Select Your Language

Notifications

webdunia
webdunia
webdunia
webdunia

ಈ ಸಂಕೇತಗಳು ಎದುರಾದರೇ ನೀವು ಅದೃಷ್ಟವಂತರಾಗುತ್ತೀರಾ ಎಂದರ್ಥವಂತೆ

ಈ ಸಂಕೇತಗಳು ಎದುರಾದರೇ ನೀವು ಅದೃಷ್ಟವಂತರಾಗುತ್ತೀರಾ ಎಂದರ್ಥವಂತೆ
ಬೆಂಗಳೂರು , ಮಂಗಳವಾರ, 15 ಮೇ 2018 (06:04 IST)
ಬೆಂಗಳೂರು : ಸಾಮಾನ್ಯವಾಗಿ ಕೆಲವರಿಗೆ ಅದೃಷ್ಟವಿರುತ್ತದೆ ಎಂದೂ, ಒಳ್ಳೆಯ ಧನವಂತರಾಗುತ್ತಾರೆ ಎಂದೂ, ಒಳ್ಳೆಯ ಭವಿಷ್ಯತ್ ಇರುತ್ತದೆ ಎಂದು ಕೆಲವರು ನಂಬುತ್ತಾರೆ. ಇನ್ನು ಕೆಲವರು ಕಷ್ಟಪಟ್ಟು ಕೆಲಸ ಮಾಡಿದರೆ ನಾವು ಶ್ರೀಮಂತರಾಗುತ್ತವೆ ಎಂದೂ, ಅದೃಷ್ಟವಂತರಾಗುತ್ತವೆ ಎಂದು ಹೇಳುತ್ತಾರೆ. ಆದರೆ ಕೆಲವು ಸಂಕೇತಗಳು ನಿಮ್ಮಲ್ಲಿ ಕಾಣಿಸಿದರೂ, ನಿಮಗೆ ಎದುರಾದರೂ, ನೀವು ಅದೃಷ್ಟವಂತರಾಗುತ್ತೀರಾ ಎಂದು ವಿವಿಧ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಆ ಸಂಕೇತಗಳು ಯಾವುದು ಎಂಬುದು ಇಲ್ಲಿದೆ ನೋಡಿ.


*ಬೆಳಗ್ಗೆ ಎದ್ದ ತಕ್ಷಣ ತೆಂಗಿನಕಾಯಿ ಅಥವಾ ಬಿಳಿ ಜಲಪಕ್ಷಿ ಕಾಣಿಸಿಕೊಂಡರೆ, ಯಾವುದೇ ಒಂದು ಮಾರ್ಗದಿಂದ ಹಣ ಬರುತ್ತದೆ ಎಂಬುದರ ಸಂಕೇತ.

*ಬಿಳಿ ಅಥವಾ ಬಂಗಾರ ಬಣ್ಣದ ಹಾವು ಕನಸಿನಲ್ಲಿ ನೋಡಿದರೆ, ಶೀಘ್ರದಲ್ಲೇ ನೀವು ಶ್ರೀಮಂತರಾಗುತ್ತಿರಾ, ಹಣ ನಿಮ್ಮ ಬಳಿ ಬರುತ್ತದೆ ಎಂಬ ಸಂಕೇತವನ್ನು ಸೂಚಿಸುತ್ತದೆ.

*ಒಂದುವೇಳೆ ನೀವು ಎಲ್ಲಿಗಾದರೂ ಪ್ರಯಾಣಿಸುವಾಗ ಕೋತಿ, ನಾಯಿ, ಹಾವು, ಪಕ್ಷಿ, ಯಾವುದಾದರೂ ನಿಮ್ಮ ವಾಹನಕ್ಕೆ ಬಲಭಾಗದಲ್ಲಿ ಇದ್ದರೆ ಅದು ನೀವು ಶೀಘ್ರದಲ್ಲಿ ಧನವಂತರಾಗುತ್ತೀರ ಎಂಬ ಸಂಕೇತ.

*ಬೆಳಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಮೊದಲ ನೋಡುವ ಮೊದಲ ವಸ್ತು ಹಾಲು ಅಥವಾ ಮೊಸರು ಅಥವಾ ಹಾಲು ಉತ್ಪನ್ನಗಳಲ್ಲಿ ಯಾವುದಾದರೂ ಒಂದು ಆಗಿದ್ದರೆ ಹಣ ನಿಮ್ಮ ಹತ್ತಿರದಲ್ಲೇ ಇದೆ ಎಂದು ಸೂಚಿಸುತ್ತದೆ.

*ನೀವು ಹೊರಗಡೆ ಹೋಗುವಾಗ ಮದುವೆಯಾದ ಮಹಿಳೆ ಮುಖದಲ್ಲಿ ಸಿಂಧೂರದೊಂದಿಗೆ ಕಾಣಿಸಿಕೊಂಡರೆ ಶೀಘ್ರದಲ್ಲೇ ನಿಮಗೆ ದೊಡ್ಡ ಮೊತ್ತದಲ್ಲಿ ಹಣ ದೊರೆಯುತ್ತದೆ ಎಂದಾರ್ಥ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಾರದಲ್ಲಿ ಈ ಎರಡು ದಿನ ಬಳೆಗಳನ್ನು ಧರಿಸುವುದರಿಂದ ಏನಾಗುತ್ತದೆ ಗೊತ್ತಾ?