Webdunia - Bharat's app for daily news and videos

Install App

ಕೈಗೆ ಕೆಂಪು, ಹಳದಿ, ಕಿತ್ತಳೆ ಬಣ್ಣಗಳಿರುವ ದಾರವನ್ನು ಯಾಕೆ ಕಟ್ಟುತ್ತಾರೆ ಎಂದು ತಿಳಿಬೇಕಾ?

Webdunia
ಭಾನುವಾರ, 3 ಜೂನ್ 2018 (16:03 IST)
ಬೆಂಗಳೂರು : ಪೂಜೆ, ವ್ರತಗಳನ್ನು ಮಾಡುವಾಗ, ಶುಭ ಕಾರ್ಯಗಳಲ್ಲಿ ಕೈಗೆ ಕೆಂಪು, ಹಳದಿ, ಕಿತ್ತಳೆ ಬಣ್ಣಗಳಿರುವ ದಾರವನ್ನುಕಟ್ಟುತ್ತಾರೆ. ದೇವಾಲಯಗಳಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿಸಿದಾಗ ಸಹ ಪೂಜಾರಿಗಳು ಈ ದಾರವನ್ನು ಕೈಗೆ ಕಟ್ಟುತ್ತಾರೆ, ಇದನ್ನು ಮೌಳಿ ದಾರ ಎಂದು ಕರೆಯುತ್ತಾರೆ. ಈ ದಾರವನ್ನು ಕಟ್ಟುವುದರ ಹಿಂದಿನ ಉದ್ದೇಶ ಏನು ಗೊತ್ತಾ? ಯಾಕೆ ಕಟ್ಟುತ್ತಾರೆ ಅಂತ ತಿಳಿಬೇಕಾ

ಬಲಿಯ ದಾನಗುಣಗಳನ್ನು ಮೆಚ್ಚಿದ ವಾಮನ ಬಲಿಗೆ ಮೃತ್ಯುಂಜಯನಾಗಿ ಇರುವಂತೆ ವರ ಕೊಟ್ಟು ಈ ಮೌಳಿ ದಾರವನ್ನು ಕಟ್ಟುತ್ತಾನೆ. ಹಾಗಾಗಿ ಅಂದಿನಿಂದ ಇಂದಿನವರೆಗೂ ಅದನ್ನು ಕೈಗೆ ಕಟ್ಟುತ್ತಾ ಬಂದಿದ್ದಾರೆ. ಆ ರೀತಿಯಾಗಿ ಮೌಳಿ ದಾರ ಕಟ್ಟಿದರೆ ಯಾವುದೇ ಕೇಡು ಸಂಭವಿಸುವುದಿಲ್ಲವಂತೆ. ಮೃತ್ಯು ಅಷ್ಟು ಬೇಗ ಸಮೀಪಿಸುವುದಿಲ್ಲವಂತೆ. ಹೆಚ್ಚಿನ ಕಾಲ ಸುಖವಾಗಿ ಬದುಕುತ್ತಾರಂತೆ. ಸಾಕ್ಷಾತ್ ಬ್ರಹ್ಮ, ವಿಷ್ಣು, ಮಹೇಶ್ವರರು, ಅವರ ಪತ್ನಿಯರಾದ ಸರಸ್ವತಿ, ಲಕ್ಷ್ಮಿ, ಪಾರ್ವತಿಯರು ಕಾಪಾಡುತ್ತಾರಂತೆ.

 

ಮೌಳಿ ದಾರದಲ್ಲಿರುವ ಆ ಮೂರು ಬಣ್ಣಗಳು ನವಗ್ರಹಗಳಲ್ಲಿನ ಮೂರು ಬೃಹಸ್ಪತಿ, ಕುಜ, ಸೂರ್ಯ ಗ್ರಹಗಳು. ಇವರು ವ್ಯಕ್ತಿಗಳ ಐಶ್ವರ್ಯಕ್ಕೆ, ಸುಖಕ್ಕೆ, ಶಿಕ್ಷಣಕ್ಕೆ, ಆರೋಗ್ಯ ಪ್ರದಾತರಂತೆ. ಹಾಗಾಗಿ ಆ ಗ್ರಹ ಪೀಡೆ ಇರಬಾರದೆಂದ ಉದ್ದೇಶದಿಂದ ಆ ಬಣ್ಣಗಳಲ್ಲಿನ ಮೌಳಿ ದಾರವನ್ನು ಕಟ್ಟುತ್ತಾರೆ. ಇದನ್ನು ಪುರುಷರ ಬಲಗೈಗೆ, ಸ್ತ್ರೀಯರಿಗೆ ಎಡಗೈಗೆ ಕಟ್ಟುತ್ತಾರೆ. ಮದುವೆಯಾಗದ ಸ್ತ್ರೀಯರಿಗೆ ಬಲಗೈಗೆ ಕಟ್ಟುತ್ತಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

 

 

           

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments