Publish Date: Sun, 19 Jan 2025 (10:21 IST)
Updated Date: Sun, 19 Jan 2025 (10:25 IST)
ಸೂರ್ಯೋದಯ ಹಾಗೂ ಸೂರ್ಯಸ್ತದ ಸಮಯದಲ್ಲಿ ದೇವರಿಗೆ ದೀಪ ಹಚ್ಚುವುದರಿಂದ ಮನೆಗೆ ದಾರಿದ್ರ್ಯ ಪ್ರವೇಶಿಸುವುದಿಲ್ಲ. ಈ ಸಮಯದಲ್ಲಿ ಶ್ರದ್ಧೆ ಹಾಗೂ ಭಕ್ತಿಯಿಂದ ದೇವರದಲ್ಲಿ ಬೇಡಿಕೊಂಡರೆ ನಮ್ಮ ಬೇಡಿಕೆಗಳು ನೆರವೇರುತ್ತದೆ ಎಂಬುದು ನಂಬಿಕೆ.
ದೇವರಿಗೆ ದೀಪ ಹಚ್ಚುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮುಂಜಾನೆ 5ರಿಂದ 10ರ ವರೆಗೆ ಹಾಗೂ ಸಂಜೆ 5ರಿಂದ 7ರ ವರೆಗೆ ದೀಪ ಬೆಳಗುವುದರಿಂದ ಶುಭವಾಗುತ್ತದೆ. ಮನೆಯಲ್ಲಿ ನೆಮ್ಮದಿ ಮೂಡಿ, ಸಕಲ ಐಶ್ವರ್ಯ ನೆಲೆಯೂರುತ್ತದೆ.
ದೀಪ ಹಚ್ಚುವ ವೇಳೆ ಶುಭಂ ಕರೋತಿ ಕಲ್ಯಾಣಂ ಮಂತ್ರವನ್ನು ಪಠಿಸಿದರೆ ಆರೋಗ್ಯ ಮತ್ತು ಧನಸಂಪತ್ತನ್ನು ಕೊಡುತ್ತದೆ. ಅದಲ್ಲ ದ್ವೇಷ ಬುದ್ಧಿಯನ್ನು ನಾಶ ಮಾಡುತ್ತದೆ. ಆದುದರಿಂದ ಹೇ, ದೀಪಜ್ಯೋತಿಯೇ, ನಿನಗೆ ನಮಸ್ಕಾರ ಎಂದು ಈ ಮಂತ್ರ ಹೇಳುತ್ತದೆ.
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಾಂ |
ಶತ್ರುಬುದ್ಧಿವಿನಾಶಾಯ ದೀಪಜ್ಯೋತಿರ್ನಮೋಸ್ತು ತೇ ||
ಶುಭಂ ಕರೋತಿ ಕಲ್ಯಾಣಂ-ಆರೋಗ್ಯಂ ಧನಸಂಪಾದ |
ಶತಬುದ್ಧಿ ವಿನಾಶಾಯ ದೀಪಜ್ಯೋತಿ-ನಮೋ'ಸ್ತುತೇ ||
ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನಾರ್ದನಃ ।
ದೀಪೋ ಹರತು ಮೇ ಪಾಪಂ ದೀಪಜ್ಯೋತಿರ್ನಮೋ ⁇ ಸ್ತುತೇ ॥
ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನಾರ್ದನಃ |
ದೀಪೋ ಹರತು ಮೇ ಪಾಪಂ ದೀಪಜ್ಯೋತಿ-ನಮೋ'ಸ್ತುತೇ ||