Select Your Language

Notifications

webdunia
webdunia
webdunia
webdunia

ಶಿವ ಜಡೆಯಿಂದ ಮಧುಸುರಿಸಿದ ಮಧುರೈ

ಶಿವ ಜಡೆಯಿಂದ ಮಧುಸುರಿಸಿದ ಮಧುರೈ

ಇಳಯರಾಜ

PTI
ಭಾರತದಲ್ಲಿ ದಕ್ಷಿಣದ ಆಥೆನ್ಸ್‌ ಎಂದು ಗುರುತಿಸಲ್ಪಡುವ ತಮಿಳ್ನಾಡಿನ ಪವಿತ್ರ ಹಾಗೂ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಮಧುರೈ ಪ್ರಸಿದ್ಧವಾಗಿದೆ.

ಮಧುರೆಯ ಕುರಿತು ಅನೇಕ ಐತಿಹ್ಯಗಳಿವೆ. ಇವುಗಳಲ್ಲೊಂದು ಇಂತಿದೆ. ಈ ಪ್ರದೇಶದಲ್ಲಿ ಬಹಳ ಹಿಂದೆ ಕದಂಬ ವನವಿತ್ತು. ಒಂದುದಿನ ಧನಂಜಯ ಎಂಬ ರೈತ ಅಲ್ಲೆ ಹಾದು ಹೋಗುತ್ತಿದ್ದಾಗ ದೇವೆಂದ್ರನು ಸ್ವಯಂಭೂ ಲಿಂಗವೊಂದನ್ನು ಪೂಜಿಸುವುದವನ್ನು ಕಂಡನು. ರೈತನು ಈ ಮಾಹಿತಿಯನ್ನು ನಾಡಿನ ರಾಜ ಕುಲಶೇಖರ ಪಾಂಡ್ಯನಿಗೆ ತಿಳಿಸಿದನು.

ಕುಲಶೇಖರ ಪಾಂಡ್ಯನು ಸ್ವಯಂಭೂ ಶಿವಲಿಂಗವಿದ್ದ ಪ್ರದೇಶವನ್ನು ಶುಚಿಗೊಳಿಸಿ ಅಲ್ಲೊಂದು ದೇವಸ್ಥಾನವನ್ನು ನಿರ್ಮಿಸಿದನು. ಒಂದು ಸಲ ಸ್ವತಹ ಪರಮಶಿವನೇ ಈ ದೇವಸ್ಥಾನವನ್ನು ವೀಕ್ಷಿಸಿ ತನ್ನ ಜಟಾಜೂಟವನ್ನು ಬಿಡಿಸಿ ಜೇನಿನ ಮಳೆಗರೆದನು. ಇದರಿಂದಾಗಿ ದೇವಸ್ಥಾನಕ್ಕೆ ಮಧುರೈ ಎಂಬ ಹೆಸರಾಯಿತು. ಈ ದೇವಸ್ಥಾನವನ್ನು ಕೇಂದ್ರವಾಗಿರಿಸಿ ಬಳಿಕ ನಗರೀಕರಣವಾಯಿತು.

ಮುಧುರೈಗೆ ತನ್ನದೇ ಆದ ವೈಶಿಷ್ಟ್ಯಗಳಿವೆ. ಶಿವನ ವಿಳಯಾಟ್ಟಂ (ವಿಸ್ಮಯಗಳು)ಗಳನ್ನು 64 ವಿಧಾನಗಳಲ್ಲಿ ಇಲ್ಲಿ ಚಿತ್ರಿಸಲಾಗಿದೆ. ಧಾರ್ಮಿಕವಾಗಿ , ಆಧ್ಯಾತ್ಮಿಕವಾಗಿ ವಿಶಿಷ್ಟವಾಗಿರುವಂತೆಯೇ ಈ ದೇವಸ್ಥಾನ ಸಂಸ್ಕೃತಿ ಪರಂಪರೆಗಳಿಗೂ ಮಹತ್ವಪಡೆದಿದೆ.

ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಯಾತ್ರಿಕ ಮೆಗಸ್ತನೀಸ್‌ ಮಧುರೆಗೆ ಭೇಟಿ ನೀಡಿದ್ದನು. ಆ ಬಳಿಕ ಗ್ರೀಸ್‌ ಮತ್ತು ರೋಂಗಳಿಂದ ವರ್ತಕರು ಆಗಮಿಸಿ ಅಲ್ಲಿನ ಪಾಂಡ್ಯ ದೊರೆಗಳೊಂದಿಗೆ ವ್ಯಾಪಾರ ಸಂಪರ್ಕ ಹೊಂದಿದ್ದರು.

ಮಧುರೈ ಕ್ರಿಸ್ತಶಕ 10ನೇ ಶತಮಾನದವರೆಗೂ ವೈಭವೋಪೇತವಾಗಿತ್ತು. ಆದರೆ ಮಧುರೆಯನ್ನು ಪಾಂಡ್ಯರ ಶತ್ರುಗಳಾದ ಚೋಳರು ವಶಪಡಿಸಿದುದರಿಂದ ತನ್ನ ವೈಭವವನ್ನು ಕಳಕೊಂಡಿತು. ಆ ಬಳಿಕ ಚೋಳರು, ಹಂಪೆಯ ವಿಜಯನಗರ ಅರಸರು, ನಾಯಕ ದೊರೆಗಳು ಆಳಿದರು. ತಿರುಮಲ ನಾಯಕನ ಕಾಲದಲ್ಲಿ ದೇವಸ್ಥಾನ ಮತ್ತೆ ಸಮೃದ್ಧಿಯಿಂದ ಕಂಗೊಳಿಸಿತು.ಕೊನೆಗೆ ಬ್ರಿಟಿಷರ ಸ್ವಾಧೀನಕ್ಕೆ ಬಂದಿತು .

ಸ್ವಾತಂತ್ರ್ಯಾನಂತರ ತಮಿಳ್ನಾಡು ಸರಕಾರದ ಆಡಳಿತಕ್ಕೊಳಪಟ್ಟಿತು. ಮಧುರೈ ಪ್ರದೇಶವು ಯಾನಮಲೈ( ಆನೆಪರ್ವತ), ನಾಗಮಲೈ(ಸರ್ಪಪರ್ವತ), ಪಶುಮಲೈ(ಬಸವಪರ್ವತ)ಗಳಿಂದ ಸುತ್ತುವರಿಯಲ್ಪಟ್ಟಿದೆ. ಜಾಜಿ ಮಲ್ಲಿಗೆ ಹೂವಿಗೆ ಪ್ರಸಿದ್ಧವಾಗಿದೆ.ದೇಶದ ಇತರ ಭಾಗಗಳಿಗೂ ಇಲ್ಲಿಂದ ಹೂವು ಸರಬರಾಜಾಗುತ್ತಿದೆ.

- ವಿಷ್ಣು ಭಾರದ್ವಾಜ್

Share this Story:

Follow Webdunia kannada