Select Your Language

Notifications

webdunia
webdunia
webdunia
webdunia

ಈ ಜೀವಿಗಳಿಗೆ ಆಹಾರ ನೀಡುವುದರಿಂದ ನಿಮ್ಮ ಸಮಸ್ಯೆಗಳು ದೂರವಾಗುತ್ತದೆಯಂತೆ

ಈ ಜೀವಿಗಳಿಗೆ ಆಹಾರ ನೀಡುವುದರಿಂದ ನಿಮ್ಮ ಸಮಸ್ಯೆಗಳು ದೂರವಾಗುತ್ತದೆಯಂತೆ
ಬೆಂಗಳೂರು , ಶುಕ್ರವಾರ, 6 ಜುಲೈ 2018 (06:41 IST)
ಬೆಂಗಳೂರು : ಮನುಷ್ಯನ ಪ್ರತಿಯೊಂದು ಸಮಸ್ಯೆಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರವಿದೆ. ಸಣ್ಣದರಿಂದ ಹಿಡಿದು ದೊಡ್ಡ ದೊಡ್ಡ ಉಪಾಯಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಅದರಂತೆ  ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡುವುದರಿಂದಲೂ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.


* ಹಸುವಿನಲ್ಲಿ ಧನಾತ್ಮಕ ಶಕ್ತಿಯಿರುತ್ತದೆ. ಮನೆ ಸುತ್ತಮುತ್ತ ಆಕಳಿದ್ದರೆ ಎಲ್ಲ ಸಮಸ್ಯೆಯಿಂದ ಮುಕ್ತಿಹೊಂದಿ ಸುಖ-ಸಮೃದ್ಧಿ ಜೀವನ ನಡೆಸುತ್ತಿದ್ದೀರಿ ಎಂದರ್ಥ. ಪ್ರತಿ ದಿನ ಆಕಳಿಗೆ ಆಹಾರ ನೀಡಿದ್ರೆ ಸುಖ-ಸಮೃದ್ಧಿ ಪ್ರಾಪ್ತಿಯಾಗುತ್ತದೆ.

*ನಾಯಿಗೆ ಪ್ರತಿದಿನ ಆಹಾರ ಹಾಕುವುದ್ರಿಂದ ದುಷ್ಟರು ನಿಮ್ಮಿಂದ ದೂರವಾಗಲಿದ್ದಾರೆ. ಭಯ ದೂರವಾಗುತ್ತದೆ. ನಾಯಿಗೆ ಸಿಹಿ ರೊಟ್ಟಿಯನ್ನು ನೀಡಬೇಕು.

*ಕಾಗೆಗೆ ಆಹಾರ ನೀಡುವುದ್ರಿಂದ ಪಿತೃ ದೋಷ ಹಾಗೂ ಕಾಳ ಸರ್ಪ ದೋಷ ನಿವಾರಣೆಯಾಗಲಿದೆ. ಶನಿಯನ್ನು ಪ್ರಸನ್ನಗೊಳಿಸಲೂ ಕಾಗೆಗೆ ಆಹಾರ ನೀಡಬೇಕು.

*ಪಕ್ಷಿಗಳಿಗೆ ಆಹಾರ ನೀಡುವುದ್ರಿಂದ ವ್ಯಾಪಾರ-ನೌಕರಿಯಲ್ಲಿ ಲಾಭವಾಗಲಿದೆ. ಮನೆಯ ಖುಷಿ ಹೆಚ್ಚಾಗುತ್ತದೆ. ವ್ಯಕ್ತಿಯ ಸಮೃದ್ಧಿಯ ಬಾಗಿಲು ತೆರೆಯಲಿದೆ.

*ಸಮಾಜದಲ್ಲಿ ಗೌರವ ಪ್ರಾಪ್ತಿಗಾಗಿ ಪಾರಿವಾಳಕ್ಕೆ ಕಾಳುಗಳನ್ನು ನೀಡಬೇಕು. ಶುಕ್ರವಾರ ಕಾಳುಗಳನ್ನು ಖರೀದಿ ಮಾಡಿ ಶನಿವಾರದಿಂದ ಹಾಕಲು ಶುರು ಮಾಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮರಣದ ವೇಳೆ ಆತ್ಮ ಸುಲಭವಾಗಿ ದೇಹವನ್ನು ಬಿಟ್ಟು ಹೋಗಬೇಕೆಂದರೆ ಇದನ್ನು ಕೇಳಬೇಕಂತೆ.