Select Your Language

Notifications

webdunia
webdunia
webdunia
webdunia

ಶನಿವಾರ ಬೆಳಿಗ್ಗೆ ಈ ವಸ್ತು ಕಣ್ಣಿಗೆ ಬಿದ್ದರೆ ಶನಿದೇವನ ಕೃಪೆ ನಿಮ್ಮ ಮೇಲಿದೆ ಎಂದರ್ಥವಂತೆ

ಶನಿವಾರ ಬೆಳಿಗ್ಗೆ ಈ ವಸ್ತು ಕಣ್ಣಿಗೆ ಬಿದ್ದರೆ ಶನಿದೇವನ ಕೃಪೆ ನಿಮ್ಮ ಮೇಲಿದೆ ಎಂದರ್ಥವಂತೆ
ಬೆಂಗಳೂರು , ಶುಕ್ರವಾರ, 17 ಮೇ 2019 (06:56 IST)
ಬೆಂಗಳೂರು : ವಾರದಲ್ಲಿ ಶನಿವಾರದಂದು ಶನೇಶ್ವರನನ್ನು ಪೂಜಿಸಲಾಗುತ್ತದೆ. ಕೋಪಿಷ್ಟನಾದ ಶನಿದೇವನನ್ನು ಪ್ರಸನ್ನಗೊಳಿಸಬೇಕೆಂದು ಎಲ್ಲರೂ ಪೂಜೆ, ವೃತಗಳನ್ನು ಮಾಡುತ್ತಾರೆ. ಆದರೆ ಶನಿವಾರದಂದು ಈ ಬೆಳಿಗ್ಗೆ ಕೆಲವೊಂದು ವಸ್ತುಗಳು ಕಣ್ಣಿಗೆ ಬಿದ್ರೆ ಶುಭಕರ. ಇದರಿಂದ ಶನಿದೇವನ ಕೃಪೆ ನಿಮ್ಮ ಮೇಲಿದೆ ಎಂದರ್ಥವಂತೆ.




ಕಾಗೆ ಶನಿದೇವನ ಪ್ರಿಯವಾದ ವಾಹನ.  ಬೆಳಿಗ್ಗೆ ಕಾಗೆ ಕಣ್ಣಿಗೆ ಬಿದ್ದರೆ ಶುಭ ಸಂಕೇತ ಎನ್ನಲಾಗಿದೆ.  ಯಾವ ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋಗ್ತಿದ್ದೀರೋ ಆ ಕೆಲಸ ಸುಲಭವಾಗಲಿದೆ ಎಂದರ್ಥ. ಆದ್ದರಿಂದ ಶನಿವಾರದಂದು ಕಾಗೆ ಕಂಡಾಗ ಅದಕ್ಕೆ ಆಹಾರ ನೀಡಿ.


ಬಡವರಿಗೆ, ನಿರ್ಗತಿಕರಿಗೆ ಭಿಕ್ಷೆ ನೀಡುವುದು ಪುಣ್ಯದ ಕೆಲಸ. ಅದರಲ್ಲೂ ಶನಿವಾರ ಬೆಳಿಗ್ಗೆ ಭಿಕ್ಷುಕ ನಿಮ್ಮ ಮನೆ ಮುಂದೆ ಬಂದರೆ ಸಾಧ್ಯವಾದಷ್ಟು ದಾನ ಮಾಡಿ. ಶನಿ ಕೃಪೆ ನಿಮ್ಮ ಮೇಲೆ ಬೀಳಲಿದೆ ಎಂದರ್ಥ. ಹಾಗೇ ಶನಿವಾರ ಬೆಳಿಗ್ಗೆ ಮನೆಯಿಂದ ಹೊರಗೆ ಹೋಗುವ ವೇಳೆ ಸ್ವಚ್ಛತೆ ಮಾಡುವ ವ್ಯಕ್ತಿ ಕೈನಲ್ಲಿ ಪೊರಕೆ ಹಿಡಿದು ನಿಂತಿದ್ದರೆ ಕೆಲಸ ಫಲ ನೀಡಲಿದೆ ಎಂದರ್ಥ. ನೀವು ಯಾವ ಕೆಲಸಕ್ಕೆ ಹೊರಟ್ಟಿದ್ದೀರೋ ಅದು ಯಶಸ್ವಿಯಾಗಲಿದೆ ಎಂಬುದರ ಸಂಕೇತ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 
 

Share this Story:

Follow Webdunia kannada

ಮುಂದಿನ ಸುದ್ದಿ

ನಕ್ಷತ್ರಗಳಿಗನುಗುಣವಾಗಿ ಯಾವ ಗಾಯತ್ರಿ ಮಂತ್ರ ಜಪಿಸಬೇಕು?