Select Your Language

Notifications

webdunia
webdunia
webdunia
webdunia

ಜಗಳ, ವಿವಾದ

ಜಗಳ, ವಿವಾದ
ಕನ್ನಡ ಚಿತ್ರರಂಗದಲ್ಲಿ ವಿವಾದವಿಲ್ಲದ ವರ್ಷವೇ ಇಲ್ಲ. ಈ ಸಂಪ್ರದಾಯ ಮುಂದುವರೆದಂತೆ 2007ರಲ್ಲಿ ಸಹಾ ಜಗಳ ನಡೆದಿತ್ತು. ಎಸ್. ನಾರಾಯಣ್ ಹಿರಿಯ ನಿರ್ದೇಶಕರು. ದುನಿಯಾ ಚಿತ್ರದ ಮೂಲಕ ಎಲ್ಲರ ಮನೆಮಾತಾಗಿದ್ದ ಆದ ವಿಜಯ್ ನಾಯಕನಾಗಿ ಅಭಿನಯಿಸಿದ ಚಿತ್ರದ ಬಿಡುಗಡೆ ಹಾಗೂ ಡಬ್ಬಿಂಗ್ ವಿಷಯದಲ್ಲಿ ಎದ್ದಿದ್ದ ವಿವಾದಕ್ಕೆ ಸಂಬಂಧಿಸಿದಂತೆ ವಿಜಯ್ ಮೇಲೆ ಒಂದು ವರ್ಷ ನಟಿಸದಂತೆ ಫಿಲಿಂಛೇಂಬರ್ ನಿರ್ಬಂಧ ವಿಧಿಸಿತ್ತು.

ಇನ್ನಿತರ ವಿವಾದಗಳೆಂದರೆ ಮುಂಗಾರುಮಳೆ ಚಿತ್ರದ ತಂಡದಲ್ಲಿ ಬಿರುಕು ಬಿಟ್ಟಿದೆ ಎಂಬ ಸುದ್ದಿ ಇದೆ. ದುನಿಯಾ ನಿರ್ಮಾಪಕರ ನಡುವೆ ಜಗಳ ನಡೆದಿದೆ ಎಂಬಮಾತಿದೆ. ಗಂಗಾಕಾವೇರಿ ಚಿತ್ರದಿಂದ ಪೂಜಾಗಾಂಧಿ ಹೊರಬಂದರು, ಹರಿಪ್ರಿಯಾ ಮನಸುಗಳು ಮಾತು ಮಧುರ ಚಿತ್ರ ಷೂಟಿಂಗ್‌ನಲ್ಲಿ ಸಾಕಷ್ಟು ತೊಂದರೆ ಕೊಟ್ಟರು.

ಟೀನ್ಟೀನ್ ಚಿತ್ರದ ಕಥೆ ಕದ್ದು ಮೊಗ್ಗಿನ ಮನಸ್ಸು ತಯಾರಾಗುತ್ತಿದೆ ಎಂಬ ರಾಜೇಂದ್ರ ಸಿಂಗ್ ಬಾಬು ಅವರ ಅನುಮಾನ, ಈ ಬಂಧನ ಹಾಗೂ ಗಜ ಚಿತ್ರಗಳು ರೀಮೇಕ್ ಎಂದು ವಾರ್ತಾ ಇಲಾಖೆ ತೆರಿಗೆ ವಿನಾಯಿತಿ ತಡೆ ಹಿಡಿದಿದ್ದು ವಿವಾದಗಳ ವಿಶೇಷಗಳು.

Share this Story:

Follow Webdunia kannada