Select Your Language

Notifications

webdunia
webdunia
webdunia
webdunia

ಕಷ್ಟಗಳು ನಿವಾರಣೆಯಾಗಲು ಅರಳಿ ಎಲೆಯಿಂದ ಹೀಗೆ ಮಾಡಿ

ಕಷ್ಟಗಳು ನಿವಾರಣೆಯಾಗಲು  ಅರಳಿ ಎಲೆಯಿಂದ ಹೀಗೆ ಮಾಡಿ
ಬೆಂಗಳೂರು , ಬುಧವಾರ, 5 ಫೆಬ್ರವರಿ 2020 (07:04 IST)
ಬೆಂಗಳೂರು : ಮನುಷ್ಯರೆಂದ ಮೇಲೆ ಕಷ್ಟಗಳು ಬರುವುದು ಸಹಜ. ಆದರೆ ಕೆಲವರು ಈ ಕಷ್ಟಗಳನ್ನು ಎದುರಿಸಿ ನಿಂತರೆ ಇನ್ನು ಕೆಲವರು ಅದನ್ನು ಎದುರಿಸಲಾಗದೆ ನರಳಾಡುತ್ತಾರೆ. ಅಂತವರು ಅಮವಾಸ್ಯೆ ನಂತರ ಬರುವ ಮೊದಲನೇ ಶನಿವಾರದಂದು ಅರಳಿಮರವಿರುವ ದೇವಸ್ಥಾನಕ್ಕೆ ಹೋಗಿ ಹೀಗೆ ಮಾಡಿದರೆ ಕಷ್ಟಗಳು ದೂರವಾಗುತ್ತವೆ.

ಅಮವಾಸ್ಯೆ ನಂತರ ಬರುವ ಮೊದಲನೇ ಶನಿವಾರದಂದು ಬೆಳಗಿನ ಜಾವ ಅರಳಿಮರವಿರುವ ದೇವಸ್ಥಾನಕ್ಕೆ ಹೋಗಿ ಅರಳಿಮರದ ಕೆಳಗಡೆ ಬಿದ್ದಿರುವ ಎಲೆಯನ್ನು ತೆಗೆದುಕೊಂಡು ಬಂದು ಸ್ವಚ್ಚ ಮಾಡಿ ಎಲೆಯ ಮಧ್ಯಭಾಗದಲ್ಲಿ ಅರಶಿನದಿಂದ ಸ್ವಸ್ತಿಕ್ ಗುರುತನ್ನು ಬರೆಯಬೇಕು. ಅದನ್ನು ದೇವರ ಕೋಣೆಯಲ್ಲಿರುವ ದೇವರ ಫೋಟೊದ ಮುಂದೆ ಇಟ್ಟು ನಿಮ್ಮ ಕಷ್ಟಗಳನ್ನು ನಿವಾರಿಸುವಂತೆ ಬೇಡಿಕೊಳ್ಳಬೇಕು. 9 ಶನಿವಾರದಂದು ಹೀಗೆ ಮಾಡಬೇಕು.

ಹಾಗೇ 8 ಶನಿವಾರದ ತನಕ ಒಂದು ಎಲೆಯಿಂದ ಮಾಡಿದರೆ 9 ನೇ ಶನಿವಾರದಂದು 3,5,7,9 ಎಲೆಗಳಿಂದ ಪರಿಹಾರವನ್ನು ಮಾಡಬೇಕು. ಹಾಗೇ ಪ್ರತಿವಾರದ ಎಲೆಯನ್ನು ಹರಿಯುವ ನೀರಿನಲ್ಲಿ ಬಿಡಬೇಕು. ಹೀಗೆ ಮಾಡಿದರೆ ನಿಮ್ಮ ಕಷ್ಟಗಳು ದೂರವಾಗುತ್ತವೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ