Webdunia - Bharat's app for daily news and videos

Install App

ಮಂಗಳವಾರ ದಿನ ಆಂಜನೇಯನಿಗೆ ತಪ್ಪದೇ ಹೀಗೆ ಪೂಜೆ ಮಾಡಿ

Krishnaveni K
ಮಂಗಳವಾರ, 18 ಜೂನ್ 2024 (08:58 IST)
ಬೆಂಗಳೂರು: ಮಂಗಳವಾರ ಬಂತೆಂದರೆ ಆಂಜನೇಯನ ವಾರ ಎಂದೇ ಅರ್ಥ. ಆಂಜನೇಯನಿಗೆ ಈ ದಿನ ಪೂಜೆ ಮಾಡಿದರೆ ನಮ್ಮ ಕಷ್ಟಗಳೆಲ್ಲಾ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ.

ಮಂಗಳವಾರ ಆಂಜನೇಯನ ಪೂಜೆ ಮಾಡಲು ಉಪವಾಸವಿದ್ದು ವ್ರತ ಕೈಗೊಳ್ಳಬೇಕು. ಜೊತೆಗೆ ಓಂ ಹನುಮತೇ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸಿ. ಹನುಮಂತಹ ಸಂಕಟ ಹರ, ಭಯ ನಾಶ ಮಾಡುವವನು. ಹೀಗಾಗಿ ಈ ದಿನ ಹನುಮಂತನ ಪೂಜೆ ಮಾಡುವುದು ಉತ್ತಮ.

ಆಂಜನೇಯನಿಗೆ ಪ್ರಿಯವಾದುದು ಎಂದರೆ ವೀಳ್ಯದ ಎಲೆಯ ಹಾರ. ಮಂಗಳವಾರದಂದು ಯಾವುದಾದರೂ ಹನುಮಂತನ ಗುಡಿಗೆ ಹೋಗಿ ವೀಳ್ಯದ ಹಾರವನ್ನು ಕಾಣಿಕೆಯಾಗಿ ನೀಡಿದರೆ ಉದ್ಯೋಗ, ಶನಿ ವಕ್ರದೃಷ್ಟಿ, ವಿದ್ಯಾಭ್ಯಾಸ, ಹಣಕಾಸಿನ ತೊಂದರೆಗಳು ಇತ್ಯಾದಿ ಸಂಕಷ್ಟಗಳಿಂದ ಪರಿಹಾರ ಸಿಗುವುದು.

ಹನುಮಂತನನ್ನು ಈ ರೀತಿಯಾಗಿ ಪೂಜಿಸಲು ಮಂಗಳವಾರ ಮತ್ತು ಶನಿವಾರ ಸೂಕ್ತವಾದ ದಿನಗಳು. ತ್ರೇತಾಯುಗದಲ್ಲಿ ಸ್ವತಃ ಸೀತಾಮಾತೆ ತನ್ನನ್ನು ನೋಡಲು ಬಂದ ಹನುಮಂತನಿಗೆ ವೀಳ್ಯದ ಎಲೆಯನ್ನು ಹಾಕಿ ಸ್ವಾಗತಿಸಿದಳಂತೆ. ಸ್ವತಃ ಆ ತಾಯಿಯೇ ಹಾಕಿದ ಹಾರ ಹನುಮಂತನಿಗೆ ಇಂದು ಪ್ರೀತ್ಯರ್ಥವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಇಂದು ಮಹಾದೇವಷ್ಟಕಂ ಸ್ತೋತ್ರಂ ಓದಿ

ಸಾಡೇ ಸಾತಿ ಶನಿ ಇರುವವರು ಇಂದು ತಪ್ಪದೇ ಈ ಮಂತ್ರ ಜಪಿಸಿ

ಲಕ್ಷ್ಮೀ ಕೃಪಾಕಟಾಕ್ಷಕ್ಕಾಗಿ ಇಂದು ತಪ್ಪದೇ ಈ ಮಂತ್ರವನ್ನು ಜಪಿಸಿ

ಮಹಾವಿಷ್ಣುವಿನ ಕೃಪೆಗಾಗಿ ಇಂದು ತಪ್ಪದೇ ಈ ಸ್ತೋತ್ರವನ್ನು ಪಠಿಸಿ

ವಿದ್ಯಾರ್ಥಿಗಳು ಯಶಸ್ಸಿಗಾಗಿ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments