ಸಂಕಷ್ಟ ಚತುರ್ಥಿ ದಿನ ಬಿಳಿ ಎಕ್ಕೆ ಗಿಡಕ್ಕೆ ಹೀಗೆ ಮಾಡಿದರೆ ಸಕಲ ಕಷ್ಟಗಳು ಪರಿಹಾರವಾಗುವುದು

Webdunia
ಭಾನುವಾರ, 16 ಜೂನ್ 2019 (08:49 IST)
ಬೆಂಗಳೂರು : ನಮ್ಮ ಹಿಂದೂ ಪುರಾಣದಲ್ಲಿ ಬಿಳಿ ಎಕ್ಕದ ಗಿಡಕ್ಕೆ ಬಾರೀ ಮಹತ್ವವಿದೆ. ಇದು ಹೆಚ್ಚು ಔಷಧಿಯ ಗುಣಗಳನ್ನು ಹೊಂದಿರುವುದ್ದಲ್ಲದೇ ದೇವತಾ ಗುಣಗಳನ್ನು ಹೊಂದಿದೆ. ಈ ಗಿಡವನ್ನು ಸಂಕಲ್ಪ ಮಾಡಿ ಪೂಜಿಸುವುದರಿಂದ ಅನೇಕ ಸಮಸ್ಯೆಗಳು ಪರಿಹಾರವಾಗಿ ಶುಭಫಲ ದೊರಕುತ್ತದೆಯಂತೆ.




ಹೌದು. ಈ ಬಿಳಿ ಎಕ್ಕದ ಗಿಡ ಗಣಪತಿಯ ವಾಸಸ್ಥಳ ಎಂದು ಹೇಳುತ್ತಾರೆ. ಆದ್ದರಿಂದ ಈ ಬಿಳಿಎಕ್ಕ ಗಿಡವನ್ನು ಈ ರೀತಿ ಪೂಜೆ ಮಾಡಿದರೆ ಅವರ ಎಲ್ಲಾ ಸಂಕಷ್ಟ ಕಳೆಯುತ್ತದೆ ಎಂದು ಹೇಳುತ್ತಾರೆ. ಹಣಕಾಸಿನ  ಸಮಸ್ಯೆ, ಸಾಲಬಾಧೆ, ಅನಾರೋಗ್ಯದ ಸಮಸ್ಯೆ, ಪತಿ ಪತ್ನಿ ಕಲಹ, ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಸಾಕ್ಷಾತ್ ಗಣಪತಿ ತಿಳಿಸಿರುವ ಈ ಪರಿಹಾರವನ್ನು ಮಾಡಿ.


ಬಿಳಿ ಎಕ್ಕ ಗಿಡವನ್ನು ಸೂರ್ಯೋದಯಕ್ಕೂ ಮುನ್ನ 3,5,9, 21 ದಿನ ಈ ರೀತಿ ಪೂಜಿಸಿದರೆ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ.ಈ ಪೂಜೆಯನ್ನು ಸಂಕಷ್ಟಿ ದಿನವೇ ಪ್ರಾರಂಭ ಮಾಡಬೇಕು. ಬೆಳಿಗ್ಗೆ 4-6 ಗಂಟೆಯಳಗೆ ಎದ್ದು, ಸ್ನಾನ ಮಾಡಿ ಅರಶಿನ, ಕುಂಕುಮ,ಅಕ್ಷತೆ, ಹಳದಿ ಬಣ್ಣದ ಹೂವು ಹಾಗೂ ಒಂದು ತಂಬಿಗೆ ನೀರನ್ನು ತೆಗೆದುಕೊಂಡು ಬಿಳಿ ಎಕ್ಕ ಗಿಡದ ಬಳಿ ಹೋಗಿ ಮೊದಲಿಗೆ ನೀರನ್ನು ಅದರ ಮೇಲೆ ಎರೆದು, ಅರಶಿನ ಕುಂಕುಮ ಹಚ್ಚಿ ಹೂವನ್ನು ಮುಡಿಸಬೇಕು, ನಂತರ ಸ್ವಲ್ಪ ಅಕ್ಷತೆ ಕಾಳನ್ನು ಗಿಡದ ಬುಡಕ್ಕೆ ಹಾಕಬೇಕು. ನಂತರ ಸಮಸ್ಯೆಗಳನ್ನು ಪರಿಹರಿಸುವಂತೆ ಸಂಕಲ್ಪ ಮಾಡಬೇಕು. ಬಳಿಕ  ಉಳಿದ ಅಕ್ಷತೆಯನ್ನು ಮನೆಗೆ ತಂದು ಬಟ್ಟೆಯಲ್ಲಿ ಕಟ್ಟಿ ದೇವರ ಮನೆಯಲ್ಲಿಟ್ಟು ಪ್ರತಿದಿನ ಪೂಜೆ ಮಾಡಬೇಕು. ಹೀಗೆ ಮಾಡಿದರೆ ಸಕಲ ಸಂಕಷ್ಟಗಳು ಪರಿಹಾರವಾಗುತ್ತದೆಯಂತೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸರಸ್ವತಿ ಅಷ್ಟೋತ್ತರ ಶತನಾಮಾವಳಿ

ಮಂಗಳಗೌರಿ ಅಷ್ಟೋತ್ತರ ಶತನಾಮಾವಳಿ ಸ್ತೋತ್ರ

ಸೋಮವಾರ ಶಿವ ಪಂಚಾಕ್ಷರಿ ಸ್ತೋತ್ರ ಪಠಿಸಿ

ಶನಿ ಅಮಾವಾಸ್ಯೆ: ಮಹತ್ವ, ಆಚರಣೆ ಮತ್ತು ಶನಿದೇವನ ಕೃಪೆಗೆ ಸರಳ ಪರಿಹಾರಗಳು

ವಿವಾಹಾದಿ, ಸಂತಾನ ಸಮಸ್ಯೆಗಳ ನಿವಾರಣೆಗೆ ಓದಬೇಕಾದ ಸುಬ್ರಹ್ಮಣ್ಯ ಸ್ತೋತ್ರ

ಮುಂದಿನ ಸುದ್ದಿ
Show comments