Publish Date: Sat, 04 Jan 2020 (06:46 IST)
Updated Date: Sat, 04 Jan 2020 (06:47 IST)
ಬೆಂಗಳೂರು : ಎಲ್ಲರಿಗೂ ಕೋಟ್ಯಾಧಿಪತಿಯಾಗಬೇಕೆಂಬ ಆಸೆ ಇರುತ್ತದೆ. ಆದಕಾರಣ ಅಂತವರು ತಾವು ಹುಟ್ಟಿದ ರಾಶಿಯ ಪ್ರಕಾರ ಪರಿಹಾರವನ್ನು ಮಾಡಬೇಕು. ಹಾಗಾದ್ರೆ ಕಟಕ ರಾಶಿಯಲ್ಲಿ ಹುಟ್ಟಿದವರು ಬೇಗ ಶ್ರೀಮಂತರಾಗಲು ಹೀಗೆ ಮಾಡಿ.
ಕಟಕರಾಶಿಯಲ್ಲಿ ಹುಟ್ಟಿದವರು ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿರುವ ಮನೆಯಲ್ಲಿ ವಾಸಿಸಿದರೆ ಲಕ್ಷ್ಮೀದೇವಿಯು ಸ್ಥಿರವಾಗಿ ನಿಮ್ಮ ಮನೆಯಲ್ಲಿ ನಿಲ್ಲುತ್ತಾಳೆ. ಸಿಂಹರಾಶಿಯಲ್ಲಿ ಹುಟ್ಟಿದವರು ಪಿತೃಗಳ ಪೂಜೆ ಮಾಡಬೇಕು. ಇವರು ಪಿತೃಗಳ ಫೋಟೋವನ್ನು ದಕ್ಷಿಣ ದಿಕ್ಕಿನಲ್ಲಿಟ್ಟು ಪ್ರತಿ ಅಮವಾಸ್ಯೆಯಂದು ಅಗರಬತ್ತಿ ಹಚ್ಚಿ ನೈವೇದ್ಯ ಸಮರ್ಪಣೆ ಮಾಡಬೇಕು. ಹೀಗೆ ಮಾಡಿದರೆ ನೀವು ಪಿತೃದೇವರ ಅನುಗ್ರಹದಿಂದ ಕೋಟ್ಯಾಧಿಪತಿಯಾಗುತ್ತೀರಿ.
ಹಾಗೇ ಈ ರಾಶಿಯವರು ಬೇವಿನ ಗಿಡ ಮತ್ತು ಬೆಟ್ಟದ ನೆಲ್ಲಿಕಾಯಿ ಗಿಡವನ್ನು ಬೆಳೆಸಿ ನೀರು ಹಾಕಿ ನಮಸ್ಕರಿಸಬೇಕು. ಅಲ್ಲದೇ ಇವರು ಹುಣ್ಣಿಮೆ ದಿನ ಒಂದು ಬಟ್ಟಲಿನಲ್ಲಿ ಹಾಲನ್ನು ತೆಗೆದುಕೊಂಡು ಅದಕ್ಕೆ ಸಕ್ಕರೆ ಮತ್ತು ಜೇನುತುಪ್ಪ ಮಿಕ್ಸ್ ಮಾಡಿ ಚಂದ್ರನಿಗೆ ಸಮರ್ಪಿಸಬೇಕು. ಹೀಗೆ ಮಾಡಿದರೆ ನಿಮಗೆ ಧನಪ್ರಾಪ್ತಿಯಾಗುತ್ತದೆ.