ಮಂಗಳವಾರ ದಿನ ಆಂಜನೇಯನಿಗೆ ತಪ್ಪದೇ ಹೀಗೆ ಪೂಜೆ ಮಾಡಿ

Krishnaveni K
ಮಂಗಳವಾರ, 18 ಜೂನ್ 2024 (08:58 IST)
ಬೆಂಗಳೂರು: ಮಂಗಳವಾರ ಬಂತೆಂದರೆ ಆಂಜನೇಯನ ವಾರ ಎಂದೇ ಅರ್ಥ. ಆಂಜನೇಯನಿಗೆ ಈ ದಿನ ಪೂಜೆ ಮಾಡಿದರೆ ನಮ್ಮ ಕಷ್ಟಗಳೆಲ್ಲಾ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ.

ಮಂಗಳವಾರ ಆಂಜನೇಯನ ಪೂಜೆ ಮಾಡಲು ಉಪವಾಸವಿದ್ದು ವ್ರತ ಕೈಗೊಳ್ಳಬೇಕು. ಜೊತೆಗೆ ಓಂ ಹನುಮತೇ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸಿ. ಹನುಮಂತಹ ಸಂಕಟ ಹರ, ಭಯ ನಾಶ ಮಾಡುವವನು. ಹೀಗಾಗಿ ಈ ದಿನ ಹನುಮಂತನ ಪೂಜೆ ಮಾಡುವುದು ಉತ್ತಮ.

ಆಂಜನೇಯನಿಗೆ ಪ್ರಿಯವಾದುದು ಎಂದರೆ ವೀಳ್ಯದ ಎಲೆಯ ಹಾರ. ಮಂಗಳವಾರದಂದು ಯಾವುದಾದರೂ ಹನುಮಂತನ ಗುಡಿಗೆ ಹೋಗಿ ವೀಳ್ಯದ ಹಾರವನ್ನು ಕಾಣಿಕೆಯಾಗಿ ನೀಡಿದರೆ ಉದ್ಯೋಗ, ಶನಿ ವಕ್ರದೃಷ್ಟಿ, ವಿದ್ಯಾಭ್ಯಾಸ, ಹಣಕಾಸಿನ ತೊಂದರೆಗಳು ಇತ್ಯಾದಿ ಸಂಕಷ್ಟಗಳಿಂದ ಪರಿಹಾರ ಸಿಗುವುದು.

ಹನುಮಂತನನ್ನು ಈ ರೀತಿಯಾಗಿ ಪೂಜಿಸಲು ಮಂಗಳವಾರ ಮತ್ತು ಶನಿವಾರ ಸೂಕ್ತವಾದ ದಿನಗಳು. ತ್ರೇತಾಯುಗದಲ್ಲಿ ಸ್ವತಃ ಸೀತಾಮಾತೆ ತನ್ನನ್ನು ನೋಡಲು ಬಂದ ಹನುಮಂತನಿಗೆ ವೀಳ್ಯದ ಎಲೆಯನ್ನು ಹಾಕಿ ಸ್ವಾಗತಿಸಿದಳಂತೆ. ಸ್ವತಃ ಆ ತಾಯಿಯೇ ಹಾಕಿದ ಹಾರ ಹನುಮಂತನಿಗೆ ಇಂದು ಪ್ರೀತ್ಯರ್ಥವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ದಿನ ಈ ಕೆಲಸಗಳನ್ನು ತಪ್ಪಿಯೂ ಮಾಡಬೇಡಿ

ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರಂ ತಪ್ಪದೇ ಓದಿ

ದೀಪಾವಳಿ ಬಳಿಕ ಈ ಐದು ರಾಶಿಯವರಿಗೆ ಸಂಕಷ್ಟ ತಪ್ಪಿದ್ದಲ್ಲ

ಗ್ರಹಗತಿಗಳ ದೋಷ ನಿವಾರಣೆಗೆ ನವಗ್ರಹ ಕವಚಂ ಸ್ತೋತ್ರ ಓದಿ

ದೀಪಾವಳಿ ಸಂದರ್ಭದಲ್ಲಿ ಯಾವ ರಾಶಿಯವರು ಯಾವ ಲಕ್ಷ್ಮೀ ಮಂತ್ರ ಹೇಳಬೇಕು ನೋಡಿ

ಮುಂದಿನ ಸುದ್ದಿ
Show comments