Webdunia - Bharat's app for daily news and videos

Install App

ರಾಶಿಗನುಗುಣವಾಗಿ ಯಾವ ದೇವರನ್ನು ಯಾವ ವಸ್ತುವಿನಿಂದ ಪೂಜೆ ಮಾಡಬೇಕೆಂಬುದು ತಿಳಿಬೇಕಾ?

Webdunia
ಶುಕ್ರವಾರ, 12 ಏಪ್ರಿಲ್ 2019 (10:34 IST)
ಬೆಂಗಳೂರು : ಪ್ರತಿಯೊಬ್ಬರು ದೇವರನ್ನು ಪೂಜೆ ಮಾಡುತ್ತಾರೆ. ಆದರೆ ರಾಶಿಗನುಗುಣವಾಗಿ ಪೂಜೆ ಮಾಡಿದ್ರೆ ಯಶಸ್ಸು ಬೇಗ ಸಿಗುತ್ತೆ ಎನ್ನಲಾಗುತ್ತದೆ. ಹಾಗೇ ರಾಶಿಗನುಗುಣವಾಗಿ ಯಾವ ದೇವರನ್ನು ಯಾವ ವಸ್ತು ಬಳಸಿ ಪೂಜೆ ಮಾಡಬೇಕೆಂಬುದನ್ನು ಮೊದಲು ತಿಳಿದುಕೊಳ್ಳಿ.


ಮೇಷ : ಈ ರಾಶಿಯವರ ದೊಡ್ಡ ಸಮಸ್ಯೆ ಚಂಚಲತೆ. ಹನುಮಂತನ ಆರಾಧನೆ ಮಾಡುವುದು ಉತ್ತಮ. ಪೂಜೆ ವೇಳೆ ಕೆಂಪು ಹೂವನ್ನು ಬಳಸಬೇಕು.

ವೃಷಭ : ಈ ರಾಶಿಯವರ ದೊಡ್ಡ ಸಮಸ್ಯೆ ಹಠಮಾರಿತನ. ಶಿವನ ಆರಾಧನೆ ಮಾಡಬೇಕು. ಬಿಳಿ ಚಂದನ ಬಳಸಿ ಪೂಜೆ ಮಾಡಬೇಕು.

ಮಿಥುನ : ಸಂದಿಗ್ಧತೆ ಇವರ ದೊಡ್ಡ ಸಮಸ್ಯೆ. ಶ್ರೀಕೃಷ್ಣನ ಪೂಜೆ ಬೆಸ್ಟ್. ಗುಗ್ಗುಲ ಧೂಪದಿಂದ ಪೂಜೆ ಮಾಡಬೇಕು.

ಕರ್ಕ : ಭಾವನಾತ್ಮಕತೆ ನಿಮ್ಮ ದೊಡ್ಡ ಸಮಸ್ಯೆ. ಶಿವನ ಆರಾಧನೆ ಮಾಡಬೇಕು. ಪೂಜೆ ವೇಳೆ ಶಂಖವನ್ನು ಅವಶ್ಯವಾಗಿ ಬಳಸಬೇಕು.

ಸಿಂಹ : ಜೀವನದ ಹೋರಾಟ ನಿಮ್ಮ ದೊಡ್ಡ ಸಮಸ್ಯೆ. ಸೂರ್ಯ ದೇವನ ಆರಾಧನೆ ಮಾಡಬೇಕು. ಕುಂಕುಮವನ್ನು ಪೂಜೆಗೆ ಬಳಸಬೇಕು.

ಕನ್ಯಾ : ಧನದ ಹಿಂದೆ ಓಡುವುದು ನಿಮ್ಮ ದೊಡ್ಡ ಸಮಸ್ಯೆ. ದೇವಿ ಮಾತೆಯ ಪೂಜೆ ಮಾಡಬೇಕು. ಶುದ್ಧ ತುಪ್ಪದ ದೀಪವನ್ನು ಬೆಳಗಬೇಕು.

ತುಲಾ : ಅಜಾಗರೂಕತೆ ನಿಮ್ಮ ದೊಡ್ಡ ಸಮಸ್ಯೆ. ಭಗವಂತ ಕೃಷ್ಣನ ಪೂಜೆ ಮಾಡಬೇಕು. ಬಿಳಿ ಬಣ್ಣದ ಹೂ ಬಳಸಬೇಕು.

ವೃಶ್ಚಿಕ : ನಿಧಾನಗತಿ ಜೀವನ ಇವ್ರ ಸಮಸ್ಯೆ. ಹನುಮಂತನ ಆರಾಧನೆ ಮಾಡಬೇಕು. ಪೂಜೆ ವೇಳೆ ತುಳಸಿ ದಳವನ್ನು ಬಳಸಬೇಕು.

ಧನು : ನಿಮ್ಮ ಧ್ವನಿ ನಿಮ್ಮ ದೊಡ್ಡ ಸಮಸ್ಯೆ. ಸೂರ್ಯನ ಆರಾಧನೆ ಮಾಡಬೇಕು. ಬಿಳಿ ಮಿಠಾಯಿಯನ್ನು ಪೂಜೆಗೆ ಬಳಸಿ.

ಮಕರ : ಆರೋಗ್ಯದ ಬಗ್ಗೆ ಉದಾಸೀನತೆ ದೊಡ್ಡ ಸಮಸ್ಯೆ. ಶಿವನ ಪೂಜೆ ಮಾಡಬೇಕು. ಹಳದಿ ಬಣ್ಣದ ಹೂವನ್ನು ಬಳಸಬೇಕು.

ಕುಂಭ : ಬೇರೆಯವರ ಜವಾಬ್ದಾರಿ ಮೈಮೇಲೆಳೆದುಕೊಳ್ಳುವುದು ದೊಡ್ಡ ಸಮಸ್ಯೆ. ಶ್ರೀ ಕೃಷ್ಣನ ಪೂಜೆ ಮಾಡಬೇಕು. ಚಂದನದ ಸುವಾಸನೆಯುಳ್ಳ ಧೂಪವನ್ನು ಬಳಸಬೇಕು.

ಮೀನ : ಜವಾಬ್ದಾರಿ ಬಗ್ಗೆ ಅಜಾಗರೂಕತೆ. ಗಣೇಶನ ಪೂಜೆ ಮಾಡಬೇಕು. ಪೂಜೆ ವೇಳೆ ಲಾಡನ್ನು ಬಳಸಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments