Publish Date: Fri, 21 Feb 2020 (06:27 IST)
Updated Date: Fri, 21 Feb 2020 (06:30 IST)
ಬೆಂಗಳೂರು : ಮಹಾಶಿವರಾತ್ರಿಯಂದು ಶಿವನನ್ನು ಭಕ್ತಿಯಿಂದ ಪೂಜಿಸಿದರೆ ಸಕಲ ಇಷ್ಟಾರ್ಥಗಳು ನೇರವೇರುತ್ತದೆ. ಆದಕಾರಣ ಶಿವರಾತ್ರಿಯಂದು ಶಿವನಿಗೆ ಪ್ರಿಯವಾದ ವಸ್ತುಗಳಿಂದ ಪೂಜಿಸಿ. ಆದರೆ ಆ ವೇಳೆ ಈ ನಾಲ್ಕು ವಸ್ತುಗಳನ್ನು ಅರ್ಪಿಸಬೇಡಿ.
ಸಾಮಾನ್ಯವಾಗಿ ಎಲ್ಲಾ ದೇವರ ಪೂಜೆಗೆ ಅರಶಿನ ಕುಂಕುಮ ಅರ್ಪಿಸುತ್ತೇವೆ. ಆದರೆ ಶಿವನ ಪೂಜೆ ಮಾಡುವಾಗ ಅರಶಿನ ಕುಂಕುಮವನ್ನು ಅರ್ಪಿಸಬೇಡಿ. ಹಾಗೇ ತುಳಸಿ ಪವಿತ್ರವಾದುದಾದರೂ ತುಳಸಿಯಿಂದ ಕೂಡ ಶಿವ ಪೂಜೆ ಮಾಡಬಾರದು. ಅಲ್ಲದೇ ಕೇದಿಗೆಯನ್ನು ಅಪ್ಪಿತಪ್ಪಿಯೂ ಶಿವನಿಗೆ ಅರ್ಪಿಸಬೇಡಿ. ಇದರಿಂದ ಶಿವನ ಕೋಪಕ್ಕೆ ಗುರಿಯಾಗುತ್ತೀರಿ.