Webdunia - Bharat's app for daily news and videos

Install App

ಮನೆಯ ಮುಂದೆ ಈ ಗಿಡಗಳನ್ನು ಬೆಳೆಸಿದರೆ ನಮಗೆ ಕಷ್ಟಗಳು ಬರುವುದಿಲ್ಲವಂತೆ

Webdunia
ಗುರುವಾರ, 7 ಮಾರ್ಚ್ 2019 (06:56 IST)
ಬೆಂಗಳೂರು : ಹಿಂದೂ ಧರ್ಮದಲ್ಲಿ ಮರಗಿಡಗಳನ್ನು ಕೂಡ ದೇವರಂತೆ ಪೂಜಿಸಲಾಗುತ್ತದೆ. ಹಿಂದೂಗಳು ದೇವರಿಗೆ ನೀಡಿದಷ್ಟೇ ಮಹತ್ವವನ್ನು ಕೆಲವು ಗಿಡಮರಗಳಿಗೆ ಕೊಡುತ್ತಾರೆ. ಇಂತಹ ಮರಗಿಡಗಳನ್ನು ಮನೆಯ ಸುತ್ತಮುತ್ತ ನೆಡುವುದರಿಂದ ಯಾವ ಕಷ್ಟಗಳು ಬರುವುದಿಲ್ಲವಂತೆ.


ಬಾಳೆಗಿಡ : ಮನೆಯಲ್ಲಿ ಶುಭಕಾರ್ಯಗಳು ನಡೆಯದೆ ಇದ್ದಾಗ ಮನೆಯ ಹಿಂದೆ ಬಾಳೆಗಿಡವನ್ನು ನೆಡಬೇಕಂತೆ. ಇದರಿಂದ ಆ ಮನೆಯಲ್ಲಿ ಮದುವೆ ಕಾರ್ಯ ವಿಳಂಬವಾಗುತ್ತಿದ್ದರೆ ಅದು ಬೇಗ ನೆರವೇರುತ್ತದೆ.


ತುಳಸಿಗಿಡ : ಮನೆಯ ಮುಂದೆ ತುಳಸಿ ಗಿಡವನ್ನು ಬೆಳೆಸಿ ನಿತ್ಯ ಪೂಜೆ ಸಲ್ಲಿಸುವುದರಿಂದ ಮನೆಯೊಳಗೆ ನಕರಾತ್ಮಕ ಶಕ್ತಿಗಳು ಬರದಂತೆ ತಡೆಯುತ್ತದೆಯಂತೆ. ಹಾಗೇ ಆರೋಗ್ಯದ ದೃಷ್ಟಿಯಿಂದಲೂ ಇದು ಉತ್ತಮವಾಗಿದೆ.


ಶಮಿ ವೃಕ್ಷ: ಮನೆಯ ಮುಂದೆ ಶಮಿ ವೃಕ್ಷವನ್ನು ಬೆಳೆಸಿ ಆರಾಧಿಸುವುದರಿಂದ ಶನಿ ದೇವರ ಕೆಟ್ಟ ಪ್ರಭಾವದಿಂದ ಪಾರಾಗಬಹುದು.
ದಾಸವಾಳ : ದಾಸವಾಳ ಗಿಡವನ್ನು ಮನೆಯ ಮುಂದೆ ಬೆಳೆಸುವುದರಿಂದ ಮಂಗಳ ಗ್ರಹದ ಕೆಟ್ಟ ಪ್ರಭಾವವನ್ನು ತಡೆಯಬಹುದಂತೆ.


ದಾಳಿಂಬೆ  ಗಿಡ : ಈ ಗಿಡವನ್ನು ಮನೆಯ ಮುಂದೆ ಬೆಳೆಸುವುದರಿಂದ ರಾಹುಕೇತುವಿನ ಪ್ರಭಾವ ನಮ್ಮ ಮೇಲೆ ಬೀಳುವುದಿಲ್ಲವಂತೆ.


ಎಕ್ಕದ ಗಿಡ: ಶಿವ ಪಾರ್ವತಿಯ ಸ್ವರೂಪವಾದ ಎಕ್ಕೆ ಗಿಡವನ್ನು ಮನೆಯಮುಂದೆ ಬೆಳೆಸಿ ಆರಾಧಿಸಿದರೆ ಶಿವನ ಕೃಪೆಗೆ ಪಾತ್ರರಾಗುತ್ತೀರಾ. ಕೆಟ್ಟ ಶಕ್ತಿಗಳ ಪ್ರಭಾವ ಮನೆಯ ಮೇಲೆ ಬೀಳುವುದಿಲ್ಲವಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಇಂದು ಅಂದುಕೊಂಡ ಕೆಲಸವಾಗಬೇಕಾದರೆ ಆಂಜನೇಯನ ಈ ಮಂತ್ರ ಹೇಳಿ

ಗ್ರಹಗತಿಗಳ ಸಮಸ್ಯೆಯಿದ್ದಲ್ಲಿ ಈ ಸ್ತೋತ್ರವನ್ನು ತಪ್ಪದೇ ಓದಿ

ಆಂಜನೇಯ ಅಷ್ಟಕಂ ಕನ್ನಡದಲ್ಲಿ ಇಲ್ಲಿದೆ ಈ ದೋಷವಿರುವವರು ತಪ್ಪದೇ ಓದಿ

ಜೀವನದಲ್ಲಿ ಶಾಂತಿ, ಮೋಕ್ಷ ಪ್ರಾಪ್ತಿಯಾಗಲು ಆದಿಲಕ್ಷ್ಮಿಯ ಈ ಸ್ತೋತ್ರ ಓದಿ

ಲಕ್ಷ್ಮೀ ನರಸಿಂಹ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments