ ಎಂದೂ ಕರೆಯುತ್ತಾರೆ. ಗಾಳಿಯ ಜತೆಗೆ ಮಳೆಯೂ ಸುರಿಯುತ್ತಿರುತ್ತದೆ. ಕಾಲುವೆಗಳಲ್ಲಿ, ನದಿಗಳಲ್ಲಿ ಪ್ರವಹಿಸುವ ನೀರು ಸ್ವಚ್ಛವಾಗಿರಲ್ಲ. ಮಾಲಿನ್ಯದಿಂದ ಕೂಡಿದ ನೀರಿನಿಂದ ಅನಾರೋಗ್ಯ ಸಮಸ್ಯೆಗಳು ತಲೆಯೆತ್ತುತ್ತವೆ.


ಈ ರೀತಿಯ ಸಮಯದಲ್ಲಿ ಹೊಸ ಮದುಮಗಳು ಗರ್ಭಿಣಿಯಾದರೆ ಹುಟ್ಟಲಿರುವ ಮಗು ಮೇಲೆ ಅದರ ಪ್ರಭಾವ ಇರುತ್ತದೆಂಬುದು ಶಾಸ್ತ್ರೀಯ ನಂಬಿಕೆ. ಭ್ರೂಣಕ್ಕೆ ಮೊದಲ ಮೂರು ತಿಂಗಳು ಬಹಳ ಮುಖ್ಯ. ಆ ಸಮಯದಲ್ಲಿ ಅವಯವಗಳು ರೂಪುಗೊಳ್ಳುವ ಪ್ರಕ್ರಿಯೆ ಆರಂಭವಾಗಿರುತ್ತದೆ. ಆದಕಾರಣ ಈ ತಿಂಗಳಲ್ಲಿ ವಧು ತವರುಮನೆಯಲ್ಲಿ ಇರುವುದೇ ಕ್ಷೇಮ ಎಂದು ಹಿರಿಯರು ಆಚಾರವನ್ನಿಟ್ಟರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮನೆಯ ಈ ಭಾಗದಲ್ಲಿ ಪಪ್ಪಾಯ ಗಿಡ ನೆಡಬಾರದು ಯಾಕೆ ನೋಡಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶ್ರೀ ಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಓದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Mouni Amavasya: ಮೌನಿ ಅಮವಾಸ್ಯೆಗೆ ಯಾವ ದೇವರ ಪೂಜೆ ಮಾಡಬೇಕು

ಮುಂದಿನ ಸುದ್ದಿ
Show comments