Webdunia - Bharat's app for daily news and videos

Install App

ದೈವಿಕ ಕೃಪೆಯನ್ನು ಸಿದ್ಧಿಸಲು ಈ ಮಂತ್ರವನ್ನು ಪಠಿಸಿ

Krishnaveni K
ಮಂಗಳವಾರ, 12 ನವೆಂಬರ್ 2024 (08:40 IST)
ಬೆಂಗಳೂರು: ಜೀವನದಲ್ಲಿ ನಾವು ಏನೇ ಸಾಧನೆ ಮಾಡಬೇಕಾದರೂ ಭಗವಂತನ ಅನುಗ್ರಹ ತುಂಬಾ ಮುಖ್ಯ. ಜೀವನದಲ್ಲಿ ದೈವಿಕ ಕೃಪೆಯನ್ನು ಗಳಿಸಿ ಯಶಸ್ಸು ಪಡೆಯಲು ಈ ಮಂತ್ರವನ್ನು ಪ್ರತಿನಿತ್ಯ ಪಠಿಸಬೇಕು.

ಶಕ್ತಿ, ಧೈರ್ಯ, ಶಾಂತಿ, ಸಮೃದ್ಧಿ ಇವೆಲ್ಲವನ್ನೂ ಗಳಿಸಬೇಕೆಂದರೆ ಪ್ರತಿನಿತ್ಯ ಇಷ್ಟ ಸಿದ್ಧಿ ಮಂತ್ರ ಪಠಿಸಬೇಕು. ಇದನ್ನು ಪಠಿಸುವುದರಿಂದ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ಕಾಣುವಿರಿ. ನಿಮ್ಮ ಮನೋಸ್ಥೈರ್ಯ ಹೆಚ್ಚುವುದಲ್ಲದೆ ಆತ್ಮವಿಶ್ವಾಸವೂ ವೃದ್ಧಿಸುವುದು.

ಓಂ ಐಂ ಹ್ರೀಂ ಶ್ರೀಂ ಕ್ಲೀಂ ಸೌಃ ಇಷ್ಟಾರ್ಥ ಸಿದ್ಧಿಂ ಕುರು ಕುರು ಸ್ವಾಹಾ

ಈ ಮಂತ್ರವನ್ನು ಏಕಾಗ್ರತೆಯಿಂದ ಪಠಿಸಿದರೆ ಆರ್ಥಿಕ ಸಮೃದ್ಧಿ, ಮನಸ್ಸಿನ ನೆಮ್ಮದಿ ವೃದ್ಧಿಯಾಗುತ್ತದೆ. ಜೊತೆಗೆ ತೊಂದರೆಗಳಿಂದ ನಮ್ಮನ್ನು ದೂರ ಮಾಡುತ್ತದೆ. ಪ್ರತಿ ದಿನ ಸ್ನಾನ ಮಾಡಿ ಬೆಳಗಿನ ಜಾವ ಅಥವಾ ಸಂಜೆ ವೇಳೆ ಏಕಾಗ್ರತೆಯಿಂದ ಕುಳಿತು ಈ ಮಂತ್ರವನ್ನು 108 ಬಾರಿ ಜಪಿಸಿ.

ಇದರಿಂದ ನಿಮ್ಮ ಶರೀರ ಮತ್ತು ಮನಸ್ಸು ಎರಡೂ ಶುದ್ಧಿಯಾಗುತ್ತದೆ. ಪ್ರಾರ್ಥನೆ ಮಾಡುವಾಗ ಜಪಮಾಲೆ ಹಿಡಿದು ಜಪ ಮಾಡಿದರೆ ಇನ್ನೂ ಶ್ರೇಷ್ಠ. ಮಂತ್ರ ಉಚ್ಚಾರ ಸ್ಪಷ್ಟವಾಗಿರಬೇಕು. ಇದು ನಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Karnataka Rains: ಇಂದಿನ ಹವಾಮಾನ ವರದಿಯಂತೆ ಈ ಜಿಲ್ಲೆಯವರಿಗೆ ಎಚ್ಚರಿಕೆ ಅಗತ್ಯ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments