[ಕರಾವಳಿಯ ಅದ್ಭುತ ಕಲೆ ಯಕ್ಷಗಾನ ಕಂಡ ಮೇರು ಕಲಾವಿದ ದಿವಂಗತ ಕುರಿಯ ವಿಠಲ ಶಾಸ್ತ್ರಿಯವರ ಜನ್ಮಶತಮಾನ ವರ್ಷ (ಜನನ: 08-09-1912) ಹಿನ್ನೆಲೆಯಲ್ಲಿ ಅವರ ಪ.ಗೋ. ನಿರೂಪಿಸಿದ ಶಾಸ್ತ್ರಿಗಳ ಆತ್ಮ ಕಥನ "ಬಣ್ಣದ ಬದುಕು" ಪ್ರತೀ ಗುರುವಾರ ವೆಬ್ದುನಿಯಾದಲ್ಲಿ ಸರಣಿ ರೂಪದಲ್ಲಿ ಪ್ರಕಟವಾಗುತ್ತಿದೆ.- ಸಂ]
[ಕಳೆದ ವಾರದಿಂದ ಮುಂದುವರಿದುದು]
'
ಧರ್ಮಸ್ಥಳ ಮೇಳದ ಆಡಳಿತವೆಂದರೆ ಅಷ್ಟು ಸುಲಭವಾಗಿ ತೀರ್ಮಾನಿಸುವ ವಿಷಯವಲ್ಲ. ಸುಲಭದ ಮಾತೂ ಅಲ್ಲ. ತುಂಬಾ ವಿಚಾರ ಮಾಡಿ ನಿರ್ಧರಿಸಬೇಕಾದುದು' ಎಂದು ಸಿ. ಎಸ್. ಶಾಸ್ತ್ರಿಗಳು ನನ್ನ ಯೋಜನೆಯ ಬಗ್ಗೆ ತಿಳಿಸಿದರು.ಒಂದೆರಡು ದಿನ ಕಳೆದು ಕಾಣಸಿಕ್ಕಿದ ಶ್ರೀ ರಾಮಕೃಷ್ಣಯ್ಯನವರಲ್ಲೂ ಅದೇ ಆಸೆಯನ್ನು ಪ್ರಸ್ತಾಪಿಸಿದಾಗ ಅವರು-"
ಯಾವುದಕ್ಕೂ ನೀವು ಸ್ಥಳಕ್ಕೆ ಬನ್ನಿ. ಅಲ್ಲಿ ಮಾತನಾಡಿ ನೋಡೋಣ" ಎಂದರು.ಆ ಮಾತಿಗೆ ಅಣ್ಣನವರ ಒಪ್ಪಿಗೆಯೂ ಸಿಕ್ಕಿತು. ಹಾಗೆ ನಾವಿಬ್ಬರೂ ಧರ್ಮಸ್ಥಳಕ್ಕೆ ಹೋಗಿ ಶ್ರೀಮಾನ್ ಹೆಗ್ಗಡೆಯವರನ್ನು ಭೇಟಿಯಾದೆವು.ನನ್ನ ಆಸೆಯನ್ನು ಶ್ರೀ ರಾಮಕೃಷ್ಣಯ್ಯನವರೇ ಶ್ರೀ ಹೆಗ್ಗಡೆಯವರೊಂದಿಗೆ ಅರುಹಿದರು.ಅವರದು ಶೀಘ್ರ ನಿರ್ಧಾರದ ಕ್ರಮವೋ ಏನೋ ಎಂದು ನಾನು ಭಾವಿಸುವ ಹಾಗೆ- "
ಆಗಲಿ ಸಂತೋಷ" ಎಂದು ಅವರ ಅಪ್ಪಣೆ ಬಂದಿತು.ಮೇಳಕ್ಕೆ ಬೇಕಾದ ವೇಷಭೂಷಣಗಳು ಯಾವುವೆಲ್ಲ ಅಗತ್ಯವಿದೆ ಎಂದು ಒಂದು ಪಟ್ಟಿ ತಯಾರಿಸಿ ಕೊಡಲೂ ಹೇಳಿದರು.ಅವರಿಂದ ವಾಗ್ದಾನ ಪಡೆದು ಊರಿಗೆ ಬರುವಾಗಲೇ ಧರ್ಮಸ್ಥಳ ಮೇಳವನ್ನು ನಾನು ವಹಿಸಿಕೊಳ್ಳಲಿರುವ ಸುದ್ದಿ ಗಾಳಿಯಲ್ಲಿ ಹರಡತೊಡಗಿತ್ತು.ಹೊಸಬನಾದ ನನ್ನ ಕೈಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಆಡಳಿತವನ್ನು ವಹಿಸಿಕೊಟ್ಟರೆ ಶ್ರೀ ಕ್ಷೇತ್ರದ ಘನತೆಗೆ ಕುಂದು ಬರಬಹುದು ಎಂಬ ಮಾತನ್ನು ಶ್ರೀ ಹೆಗ್ಗಡೆಯವರಿಗೆ ತಲುಪಿಸಲೂ ಕೆಲವು ಮಂದಿ ಆಸಕ್ತರು ಮಾಡಿದ ಪ್ರಯತ್ನಗಳ ವಿಚಾರ ಇಲ್ಲಿ ಅನಗತ್ಯ. ಶ್ರೀ ಹೆಗ್ಗಡೆಯವರು ಆ ಮಾತುಗಳಿಗೆ ಬೆಲೆ ಕೊಡಲಿಲ್ಲ ಎಂಬುದೂ, ನಾನಾಗಿ ಬಣ್ಣದ ಬದುಕನ್ನು 21 ವರ್ಷಗಳ ಅನಂತರ ತೊರೆಯುವಂತಾಗುವವರೆಗೂ ಶ್ರೀ ಧರ್ಮಸ್ಥಳ ಮೇಳವನ್ನೇ ನಾನು ನಡೆಸುತ್ತಾ ಬಂದುದೂ, ಯಕ್ಷಗಾನ ಚರಿತ್ರೆಯ ಪುಟಗಳಲ್ಲಿ ಸೇರಿಹೋಗಿವೆ.ನವೋದಯ ಧರ್ಮಸ್ಥಳ ಮೇಳ ಶತಮಾನಗಳಷ್ಟು ಹಳೆಯದಾದರೂ, ಹೊಸ ಜನರು, ಹೊಸದಾದ ವೇಷಭೂಷಣಗಳು ಇವೆಲ್ಲವುಗಳಿಂದಾಗಿ ಪುನರುದಿತ ಯಕ್ಷಗಾನ ಮಂಡಳಿಯೇ ಆಗಬೇಕು ಎಂದಾಯಿತು.ಭಾಗವತರು, ವೇಷಧಾರಿಗಳಿಂದ ಮೊದಲ್ಗೊಂಡು ಪೆಟ್ಟಿಗೆ ಹೊರುವ ಹುಡುಗರವರೆಗೂ ಎಲ್ಲರನ್ನೂ ಒಬ್ಬೊಬ್ಬರಾಗಿ ಕಂಡು ಮಾತನಾಡಿ, ಅವರ ನಿರ್ಣಯಗಳನ್ನು ತಿಳಿದುಕೊಂಡು ಬಂದೆ. ಒಪ್ಪಿಸಿಕೊಂಡೆ.ನನ್ನ ಮಟ್ಟಿಗೆ ಎಲ್ಲರೂ ಹೊಸಬರೇ. ಹಳಬನಾಗಿ ಉಳಿದವನು ಶ್ರೀ ಕ್ಷೇತ್ರದಿಂದ ಮೇಳದ ತಿರುಗಾಟಕ್ಕೆ ಬರುವ ಆ ಮಹಾಗಣಪತಿಯೊಬ್ಬನೇ.ಆಡುಂಬೊಲದ ಅಗತ್ಯ.....